<p>ಹುನಗುಂದ: ಆಜಾದ್ ನಗರದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನವಾಗಿದ್ದು, ₹2.30 ಲಕ್ಷ ಮೌಲ್ಯದ ಬಂಗಾರ ಮತ್ತು ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.</p>.<p>ಅಜಾದ್ ನಗರದಲ್ಲಿ ತಡರಾತ್ರಿ ಕಾನ್ಸ್ಟೆಬಲ್ ಮನೆಯೂ ಸೇರಿದಂತೆ ಒಟ್ಟು ನಾಲ್ಕು ಮನೆಗಳ ಬೀಗ ಮುರಿದಿದ್ದು, ಅವುಗಳಲ್ಲಿ ಎರಡು ಮನೆಗಳಲ್ಲಿ ಬಂಗಾರ ಮತ್ತು ನಗದು ಕಳ್ಳತನವಾಗಿದೆ. ನಗರದ ಅಜಮೀರ್ ಮನಿಯಾರ್ ಅವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದು ಬಿರುವಿನಲ್ಲಿಟ್ಟಿದ್ದ 8 ಗ್ರಾಂ ಬಂಗಾರ, 290 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹20,000 ನಗದು ಕಳ್ಳತನ ಮಾಡಲಾಗಿದೆ.</p>.<p>ನಗರದ ಮಾನ್ವವರ್ ಪಾಷಾ ಇನಾಮಾದರ ಎಂಬುವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದ ಕಳ್ಳರು ಬಿರುವಿನಲ್ಲಿಟ್ಟಿದ್ದ 5 ಗ್ರಾಂ ಬಂಗಾರದ ಕಿವಿಯ ರಿಂಗ್ ಹಾಗೂ ₹1.20 ಲಕ್ಷ ನಗದು ದೋಚಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳ್ಳತನಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.</p>.<p>ಶನಿವಾರ ತಡ ರಾತ್ರಿ ಮೂವರು ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.</p>.<p>ನಾಲ್ಕು ಪ್ರಕರಣ: ಆಜಾದ್ ನಗರದಲ್ಲಿ ಕಳ್ಳತನ ಆಗುವುದು ಇದೇ ಮೊದಲಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ನಾಲ್ಕು ಪ್ರಕರಣಗಳು ನಡೆದಿವೆ. ಅದರಲ್ಲಿಎರಡು ಬಾರಿ ಪೊಲೀಸರ ಮನೆಗಳಲ್ಲಿ ಕಳ್ಳತನ ಆಗಿದೆ. ನಿರಂತರ ಕಳ್ಳತನ ನಡೆಯುತ್ತಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-19-598170510</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುನಗುಂದ: ಆಜಾದ್ ನಗರದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನವಾಗಿದ್ದು, ₹2.30 ಲಕ್ಷ ಮೌಲ್ಯದ ಬಂಗಾರ ಮತ್ತು ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.</p>.<p>ಅಜಾದ್ ನಗರದಲ್ಲಿ ತಡರಾತ್ರಿ ಕಾನ್ಸ್ಟೆಬಲ್ ಮನೆಯೂ ಸೇರಿದಂತೆ ಒಟ್ಟು ನಾಲ್ಕು ಮನೆಗಳ ಬೀಗ ಮುರಿದಿದ್ದು, ಅವುಗಳಲ್ಲಿ ಎರಡು ಮನೆಗಳಲ್ಲಿ ಬಂಗಾರ ಮತ್ತು ನಗದು ಕಳ್ಳತನವಾಗಿದೆ. ನಗರದ ಅಜಮೀರ್ ಮನಿಯಾರ್ ಅವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದು ಬಿರುವಿನಲ್ಲಿಟ್ಟಿದ್ದ 8 ಗ್ರಾಂ ಬಂಗಾರ, 290 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹20,000 ನಗದು ಕಳ್ಳತನ ಮಾಡಲಾಗಿದೆ.</p>.<p>ನಗರದ ಮಾನ್ವವರ್ ಪಾಷಾ ಇನಾಮಾದರ ಎಂಬುವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದ ಕಳ್ಳರು ಬಿರುವಿನಲ್ಲಿಟ್ಟಿದ್ದ 5 ಗ್ರಾಂ ಬಂಗಾರದ ಕಿವಿಯ ರಿಂಗ್ ಹಾಗೂ ₹1.20 ಲಕ್ಷ ನಗದು ದೋಚಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳ್ಳತನಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.</p>.<p>ಶನಿವಾರ ತಡ ರಾತ್ರಿ ಮೂವರು ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.</p>.<p>ನಾಲ್ಕು ಪ್ರಕರಣ: ಆಜಾದ್ ನಗರದಲ್ಲಿ ಕಳ್ಳತನ ಆಗುವುದು ಇದೇ ಮೊದಲಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ನಾಲ್ಕು ಪ್ರಕರಣಗಳು ನಡೆದಿವೆ. ಅದರಲ್ಲಿಎರಡು ಬಾರಿ ಪೊಲೀಸರ ಮನೆಗಳಲ್ಲಿ ಕಳ್ಳತನ ಆಗಿದೆ. ನಿರಂತರ ಕಳ್ಳತನ ನಡೆಯುತ್ತಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-19-598170510</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>