<p>ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎಂಟನೇ ದಿನವಾದ ಬುಧವಾರವೂ ಮುಂದುವರಿದಿದೆ. ತಾಲ್ಲೂಕಿನ ರೈತ ಸಂಘದ ಮುಖಂಡರು ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ಯವರು ಧರಣಿ ನಿರತರಿಗೆ ಬೆಂಬಲ ವ್ಯಕ್ತಪಡಿಸಿದರು.</p>.<p>ಹುನಗುಂದ ನಗರದ ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ‘ಗ್ರಾಮದ ಸಂತ್ರಸ್ತರು ಕಳೆದ 18 ವರ್ಷಗಳಿಂದ ಮನೆ, ಆಸ್ತಿ ಕಳೆದುಕೊಂಡು ವಿಷ ಜಂತುಗಳು ಇರುವ ಶೆಡ್ಗಳಲ್ಲಿ ವಾಸಿಸುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಜನರು ಮತದಾನದ ಮೌಲ್ಯ ಅರಿಯಬೇಕು. ಅಂದಾಗ ನಾವು ಉದ್ಧಾರವಾಗುತ್ತೇವೆ. ಈ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ನಿಮ್ಮೊಂದಿಗೆ ನಾವು ಇರುತ್ತೇವೆ’ ಎಂದು ಭರವಸೆ ನೀಡಿದರು.</p>.<p>ರೈತ ಸಂಘದ ಮುಖಂಡ ಮಲ್ಲನಗೌಡ ತುಂಬದ ಮಾತನಾಡಿ, ‘ಸಂತ್ರಸ್ತರು ವಾಸಿಸುವ ಶೆಡ್ಗಳು ಶಿಥಿಲಾವಸ್ಥೆಯಿಂದ ಬೀಳುವ ಹಂತದಲ್ಲಿವೆ. 18 ವರ್ಷಗಳಿಂದ ಸಂತ್ರಸ್ತರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಪುನರ್ವಸತಿ ಕೇಂದ್ರದಲ್ಲಿ ವಿದ್ಯುತ್, ನೀರು ಹಾಗೂ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು. ಸಂತ್ರಸ್ತರಿಗೆ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾವು ಸಹ ಹೋರಾಟದಲ್ಲಿ ಕೈಜೋಡಿಸುತ್ತೇವೆ’ ಎಂದರು.</p>.<p>ಮುಖಂಡರಾದ ಬಸನಗೌಡ ದಾದ್ಮಿ, ಮಲ್ಲಣ್ಣ ಕುಂಟೋಜಿ, ಕೃಷ್ಣಾ ಜಾಲಿಹಾಳ, ಬಸವರಾಜ ಬಡ್ಡಿ, ಕಲ್ಲಪ್ಪ ಆನೇಹೊಸೂರ, ಭೀಮಪ್ಪ ಅಡಿಹಾಳ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಕಲ್ಲಪ್ಪ ಬೇನಾಳ, ಹನಮಂತ ಕುರಿ, ಸಂಗಮೇಶ ಹಡಪದ, ಸರೋಜಮ್ಮ ಹಿರೇಮಠ, ನೀಲವ್ವ ಮಾಗಿ, ಮಲ್ಲಮ್ಮ ಗಡ್ಡಿಮಠ, ರೇಣುಕಾ ವಾಲಿಕಾರ, ಹೇಮವ್ವ ವಾಲಿಕಾರ, ಮಹಾದೇವಿ ತೋಟಗೇರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-19-1280499744</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎಂಟನೇ ದಿನವಾದ ಬುಧವಾರವೂ ಮುಂದುವರಿದಿದೆ. ತಾಲ್ಲೂಕಿನ ರೈತ ಸಂಘದ ಮುಖಂಡರು ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ಯವರು ಧರಣಿ ನಿರತರಿಗೆ ಬೆಂಬಲ ವ್ಯಕ್ತಪಡಿಸಿದರು.</p>.<p>ಹುನಗುಂದ ನಗರದ ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ‘ಗ್ರಾಮದ ಸಂತ್ರಸ್ತರು ಕಳೆದ 18 ವರ್ಷಗಳಿಂದ ಮನೆ, ಆಸ್ತಿ ಕಳೆದುಕೊಂಡು ವಿಷ ಜಂತುಗಳು ಇರುವ ಶೆಡ್ಗಳಲ್ಲಿ ವಾಸಿಸುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಜನರು ಮತದಾನದ ಮೌಲ್ಯ ಅರಿಯಬೇಕು. ಅಂದಾಗ ನಾವು ಉದ್ಧಾರವಾಗುತ್ತೇವೆ. ಈ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ನಿಮ್ಮೊಂದಿಗೆ ನಾವು ಇರುತ್ತೇವೆ’ ಎಂದು ಭರವಸೆ ನೀಡಿದರು.</p>.<p>ರೈತ ಸಂಘದ ಮುಖಂಡ ಮಲ್ಲನಗೌಡ ತುಂಬದ ಮಾತನಾಡಿ, ‘ಸಂತ್ರಸ್ತರು ವಾಸಿಸುವ ಶೆಡ್ಗಳು ಶಿಥಿಲಾವಸ್ಥೆಯಿಂದ ಬೀಳುವ ಹಂತದಲ್ಲಿವೆ. 18 ವರ್ಷಗಳಿಂದ ಸಂತ್ರಸ್ತರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಪುನರ್ವಸತಿ ಕೇಂದ್ರದಲ್ಲಿ ವಿದ್ಯುತ್, ನೀರು ಹಾಗೂ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು. ಸಂತ್ರಸ್ತರಿಗೆ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾವು ಸಹ ಹೋರಾಟದಲ್ಲಿ ಕೈಜೋಡಿಸುತ್ತೇವೆ’ ಎಂದರು.</p>.<p>ಮುಖಂಡರಾದ ಬಸನಗೌಡ ದಾದ್ಮಿ, ಮಲ್ಲಣ್ಣ ಕುಂಟೋಜಿ, ಕೃಷ್ಣಾ ಜಾಲಿಹಾಳ, ಬಸವರಾಜ ಬಡ್ಡಿ, ಕಲ್ಲಪ್ಪ ಆನೇಹೊಸೂರ, ಭೀಮಪ್ಪ ಅಡಿಹಾಳ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಕಲ್ಲಪ್ಪ ಬೇನಾಳ, ಹನಮಂತ ಕುರಿ, ಸಂಗಮೇಶ ಹಡಪದ, ಸರೋಜಮ್ಮ ಹಿರೇಮಠ, ನೀಲವ್ವ ಮಾಗಿ, ಮಲ್ಲಮ್ಮ ಗಡ್ಡಿಮಠ, ರೇಣುಕಾ ವಾಲಿಕಾರ, ಹೇಮವ್ವ ವಾಲಿಕಾರ, ಮಹಾದೇವಿ ತೋಟಗೇರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-19-1280499744</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>