<p>ಹುಣಸಗಿ: ‘ಬಸವಣ್ಣನವರ ತತ್ವ ಹಾಗೂ ವಚನಗಳ ಸಾರ ತಿಳಿದಕೊಂಡರೆ ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಸಾಧ್ಯ’ ಎಂದು ಶರಣ ಎನ್.ಆರ್.ಪಾಟೀಲ ಹೇಳಿದರು.</p>.<p>ಹುಣಸಗಿ ಪಟ್ಟಣದಲ್ಲಿ ಶಿವಕುಮಾರ ಬಂಡೋಳಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಪಠಣ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ಸಮ ಸಮಾಜ ನಿರ್ಮಾಣದ ಕನಸಿಕೊಂಡಿಗೆ ಎಲ್ಲ ಶ್ರಮಿಕ ವರ್ಗದ ಜನರಿಗೂ ಭಕ್ತಿಯ ಜೊತೆಗೆ ಧರ್ಮ ಮಾರ್ಗದ ತಿರುಳನ್ನು ತಿಳಿಸಿಕೊಟ್ಟವರು. ಶರಣ ತತ್ವದಲ್ಲಿ ಎಲ್ಲರೂ ಸಮಾನರು ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.</p>.<p>ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು.</p>.<p>ಈ ಸಂದರ್ಭದಲ್ಲಿ ಪಾರ್ವತಿ ಮೇಲಿನಮನಿ, ವಿಜಯಲಕ್ಷ್ಮಿ ದೇಸಾಯಿ, ಲಲೀತಾ ಚಿಂಚೋಳಿ, ಕವಿತಾ ರೇವಡಿ, ರೇಖಾ ಬ್ಯಾಕೋಡ, ಶಶಿಕಲಾ ಹಿರೇಮಠ, ಸಂಗಮ್ಮ ಸಜ್ಜನ, ರಂಗಮ್ಮ ಬಿರಾದಾರ, ಕವಿತಾ ಪಡಶೆಟ್ಟಿ, ಸಂಗಮ್ಮ ಬಂಡೋಳಿ, ವಿಜಯಲಕ್ಷ್ಮಿ ತಂಬಾಕಿ ಸೇರಿದಂತೆ ಇತರರು ಇದ್ದರು.</p>.<p>ಬೋರಮ್ಮ ಯಡಿಯೂರಮಠ ಪ್ರಾರ್ಥಿಸಿದರು. ಶರಣಮ್ಮ ಬಂಡೊಳ್ಳಿ ಸ್ವಾಗತಿಸಿದರು. ಅಕ್ಕಮಹಾದೇವಿ ನಿರೂಪಿಸಿದರು. ನಾಗನಗೌಡ ಪಾಟೀಲ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-30-1671308507</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ‘ಬಸವಣ್ಣನವರ ತತ್ವ ಹಾಗೂ ವಚನಗಳ ಸಾರ ತಿಳಿದಕೊಂಡರೆ ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಸಾಧ್ಯ’ ಎಂದು ಶರಣ ಎನ್.ಆರ್.ಪಾಟೀಲ ಹೇಳಿದರು.</p>.<p>ಹುಣಸಗಿ ಪಟ್ಟಣದಲ್ಲಿ ಶಿವಕುಮಾರ ಬಂಡೋಳಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಪಠಣ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ಸಮ ಸಮಾಜ ನಿರ್ಮಾಣದ ಕನಸಿಕೊಂಡಿಗೆ ಎಲ್ಲ ಶ್ರಮಿಕ ವರ್ಗದ ಜನರಿಗೂ ಭಕ್ತಿಯ ಜೊತೆಗೆ ಧರ್ಮ ಮಾರ್ಗದ ತಿರುಳನ್ನು ತಿಳಿಸಿಕೊಟ್ಟವರು. ಶರಣ ತತ್ವದಲ್ಲಿ ಎಲ್ಲರೂ ಸಮಾನರು ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.</p>.<p>ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು.</p>.<p>ಈ ಸಂದರ್ಭದಲ್ಲಿ ಪಾರ್ವತಿ ಮೇಲಿನಮನಿ, ವಿಜಯಲಕ್ಷ್ಮಿ ದೇಸಾಯಿ, ಲಲೀತಾ ಚಿಂಚೋಳಿ, ಕವಿತಾ ರೇವಡಿ, ರೇಖಾ ಬ್ಯಾಕೋಡ, ಶಶಿಕಲಾ ಹಿರೇಮಠ, ಸಂಗಮ್ಮ ಸಜ್ಜನ, ರಂಗಮ್ಮ ಬಿರಾದಾರ, ಕವಿತಾ ಪಡಶೆಟ್ಟಿ, ಸಂಗಮ್ಮ ಬಂಡೋಳಿ, ವಿಜಯಲಕ್ಷ್ಮಿ ತಂಬಾಕಿ ಸೇರಿದಂತೆ ಇತರರು ಇದ್ದರು.</p>.<p>ಬೋರಮ್ಮ ಯಡಿಯೂರಮಠ ಪ್ರಾರ್ಥಿಸಿದರು. ಶರಣಮ್ಮ ಬಂಡೊಳ್ಳಿ ಸ್ವಾಗತಿಸಿದರು. ಅಕ್ಕಮಹಾದೇವಿ ನಿರೂಪಿಸಿದರು. ನಾಗನಗೌಡ ಪಾಟೀಲ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-30-1671308507</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>