<p>ಇಳಕಲ್: ‘ನಗರದ 3ನೇ ವಾರ್ಡ್ಗೆ 20 ದಿನಗಳಿಂದ ನೀರು ಬಿಟ್ಟಿಲ್ಲ. 2 ದಿನಗಳಲ್ಲಿ ನೀರು ಪೂರೈಸದಿದ್ದರೆ ನಗರಸಭೆ ಎದುರು ಧರಣಿ ಮಾಡುತ್ತೇವೆ’ ಎಂದು ಬಿಜೆಪಿ ಮುಖಂಡ ವೆಂಕಟೇಶ ಪೋತಾ ಎಚ್ಚರಿಸಿದರು.</p>.<p>ಅವರು ಮಂಗಳವಾರ ನಗರಸಭೆ ಎದುರು ನೀರು ಪೂರೈಸುವಂತೆ ಮಹಿಳೆಯರು ಸೇರಿದಂತೆ ನೂರಾರು ನಾಗರಿಕರು ಮಾಡುತ್ತಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ಶಾಸಕರು ತಮಗೆ 3 ಮತ್ತು 4ನೇ ವಾರ್ಡ್ನಲ್ಲಿ ವೋಟ್ ಬರುವುದಿಲ್ಲ ಎಂಬ ಕಾರಣಕ್ಕೆ ನೀರು ಕೊಡುತ್ತಿಲ್ಲ. ಜೂನಿಯರ್ ಕಾಲೇಜಿನ ಹತ್ತಿರ ಹಿಂದೆ ನಮ್ಮ ಸರ್ಕಾರ ಮಂಜೂರು ಮಾಡಿದ್ದ ಓವರ್ ಹೆಡ್ ಟ್ಯಾಂಕ್ ನಿರ್ಮಾಣವನ್ನು ಸ್ಥಗಿತಗೊಳಿಸಿ ದ್ವೇಷ ಸಾಧಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ನಾವು ಯಾವುದೇ ಬೆದರಿಕೆ, ಒತ್ತಡಕ್ಕೆ ಹೆದರಲ್ಲ. ಬಗ್ಗಲ್ಲ. ಸರಿಯಾಗಿ ನೀರು ಪೂರೈಸದಿದ್ದರೇ ನಗರದ ಎಲ್ಲ ಭಾಗದ ಜನರನ್ನು ಸೇರಿಸಿ ನಗರಸಭೆ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.</p>.<p>‘ನಮಗೆ ತಿಂಗಳಿಂದ ನೀರಿಲ್ಲ. ನಿದ್ದೆ ಇಲ್ಲ. ಕೆಲಸವೂ ಇಲ್ಲ. ನಮಗೆ ಸಾಕಾಗಿದೆ. ನೀರಿಗಾಗಿ ಇನ್ನೊಂದು ದಿನ ಕಾಯ್ತೀವಿ. ಬರದಿದ್ದರೇ ನಗರಸಭೆ ಎದುರು ಕುಳಿತು ತೀವ್ರ ಹೋರಾಟ ಮಾಡುತ್ತೇವೆ’ ಎಂದು ಮಹಿಳೆಯೊಬ್ಬಳು ಹೇಳಿದರು.</p>.<p>ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ನಗರಸಭೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ನೀರು ಸರಬರಾಜು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಳೆಯೊಳಗೆ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಹಿಂದೂ ಸೇವಾ ಟ್ರಸ್ಟ್ನ ಮುಖಂಡ ಪರಶುರಾಮ ಬಿಸಲದಿನ್ನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-19-840018027</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಳಕಲ್: ‘ನಗರದ 3ನೇ ವಾರ್ಡ್ಗೆ 20 ದಿನಗಳಿಂದ ನೀರು ಬಿಟ್ಟಿಲ್ಲ. 2 ದಿನಗಳಲ್ಲಿ ನೀರು ಪೂರೈಸದಿದ್ದರೆ ನಗರಸಭೆ ಎದುರು ಧರಣಿ ಮಾಡುತ್ತೇವೆ’ ಎಂದು ಬಿಜೆಪಿ ಮುಖಂಡ ವೆಂಕಟೇಶ ಪೋತಾ ಎಚ್ಚರಿಸಿದರು.</p>.<p>ಅವರು ಮಂಗಳವಾರ ನಗರಸಭೆ ಎದುರು ನೀರು ಪೂರೈಸುವಂತೆ ಮಹಿಳೆಯರು ಸೇರಿದಂತೆ ನೂರಾರು ನಾಗರಿಕರು ಮಾಡುತ್ತಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ಶಾಸಕರು ತಮಗೆ 3 ಮತ್ತು 4ನೇ ವಾರ್ಡ್ನಲ್ಲಿ ವೋಟ್ ಬರುವುದಿಲ್ಲ ಎಂಬ ಕಾರಣಕ್ಕೆ ನೀರು ಕೊಡುತ್ತಿಲ್ಲ. ಜೂನಿಯರ್ ಕಾಲೇಜಿನ ಹತ್ತಿರ ಹಿಂದೆ ನಮ್ಮ ಸರ್ಕಾರ ಮಂಜೂರು ಮಾಡಿದ್ದ ಓವರ್ ಹೆಡ್ ಟ್ಯಾಂಕ್ ನಿರ್ಮಾಣವನ್ನು ಸ್ಥಗಿತಗೊಳಿಸಿ ದ್ವೇಷ ಸಾಧಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ನಾವು ಯಾವುದೇ ಬೆದರಿಕೆ, ಒತ್ತಡಕ್ಕೆ ಹೆದರಲ್ಲ. ಬಗ್ಗಲ್ಲ. ಸರಿಯಾಗಿ ನೀರು ಪೂರೈಸದಿದ್ದರೇ ನಗರದ ಎಲ್ಲ ಭಾಗದ ಜನರನ್ನು ಸೇರಿಸಿ ನಗರಸಭೆ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.</p>.<p>‘ನಮಗೆ ತಿಂಗಳಿಂದ ನೀರಿಲ್ಲ. ನಿದ್ದೆ ಇಲ್ಲ. ಕೆಲಸವೂ ಇಲ್ಲ. ನಮಗೆ ಸಾಕಾಗಿದೆ. ನೀರಿಗಾಗಿ ಇನ್ನೊಂದು ದಿನ ಕಾಯ್ತೀವಿ. ಬರದಿದ್ದರೇ ನಗರಸಭೆ ಎದುರು ಕುಳಿತು ತೀವ್ರ ಹೋರಾಟ ಮಾಡುತ್ತೇವೆ’ ಎಂದು ಮಹಿಳೆಯೊಬ್ಬಳು ಹೇಳಿದರು.</p>.<p>ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ನಗರಸಭೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ನೀರು ಸರಬರಾಜು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಳೆಯೊಳಗೆ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಹಿಂದೂ ಸೇವಾ ಟ್ರಸ್ಟ್ನ ಮುಖಂಡ ಪರಶುರಾಮ ಬಿಸಲದಿನ್ನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-19-840018027</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>