<p>ಜಮಖಂಡಿ: ಇಲ್ಲಿನ ಕೋರ್ಟ್ ಕಟ್ಟಡ ಹಳೆಯದಾಗಿದ್ದು, ಕೋರ್ಟ್ ಸ್ಥಳಾಂತರವಾಗಬೇಕಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕೋರ್ಟ್ ಸ್ಥಳಾಂತರ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತೆವೆ ಎಂದು ವಕೀಲರ ಸಂಘದ ನೂತನ ಅಧ್ಯಕ್ಷ ಎ.ಪಿ.ಕುಲಕರ್ಣಿ ಹೇಳಿದರು.</p>.<p>ವಕೀಲರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಿವಿಲ್ ಜಡ್ಜ್ ಪರೀಕ್ಷೆಯನ್ನು ನಮ್ಮ ಭಾಗದ ಹಲವಾರು ಕಿರಿಯ ವಕೀಲರು ಬರೆಯುತ್ತಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಹೆಚ್ಚು ಜನರು ಆಯ್ಕೆಯಾಗುತ್ತಿಲ್ಲ. ಆದ್ದರಿಂದ ಪರೀಕ್ಷೆ ತಯಾರಿ ಕುರಿತು ನಮ್ಮ ಸಂಘದಿಂದ ಕಾರ್ಯಾಗಾರ ಮಾಡಲಾಗುವದು ಎಂದರು.</p>.<p>ಕಾರ್ಯದರ್ಶಿ ವೈ ಕೆ. ಕಡಪಟ್ಟಿ ಮಾತನಾಡಿದರು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಭಟ್, ಜಂಟಿಕಾರ್ಯದರ್ಶಿ ಸಂಗಮೇಶ ಅಂಬಿ, ಸದಸ್ಯರಾದ ಶ್ರೀಶೈಲ ದಳವಾಯಿ, ಆರ್.ಎಂ.ಝಂಡೆ, ಎಸ್.ಕೆ.ಗೌಡಪ್ಪನವರ, ಯು.ಎಸ್.ಚರಕಿ, ಜೆ.ಆರ್.ಮಾಳಿ ಇದ್ದರು, ಆರ್.ಆರ್. ಕರೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿ.ಜಿ.ಅಳ್ಳಿಕಟ್ಟಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-19-502477858</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮಖಂಡಿ: ಇಲ್ಲಿನ ಕೋರ್ಟ್ ಕಟ್ಟಡ ಹಳೆಯದಾಗಿದ್ದು, ಕೋರ್ಟ್ ಸ್ಥಳಾಂತರವಾಗಬೇಕಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕೋರ್ಟ್ ಸ್ಥಳಾಂತರ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತೆವೆ ಎಂದು ವಕೀಲರ ಸಂಘದ ನೂತನ ಅಧ್ಯಕ್ಷ ಎ.ಪಿ.ಕುಲಕರ್ಣಿ ಹೇಳಿದರು.</p>.<p>ವಕೀಲರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಿವಿಲ್ ಜಡ್ಜ್ ಪರೀಕ್ಷೆಯನ್ನು ನಮ್ಮ ಭಾಗದ ಹಲವಾರು ಕಿರಿಯ ವಕೀಲರು ಬರೆಯುತ್ತಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಹೆಚ್ಚು ಜನರು ಆಯ್ಕೆಯಾಗುತ್ತಿಲ್ಲ. ಆದ್ದರಿಂದ ಪರೀಕ್ಷೆ ತಯಾರಿ ಕುರಿತು ನಮ್ಮ ಸಂಘದಿಂದ ಕಾರ್ಯಾಗಾರ ಮಾಡಲಾಗುವದು ಎಂದರು.</p>.<p>ಕಾರ್ಯದರ್ಶಿ ವೈ ಕೆ. ಕಡಪಟ್ಟಿ ಮಾತನಾಡಿದರು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಭಟ್, ಜಂಟಿಕಾರ್ಯದರ್ಶಿ ಸಂಗಮೇಶ ಅಂಬಿ, ಸದಸ್ಯರಾದ ಶ್ರೀಶೈಲ ದಳವಾಯಿ, ಆರ್.ಎಂ.ಝಂಡೆ, ಎಸ್.ಕೆ.ಗೌಡಪ್ಪನವರ, ಯು.ಎಸ್.ಚರಕಿ, ಜೆ.ಆರ್.ಮಾಳಿ ಇದ್ದರು, ಆರ್.ಆರ್. ಕರೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿ.ಜಿ.ಅಳ್ಳಿಕಟ್ಟಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-19-502477858</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>