<p><strong>ಜಮಖಂಡಿ:</strong> ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ನೀಡಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ ಎಂದು ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರ ಅತೀ ಕಡಿಮೆ ಶುಲ್ಕ ನಿಗದಿ ಮಾಡಿದೆ. ಆದರೆ ಸರ್ಕಾರದ ಆದೇಶವಿಲ್ಲದೆ ಸ್ಥಳೀಯ ಕಾಲೇಜು ಅಭಿವೃದ್ಧಿ ಸಮಿತಿ, ಸರ್ಕಾರ ನಿಗದಿ ಮಾಡಿದ ಶುಲ್ಕಕ್ಕಿಂತ ಐದು ಪಟ್ಟು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿದೆ.</p>.<p>ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪಡೆಯಲು ಸರ್ಕಾರ ನಿಗದಿ ಮಾಡಿರುವ ₹295 ಜೊತೆಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ₹1500 ಹಾಗೂ ಐಡಿ ಕಾರ್ಡ್ ಹೆಸರಿನಲ್ಲಿ ₹30 ಸೇರಿ ₹1825 ಅನ್ನು ವಿದ್ಯಾರ್ಥಿಗಳಿಂದ ತೆಗೆದುಕೊಳ್ಳುತ್ತಿದ್ದಾರೆ.</p>.<p>ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಶುಲ್ಕ ₹67, ಎನ್ಎಸ್ಎಸ್ ₹5, ರೇಂಜರ್ ಮತ್ತು ರೋವರ್ ₹50, ಶೌಚಾಲಯ ನಿರ್ವಹಣೆ ಶುಲ್ಕ ₹24, ವಿದ್ಯುತ್ ₹24, ಬಾವುಟ್ ಶುಲ್ಕ ₹40, ಅಂಕಪಟ್ಟಿ ಶುಲ್ಕ ₹50, ಭಾರತೀಯ ಸೇವಾದಳ ಶುಲ್ಕ ₹10, ಇತರೆ ಶುಲ್ಕ ₹25 ಸೇರಿ ಸರ್ಕಾರ ನಿಗದಿ ಮಾಡಿರುವ ₹295ಕ್ಕೆ ಮಾತ್ರ ರಶೀದಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಪಡೆಯುತ್ತಿರುವ ₹1500ಕ್ಕೆ ರಶೀದಿ ನೀಡದೆ ಇರುವುದು ಆಡಳಿತ ಮಂಡಳಿ ಮೇಲೆ ಅನುಮಾನ ಮೂಡಿಸುತ್ತಿದೆ.</p>.<p>ಪ್ರಥಮ ಪಿಯುಸಿ ಪ್ರವೇಶ ಪಡೆಯುತ್ತಿರುವ ಕೊಠಡಿಯಲ್ಲಿ ಶುಲ್ಕದ ಬಗ್ಗೆ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಪ್ರಾಚಾರ್ಯ ಎಸ್.ಆರ್.ನಾಯ್ಕೊಡಿ ಅವರನ್ನು ಕೇಳಿದರೆ ನಾನು ಬೇರೆಯವರಿಗೆ ಚಾರ್ಜ್ ನೀಡಿದ್ದೇನೆ ಎನ್ನುತ್ತಾರೆ, ಚಾರ್ಜ್ ತೆಗೆದುಕೊಂಡ ಪ್ರಾಚಾರ್ಯ ಬಿ.ಆರ್.ಶೇಗುಣಸಿ ಅವರನ್ನು ಕೇಳಿದರೆ, ಈಗಷ್ಟೇ ಅಧಿಕಾರ ವಹಿಸಿಕೊಂಡಿರುವೆ, ಶುಲ್ಕದ ಬಗ್ಗೆ ಗೊತ್ತಿಲ್ಲ ಎಂದು ಇಬ್ಬರೂ ಜಾರಿಕೊಳ್ಳುತ್ತಿದ್ದಾರೆ.</p>.<p>‘ಕಾಲೇಜು ಅಭಿವೃದ್ಧಿ ಸಮಿತಿಯಿಂದ ₹1500 ತೆಗೆದುಕೊಂಡು ಸರ್ಕಾರಕ್ಕೆ ಹಾಗೂ ಇನ್ನು ಕೆಲ ಇಲಾಖೆಗಳಿಗೆ ಪ್ರಾಚಾರ್ಯರು ನೀಡುತ್ತಾರೆ, ನಮ್ಮ ಅಭಿವೃದ್ಧಿ ಸಮಿತಿಗೆ ಕಡಿಮೆ ಹಣ ಉಳಿಯುತ್ತದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಮಲ್ಲಪ್ಪ ಹಂಚಿನಾಳ ತಿಳಿಸಿದರು.</p>.<p>‘ಕಾಲೇಜು ಅಭಿವೃದ್ಧಿ ಸಮಿತಿಗೆ ದೇಣಿಗೆಯಾಗಿ ಹಣ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಆದೇಶ ಇಲ್ಲ, ಸ್ಥಳೀಯವಾಗಿ ಠರಾವು ಪಾಸ್ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದೇವೆ. ಕಾಲೇಜು ಪ್ರಾರಂಭವಾದ ನಂತರ ರಶೀದಿ ನೀಡುತ್ತೇವೆ’ ಎನ್ನುತ್ತಾರೆ ಪ್ರಾಚಾರ್ಯ ಎಸ್.ಆರ್.ನಾಯ್ಕೊಡಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-1929352072</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ನೀಡಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ ಎಂದು ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರ ಅತೀ ಕಡಿಮೆ ಶುಲ್ಕ ನಿಗದಿ ಮಾಡಿದೆ. ಆದರೆ ಸರ್ಕಾರದ ಆದೇಶವಿಲ್ಲದೆ ಸ್ಥಳೀಯ ಕಾಲೇಜು ಅಭಿವೃದ್ಧಿ ಸಮಿತಿ, ಸರ್ಕಾರ ನಿಗದಿ ಮಾಡಿದ ಶುಲ್ಕಕ್ಕಿಂತ ಐದು ಪಟ್ಟು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿದೆ.</p>.<p>ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪಡೆಯಲು ಸರ್ಕಾರ ನಿಗದಿ ಮಾಡಿರುವ ₹295 ಜೊತೆಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ₹1500 ಹಾಗೂ ಐಡಿ ಕಾರ್ಡ್ ಹೆಸರಿನಲ್ಲಿ ₹30 ಸೇರಿ ₹1825 ಅನ್ನು ವಿದ್ಯಾರ್ಥಿಗಳಿಂದ ತೆಗೆದುಕೊಳ್ಳುತ್ತಿದ್ದಾರೆ.</p>.<p>ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಶುಲ್ಕ ₹67, ಎನ್ಎಸ್ಎಸ್ ₹5, ರೇಂಜರ್ ಮತ್ತು ರೋವರ್ ₹50, ಶೌಚಾಲಯ ನಿರ್ವಹಣೆ ಶುಲ್ಕ ₹24, ವಿದ್ಯುತ್ ₹24, ಬಾವುಟ್ ಶುಲ್ಕ ₹40, ಅಂಕಪಟ್ಟಿ ಶುಲ್ಕ ₹50, ಭಾರತೀಯ ಸೇವಾದಳ ಶುಲ್ಕ ₹10, ಇತರೆ ಶುಲ್ಕ ₹25 ಸೇರಿ ಸರ್ಕಾರ ನಿಗದಿ ಮಾಡಿರುವ ₹295ಕ್ಕೆ ಮಾತ್ರ ರಶೀದಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಪಡೆಯುತ್ತಿರುವ ₹1500ಕ್ಕೆ ರಶೀದಿ ನೀಡದೆ ಇರುವುದು ಆಡಳಿತ ಮಂಡಳಿ ಮೇಲೆ ಅನುಮಾನ ಮೂಡಿಸುತ್ತಿದೆ.</p>.<p>ಪ್ರಥಮ ಪಿಯುಸಿ ಪ್ರವೇಶ ಪಡೆಯುತ್ತಿರುವ ಕೊಠಡಿಯಲ್ಲಿ ಶುಲ್ಕದ ಬಗ್ಗೆ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಪ್ರಾಚಾರ್ಯ ಎಸ್.ಆರ್.ನಾಯ್ಕೊಡಿ ಅವರನ್ನು ಕೇಳಿದರೆ ನಾನು ಬೇರೆಯವರಿಗೆ ಚಾರ್ಜ್ ನೀಡಿದ್ದೇನೆ ಎನ್ನುತ್ತಾರೆ, ಚಾರ್ಜ್ ತೆಗೆದುಕೊಂಡ ಪ್ರಾಚಾರ್ಯ ಬಿ.ಆರ್.ಶೇಗುಣಸಿ ಅವರನ್ನು ಕೇಳಿದರೆ, ಈಗಷ್ಟೇ ಅಧಿಕಾರ ವಹಿಸಿಕೊಂಡಿರುವೆ, ಶುಲ್ಕದ ಬಗ್ಗೆ ಗೊತ್ತಿಲ್ಲ ಎಂದು ಇಬ್ಬರೂ ಜಾರಿಕೊಳ್ಳುತ್ತಿದ್ದಾರೆ.</p>.<p>‘ಕಾಲೇಜು ಅಭಿವೃದ್ಧಿ ಸಮಿತಿಯಿಂದ ₹1500 ತೆಗೆದುಕೊಂಡು ಸರ್ಕಾರಕ್ಕೆ ಹಾಗೂ ಇನ್ನು ಕೆಲ ಇಲಾಖೆಗಳಿಗೆ ಪ್ರಾಚಾರ್ಯರು ನೀಡುತ್ತಾರೆ, ನಮ್ಮ ಅಭಿವೃದ್ಧಿ ಸಮಿತಿಗೆ ಕಡಿಮೆ ಹಣ ಉಳಿಯುತ್ತದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಮಲ್ಲಪ್ಪ ಹಂಚಿನಾಳ ತಿಳಿಸಿದರು.</p>.<p>‘ಕಾಲೇಜು ಅಭಿವೃದ್ಧಿ ಸಮಿತಿಗೆ ದೇಣಿಗೆಯಾಗಿ ಹಣ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಆದೇಶ ಇಲ್ಲ, ಸ್ಥಳೀಯವಾಗಿ ಠರಾವು ಪಾಸ್ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದೇವೆ. ಕಾಲೇಜು ಪ್ರಾರಂಭವಾದ ನಂತರ ರಶೀದಿ ನೀಡುತ್ತೇವೆ’ ಎನ್ನುತ್ತಾರೆ ಪ್ರಾಚಾರ್ಯ ಎಸ್.ಆರ್.ನಾಯ್ಕೊಡಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-1929352072</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>