<p><strong>ಜಮಖಂಡಿ:</strong> ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದ್ದು, ಈರುಳ್ಳಿ ಬೆಳೆದ ರೈತ ಕಣ್ಣಿರು ಹಾಕುವಂತಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿ ದರ ₹ 400 ರಿಂದ ₹ 900 ಇದೆ. ಮಾರ್ಚ್ ತಿಂಗಳಲ್ಲಿ ದರ ₹ 1,500 ಇತ್ತು. ಆದರೆ ಕೆಲ ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿಲ್ಲ.</p>.<p>ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮರೆಗುದ್ದಿ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ರೈತರು ಈರುಳ್ಳಿ ಬೆಳೆದಿದ್ದಾರೆ, ರೈತರಿಗೆ ಈರುಳ್ಳಿ ಎಥೆಚ್ಚವಾಗಿ ಬೆಳೆದಿದೆ ಆದರೆ ದರ ಇಲ್ಲದಕ್ಕೆ ರೈತರಿಗೆ ನಿರಾಸೆಯಾಗಿದೆ.</p>.<p>ಒಂದು ಎಕರೆ ಈರುಳ್ಳಿ ನಾಟಿ ಮಾಡುವ ಸಂದರ್ಭದಲ್ಲಿ ಈರುಳ್ಳಿ ಸಸಿಗೆ ₹ 8 ಸಾವಿರದಿಂದ ₹ 10 ಸಾವಿರ, ನಾಟಿ ಮಾಡಲು ₹ 10 ಸಾವಿರದಿಂದ 12 ಸಾವಿರ, ಔಷದ, ಗೊಬ್ಬರ, ಕಸ ತೆಗೆಯಲು ಸೇರಿ ₹ 15 ಸಾವಿರದಿಂದ ₹ 20 ಸಾವಿರ ಹಾಗೂ ಬೆಳೆದ ಫಸಲನ್ನು ಕಿತ್ತು ಈರುಳ್ಳಿ ಕೊಯ್ದು ಸ್ವಚ್ಚತೆ ಮಾಡಲು ₹ 10 ಸಾವಿರದಿಂದ ₹ 15 ಸಾವಿರ ಖರ್ಚಾಗುತ್ತದೆ ಒಂದು ಎಕರೆ ಈರುಳ್ಳಿ ನಾಟಿಯಿಂದ ಫಸಲು ಬರುವವರೆಗೆ ₹ 60 ಸಾವಿರದಿಂದ ₹ 70 ಸಾವಿರ ಖರ್ಚಾಗುತ್ತದೆ’ ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ತಿಳಿಸಿದರು.</p>.<p>‘ಒಂದು ಎಕರೆ ಪ್ರದೇಶದಲ್ಲಿ ಒಳ್ಳೆಯ ಬೆಳೆ ಬಂದರೆ 100 ಕ್ವಿಂಟಲ್ಗೂ ಅಧಿಕ ಪ್ರಮಾಣದ ಈರುಳ್ಳಿ ಬೆಳೆಯುತ್ತೇವೆ. ಪ್ರತಿ ಕ್ವಿಂಟಲ್ ಇಂದಿನ ಬೆಲೆ ₹ 600 ರಿಂದ ₹ 800. ರೈತರಿಗೆ ಲಾಭ ಆಗುವದಿಲ್ಲ. ಆದ್ದರಿಂದ ಸರ್ಕಾರ ಸಹಾಯಧನ ನೀಡಬೇಕು. ಇಲ್ಲದಿದ್ದರೆ, ಬೆಳೆಯನ್ನು ಹೊಲದಲ್ಲಿ ಬಿಟ್ಟು ರೋಟರ ಹೊಡೆದರೆ ನೆಲಕ್ಕೆ ಗೊಬ್ಬರವಾಗುತ್ತದೆ’ ಎಂದು ರೈತ ಪ್ರದೀಪ ವಿವರಿಸಿದರು.</p>.<div><blockquote>ಸೆಪ್ಟೆಂಬರ್ನಲ್ಲಿ ಈರುಳ್ಳಿ ದರ ಏರಬಹುದು. ಅಲ್ಲಿವರೆಗೆ ಈರುಳ್ಳಿಯನ್ನು ಸಂಗ್ರಹಣಾ ಘಟಕದಲ್ಲಿ ಇಡಬಹುದು. ಘಟಕ ನಿರ್ಮಾಣಕ್ಕೆ ಇಲಾಖೆಯಿಂದ ₹ 1 ಲಕ್ಷದವರೆಗೆ ಸಹಾಯ ಧನ ನೀಡುತ್ತೇವೆ </blockquote><span class="attribution">-ಸಚಿನ ಮಾಚಕನೂರ, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದ್ದು, ಈರುಳ್ಳಿ ಬೆಳೆದ ರೈತ ಕಣ್ಣಿರು ಹಾಕುವಂತಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿ ದರ ₹ 400 ರಿಂದ ₹ 900 ಇದೆ. ಮಾರ್ಚ್ ತಿಂಗಳಲ್ಲಿ ದರ ₹ 1,500 ಇತ್ತು. ಆದರೆ ಕೆಲ ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿಲ್ಲ.</p>.<p>ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮರೆಗುದ್ದಿ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ರೈತರು ಈರುಳ್ಳಿ ಬೆಳೆದಿದ್ದಾರೆ, ರೈತರಿಗೆ ಈರುಳ್ಳಿ ಎಥೆಚ್ಚವಾಗಿ ಬೆಳೆದಿದೆ ಆದರೆ ದರ ಇಲ್ಲದಕ್ಕೆ ರೈತರಿಗೆ ನಿರಾಸೆಯಾಗಿದೆ.</p>.<p>ಒಂದು ಎಕರೆ ಈರುಳ್ಳಿ ನಾಟಿ ಮಾಡುವ ಸಂದರ್ಭದಲ್ಲಿ ಈರುಳ್ಳಿ ಸಸಿಗೆ ₹ 8 ಸಾವಿರದಿಂದ ₹ 10 ಸಾವಿರ, ನಾಟಿ ಮಾಡಲು ₹ 10 ಸಾವಿರದಿಂದ 12 ಸಾವಿರ, ಔಷದ, ಗೊಬ್ಬರ, ಕಸ ತೆಗೆಯಲು ಸೇರಿ ₹ 15 ಸಾವಿರದಿಂದ ₹ 20 ಸಾವಿರ ಹಾಗೂ ಬೆಳೆದ ಫಸಲನ್ನು ಕಿತ್ತು ಈರುಳ್ಳಿ ಕೊಯ್ದು ಸ್ವಚ್ಚತೆ ಮಾಡಲು ₹ 10 ಸಾವಿರದಿಂದ ₹ 15 ಸಾವಿರ ಖರ್ಚಾಗುತ್ತದೆ ಒಂದು ಎಕರೆ ಈರುಳ್ಳಿ ನಾಟಿಯಿಂದ ಫಸಲು ಬರುವವರೆಗೆ ₹ 60 ಸಾವಿರದಿಂದ ₹ 70 ಸಾವಿರ ಖರ್ಚಾಗುತ್ತದೆ’ ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ತಿಳಿಸಿದರು.</p>.<p>‘ಒಂದು ಎಕರೆ ಪ್ರದೇಶದಲ್ಲಿ ಒಳ್ಳೆಯ ಬೆಳೆ ಬಂದರೆ 100 ಕ್ವಿಂಟಲ್ಗೂ ಅಧಿಕ ಪ್ರಮಾಣದ ಈರುಳ್ಳಿ ಬೆಳೆಯುತ್ತೇವೆ. ಪ್ರತಿ ಕ್ವಿಂಟಲ್ ಇಂದಿನ ಬೆಲೆ ₹ 600 ರಿಂದ ₹ 800. ರೈತರಿಗೆ ಲಾಭ ಆಗುವದಿಲ್ಲ. ಆದ್ದರಿಂದ ಸರ್ಕಾರ ಸಹಾಯಧನ ನೀಡಬೇಕು. ಇಲ್ಲದಿದ್ದರೆ, ಬೆಳೆಯನ್ನು ಹೊಲದಲ್ಲಿ ಬಿಟ್ಟು ರೋಟರ ಹೊಡೆದರೆ ನೆಲಕ್ಕೆ ಗೊಬ್ಬರವಾಗುತ್ತದೆ’ ಎಂದು ರೈತ ಪ್ರದೀಪ ವಿವರಿಸಿದರು.</p>.<div><blockquote>ಸೆಪ್ಟೆಂಬರ್ನಲ್ಲಿ ಈರುಳ್ಳಿ ದರ ಏರಬಹುದು. ಅಲ್ಲಿವರೆಗೆ ಈರುಳ್ಳಿಯನ್ನು ಸಂಗ್ರಹಣಾ ಘಟಕದಲ್ಲಿ ಇಡಬಹುದು. ಘಟಕ ನಿರ್ಮಾಣಕ್ಕೆ ಇಲಾಖೆಯಿಂದ ₹ 1 ಲಕ್ಷದವರೆಗೆ ಸಹಾಯ ಧನ ನೀಡುತ್ತೇವೆ </blockquote><span class="attribution">-ಸಚಿನ ಮಾಚಕನೂರ, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>