ರಸ್ತೆಗಳು ನಿರ್ಜನವಾಗಿದ್ದು, ಅತಿ ವಿರಳವಾಗಿಯೂ ವಾಹನಗಳು ಓಡಾಟ ನಡೆಸಲಿಲ್ಲ. ಅಂಗಡಿ–ಮುಂಗಟ್ಟು ಮುಚ್ಚಿದ್ದು, ಬಸ್ ನಿಲ್ದಾಣ ಬಸ್ಗಳು ಹಾಗೂ ಜನರ ಸುಳಿವು ಇಲ್ಲದೇ ಬಿಕೊ ಎನ್ನುತ್ತಿದೆ. ರೈಲು ನಿಲ್ದಾಣವೂ ಕಳೆಗುಂದಿದೆ. ನವನಗರದ ವಾರದ ಸಂತೆಯೂ ರದ್ದುಗೊಂಡು ಅದರ ಕುರುಹೇ ಇಲ್ಲದಂತಾಗಿತ್ತು. ಸದಾ ವಾಹನ ದಟ್ಟಣೆಯಿಂದ ತುಂಬಿರುವ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಹುಬ್ಬಳ್ಳಿ ಸಂಪರ್ಕಿಸುವ ಸಮೀಪದ ಗದ್ದನಕೇರಿ ಕ್ರಾಸ್ನಲ್ಲಿ ಜೀವ ಕಳೆ ಇಲ್ಲವಾಗಿತ್ತು.