ಇಳಕಲ್ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, 12 ಶತಮಾನದ ಶರಣರಲ್ಲಿ ಮೇದಾರ ಕೇತಯ್ಯನವರು ಅಗ್ರಗಣ್ಯ ಸ್ಥಾನ ಪಡೆದಿದ್ದರು. ಕಾಯಕ ನಿಷ್ಠೆಯಿಂದ ಬಸವಣ್ಣನವರಿಗೆ ಪ್ರೀತಿ ಪಾತ್ರರಾಗಿದ್ದ ಸಮಾಜಕ್ಕೆ ಮೋಸ, ವಂಚನೆ ಎನ್ನುವ ಶಬ್ಧಗಳೇ ಗೊತ್ತಿಲ್ಲ ಎಂದರು.
ಕಮತಗಿಯ ವೀರೇಶ್ವರ ಸ್ವಾಮೀಜಿ ಹಾಗೂ ಚಿತ್ರದುರ್ಗ ಜಿಲ್ಲೆಯ ಮೇದಾರ ಗುರು ಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ಸರೋಜಾ ಪಾಟೀಲ, ಬಸವರಾಜ ದಾವಣಗೆರೆ, ಅಯ್ಯಪ್ಪ ಮೇದಾರ, ರಮೇಶ ಬುರುಡ ಇದ್ದರು.