<p><strong>ಕೆರೂರ:</strong> ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಪಟ್ಟಣದ ಗ್ರಾಮ ದೇವತೆಗಳ ಜಾತ್ರೆಗೆ ಕೆರೂರಿನ ಜನರು ಸಜ್ಜಾಗಿದ್ದು, ಏ.29 ರಂದು ಗ್ರಾಮದೇವತೆಗಳ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.</p>.<p>ಜಾತ್ರೆಗೆ ಬೃಹತ್ ರಥವು ಸಿದ್ದವಾ ಗಿದ್ದು, ಬೆಳಿಗ್ಗೆ ದೇವಸ್ಥಾನದಲ್ಲಿ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರಿಗೆ ವಿಶೇಷ ಪೂಜೆ, ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.</p>.<p>ಈ ಹಿಂದೆ ಸುಮಾರು ಒಂಬತ್ತು ವರ್ಷಗಳ ಹಿಂದೆ 2017ರಲ್ಲಿ ಪಟ್ಟಣದ ಗ್ರಾಮ ದೇವತೆಗಳ ರಥೋತ್ಸವವು ಅತ್ಯಂತ ಸಂಭ್ರಮದಿಂದ ಜರಗಿತ್ತು. ಈ ಜಾತ್ರೆಯು ಪಟ್ಟಣದ ಎಲ್ಲ ಸಮುದಾಯದ ಜನರು ಕೂಡಿಕೊಂಡು ಆಚರಿಸುವುದು ಒಂದು ವಿಶೇಷವಾಗಿದೆ.</p>.<p>ಏ.21 ರಂದು ಗುಳೆದ ಲಕ್ಕಮ್ಮ ಜಾತ್ರೆ ಮಾಡುವ ಮೂಲಕ ಜಾತ್ರಾ ಮಹೋ ತ್ಸವದ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.</p>.<p>ಏ.29 ರಂದು ಗ್ರಾಮ ದೇವತಗಳಾದ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರ ಮೆರವಣಿಗೆ ದೇವಸ್ಥಾನ ಗರ್ಭಗುಡಿಯಿಂದ ಹೊರಟು ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿ ಎ.ಆರ್.ಹಿರೇಮಠ ಹೈಸ್ಕೂಲ್ ಆವರಣದಲ್ಲಿ ಸ್ಥಾಪಿಸಿರುವ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುವುದು, ಸಂಜೆ 4.30ಕ್ಕೆ ಮಹಾರಥೋತ್ಸವವು ನಡೆಯಲಿದೆ.</p>.<p>ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವತಗಳ ಜಾತ್ರೆಯು ಪಟ್ಟಣದಲ್ಲಿ ಹಬ್ಬದ ವಾತಾ ವರಣ ನಿರ್ಮಾಣವಾಗಿದೆ,</p>.<p>ಜಾತ್ರೆಯ ಅಂಗವಾಗಿ ಪಟ್ಟಣದ ಜನರು ತಮ್ಮ ತಮ್ಮ ಮನೆಗಳಿಗೆ ಸುಣ್ಣ-ಬಣ್ಣಗಳನ್ನು ಬಳೆದ ಶೃಂಗಾರಗೊಳಿಸಿದ್ದಾರೆ.</p>.<p><strong>ಜಾತ್ರೆ ವಿಶೇಷ:</strong> ಈ ಬಾರಿ ಜಾತ್ರಾ ವಿಶೇಷವಾಗಿ ಗ್ರಾಮ ದೇವತೆಗಳಿಗೆ ರಥೋತ್ಸವ ದಿನದಂದು ಹೆಲಿಕಾಪ್ಟರ್ ಹಾಗೂ ಗಜರಾಜನ (ಆನೆ) ಮೂಲಕ ಪುಷ್ಪಾರ್ಚನೆ ನಡೆಯಲಿದೆ, ಜಾತ್ರೆಯಲ್ಲಿ ವಿವಿಧ ಬಗೆಯ ಮಂಗಲವಾದ್ಯ, ಕುದುರೆ ಕುಣಿತ, ಹಲಗಿ ಮೇಳ ಜರುಗಲಿದೆ.</p>.<p>ಪಟ್ಟಣದ ಗಾಯಕ ವೆಂಕಟೇಶ ಮೂರ್ತಿ ಶಿರೂರ ಅವರ ನೇತೃತ್ವದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ಏ.29 ಹಾಗೂ ಏ.30 ರಂದು ಎರಡು ದಿನಗಳು ರಸಮಂಜರಿ ನಡೆಯಲಿದೆ.</p>.<p>ಮೇ1 ರಂದು ಗ್ರಾಮ ದೇವತೆಗಳಿಗೆ ಪಟ್ಟಣದ ಎಲ್ಲ ಜನರು ನೈವೇದ್ಯ ಕೊಟ್ಟು ಇಷ್ಟಾರ್ಥ ಹರಕೆಗಳನ್ನು ನೆರವೇರಿಸುವ ಕಾರ್ಯ ನಡೆಯಲಿದೆ,</p>.<p>ಮೇ.2 ರಂದು ಸಾಯಂಕಾಲ 4 ಗಂಟೆಗೆ ಕರಬಾನ ಮಡಿಕೆ ಕಾರ್ಯಕ್ರಮ ಜರುಗಲಿದೆ.</p>.<p>ಮೇ.5 ರಂದು ಪುನಃ ಗ್ರಾಮ ದೇವತೆ ಯರಿಗೆ ಉಡಿ ತುಂಬುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.</p>.<div><blockquote>ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದ್ದು, ದ್ಯಾಮಮ್ಮ ಹಾಗೂ ದುರ್ಗಮ್ಮ ದೇವತೆಯರು ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸಿಲಿ, ಒಳ್ಳೆಯ ಮಳೆ- ಬೆಳೆ ನೀಡಿ ನಾಡಿಗೆ ಒಳಿತು ಮಾಡಲಿ </blockquote><span class="attribution">ಮಹೇಶ ಮುಗಳಿ, ಸ್ಥಳೀಯ ಅಡತಿ ವ್ಯಾಪಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಪಟ್ಟಣದ ಗ್ರಾಮ ದೇವತೆಗಳ ಜಾತ್ರೆಗೆ ಕೆರೂರಿನ ಜನರು ಸಜ್ಜಾಗಿದ್ದು, ಏ.29 ರಂದು ಗ್ರಾಮದೇವತೆಗಳ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.</p>.<p>ಜಾತ್ರೆಗೆ ಬೃಹತ್ ರಥವು ಸಿದ್ದವಾ ಗಿದ್ದು, ಬೆಳಿಗ್ಗೆ ದೇವಸ್ಥಾನದಲ್ಲಿ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರಿಗೆ ವಿಶೇಷ ಪೂಜೆ, ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.</p>.<p>ಈ ಹಿಂದೆ ಸುಮಾರು ಒಂಬತ್ತು ವರ್ಷಗಳ ಹಿಂದೆ 2017ರಲ್ಲಿ ಪಟ್ಟಣದ ಗ್ರಾಮ ದೇವತೆಗಳ ರಥೋತ್ಸವವು ಅತ್ಯಂತ ಸಂಭ್ರಮದಿಂದ ಜರಗಿತ್ತು. ಈ ಜಾತ್ರೆಯು ಪಟ್ಟಣದ ಎಲ್ಲ ಸಮುದಾಯದ ಜನರು ಕೂಡಿಕೊಂಡು ಆಚರಿಸುವುದು ಒಂದು ವಿಶೇಷವಾಗಿದೆ.</p>.<p>ಏ.21 ರಂದು ಗುಳೆದ ಲಕ್ಕಮ್ಮ ಜಾತ್ರೆ ಮಾಡುವ ಮೂಲಕ ಜಾತ್ರಾ ಮಹೋ ತ್ಸವದ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.</p>.<p>ಏ.29 ರಂದು ಗ್ರಾಮ ದೇವತಗಳಾದ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರ ಮೆರವಣಿಗೆ ದೇವಸ್ಥಾನ ಗರ್ಭಗುಡಿಯಿಂದ ಹೊರಟು ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿ ಎ.ಆರ್.ಹಿರೇಮಠ ಹೈಸ್ಕೂಲ್ ಆವರಣದಲ್ಲಿ ಸ್ಥಾಪಿಸಿರುವ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುವುದು, ಸಂಜೆ 4.30ಕ್ಕೆ ಮಹಾರಥೋತ್ಸವವು ನಡೆಯಲಿದೆ.</p>.<p>ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವತಗಳ ಜಾತ್ರೆಯು ಪಟ್ಟಣದಲ್ಲಿ ಹಬ್ಬದ ವಾತಾ ವರಣ ನಿರ್ಮಾಣವಾಗಿದೆ,</p>.<p>ಜಾತ್ರೆಯ ಅಂಗವಾಗಿ ಪಟ್ಟಣದ ಜನರು ತಮ್ಮ ತಮ್ಮ ಮನೆಗಳಿಗೆ ಸುಣ್ಣ-ಬಣ್ಣಗಳನ್ನು ಬಳೆದ ಶೃಂಗಾರಗೊಳಿಸಿದ್ದಾರೆ.</p>.<p><strong>ಜಾತ್ರೆ ವಿಶೇಷ:</strong> ಈ ಬಾರಿ ಜಾತ್ರಾ ವಿಶೇಷವಾಗಿ ಗ್ರಾಮ ದೇವತೆಗಳಿಗೆ ರಥೋತ್ಸವ ದಿನದಂದು ಹೆಲಿಕಾಪ್ಟರ್ ಹಾಗೂ ಗಜರಾಜನ (ಆನೆ) ಮೂಲಕ ಪುಷ್ಪಾರ್ಚನೆ ನಡೆಯಲಿದೆ, ಜಾತ್ರೆಯಲ್ಲಿ ವಿವಿಧ ಬಗೆಯ ಮಂಗಲವಾದ್ಯ, ಕುದುರೆ ಕುಣಿತ, ಹಲಗಿ ಮೇಳ ಜರುಗಲಿದೆ.</p>.<p>ಪಟ್ಟಣದ ಗಾಯಕ ವೆಂಕಟೇಶ ಮೂರ್ತಿ ಶಿರೂರ ಅವರ ನೇತೃತ್ವದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ಏ.29 ಹಾಗೂ ಏ.30 ರಂದು ಎರಡು ದಿನಗಳು ರಸಮಂಜರಿ ನಡೆಯಲಿದೆ.</p>.<p>ಮೇ1 ರಂದು ಗ್ರಾಮ ದೇವತೆಗಳಿಗೆ ಪಟ್ಟಣದ ಎಲ್ಲ ಜನರು ನೈವೇದ್ಯ ಕೊಟ್ಟು ಇಷ್ಟಾರ್ಥ ಹರಕೆಗಳನ್ನು ನೆರವೇರಿಸುವ ಕಾರ್ಯ ನಡೆಯಲಿದೆ,</p>.<p>ಮೇ.2 ರಂದು ಸಾಯಂಕಾಲ 4 ಗಂಟೆಗೆ ಕರಬಾನ ಮಡಿಕೆ ಕಾರ್ಯಕ್ರಮ ಜರುಗಲಿದೆ.</p>.<p>ಮೇ.5 ರಂದು ಪುನಃ ಗ್ರಾಮ ದೇವತೆ ಯರಿಗೆ ಉಡಿ ತುಂಬುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.</p>.<div><blockquote>ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದ್ದು, ದ್ಯಾಮಮ್ಮ ಹಾಗೂ ದುರ್ಗಮ್ಮ ದೇವತೆಯರು ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸಿಲಿ, ಒಳ್ಳೆಯ ಮಳೆ- ಬೆಳೆ ನೀಡಿ ನಾಡಿಗೆ ಒಳಿತು ಮಾಡಲಿ </blockquote><span class="attribution">ಮಹೇಶ ಮುಗಳಿ, ಸ್ಥಳೀಯ ಅಡತಿ ವ್ಯಾಪಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>