<p><strong>ಕೆರೂರ:</strong> ಪಟ್ಟಣದ ಚಿನ್ಮಯಿ ಘಟ್ಟದ ಅವರು ಭಾರತಿಯ ಸೇನೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೂ ಸೇನೆಯಲ್ಲಿ ಉನ್ನತ ಮಟ್ಟದ ಅಧಿಕಾರಿ ಆಗಬೇಕು ಎಂಬ ಅವರ ಕನಸು ನನಸಾಗಿದೆ. ಅವರು ಶೀಘ್ರವೇ ಬಿಹಾರದ ಗಯಾ ಪ್ರದೇಶದಲ್ಲಿ ತರಬೇತಿ ಪಡೆಯಲಿದ್ದಾರೆ.</p><p>ಬಾಗಲಕೋಟೆಯ ಬಸವೇಶ್ವರ ಇಂಟರ್ನ್ಯಾಶನಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು,<br>ಪ್ರೌಢಶಿಕ್ಷಣವನ್ನು ಬೆಂಗಳೂರಿನ ಶ್ರೀಚೇತನ ವಸತಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ರಾಜಸ್ತಾನದ ಕೋಕಾದಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿದ ಅವರು, ಜೈಪುರದ ಎನ್ಐಟಿ ಸಂಸ್ಥೆಯಲ್ಲಿ ಆರ್ಕಿಟೆಕ್ಚರ್ ಪದವಿ ಪಡೆದರು.</p><p>ಪದವಿ ಬಳಿಕ ದೆಹಲಿಯ ಪ್ರತಿಷ್ಠಿತ ಮಾರ್ಬಲ್ ಕಂಪನಿಯಲ್ಲಿ ಡಿಸೈನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತ ಎಸ್ಎಸ್ಸಿ ಟೆಕ್ ಪರೀಕ್ಷೆ ಪೂರ್ವ ತಯಾರಿ ನಡೆಸಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ವಿದ್ಯಾರ್ಥಿನಿಯು ಎಸ್ಎಸ್ಸಿ ಪರೀಕ್ಷೆಗೆ ಹಾಜರಾಗಿ, ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು.</p>. <p>ಚಿನ್ಮಯಿ ಅವರದ್ದು ವ್ಯಾಪರಸ್ಥರ ಕುಟುಂಬ. ತಂದೆ ಶಂಕರ ಘಟ್ಟದ ಮತ್ತು ತಾಯಿ ಗೌರಿ ಶಂಕರ ಘಟ್ಟದ ದಂಪತಿಗೆ ಮೂವರು ಪುತ್ರಿಯರು. ಮೂವರು ಉನ್ನತ ಶಿಕ್ಷಣ ಪಡೆದಿದ್ದಾರೆ.</p>. <p>‘ನಾನು ಸೇನಾಧಿಕಾರಿ ಆಗಿ ಆಯ್ಕೆಯಾಗಲು ತಾಯಿ ಪ್ರೇರಣೆ ಆಗಿದ್ದಾರೆ. ಊರಿನ ಪ್ರಮುಖರು ಮತ್ತು ಮಾಜಿ ಸೇನಾಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಮಾರ್ಗದರ್ಶನ ನೀಡಿ ನನಗೆ ಪ್ರೋತ್ಸಾಹಿಸಿದರು. ಊರಿನ ಜನರೆಲ್ಲರೂ ನನ್ನನ್ನು ಅಭಿನಂದಿಸುತ್ತಿರುವುದು ಖುಷಿ ತಂದಿದೆ. ಮಾರ್ಚ್ 26ರಂದು ಬಿಹಾರದ ಗಯಾ ಪ್ರದೇಶದ ಸೇನಾ ತರಬೇತಿಗೆ ಹಾಜರಾಗಲಿದ್ದೇನೆ’ ಎನ್ನುತ್ತಾರೆ ಚಿನ್ಮ ಯಿ.</p>.<div><blockquote>ಬಾಲ್ಯದಿಂದಲೂ ಸೇನೆಗೆ ಸೇರಬೇಕು ಎಂಬ ಆಸೆ ಇತ್ತು. ತಾಯಿಯ ಪ್ರೇರಣೆ ಮತ್ತು ಪ್ರೋತ್ಸಾದಿಂದ ಆ ಕನಸು ನನಸಾಗಿದೆ</blockquote><span class="attribution">ಚಿನ್ಮ ಯಿ ಘಟ್ಟದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಪಟ್ಟಣದ ಚಿನ್ಮಯಿ ಘಟ್ಟದ ಅವರು ಭಾರತಿಯ ಸೇನೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೂ ಸೇನೆಯಲ್ಲಿ ಉನ್ನತ ಮಟ್ಟದ ಅಧಿಕಾರಿ ಆಗಬೇಕು ಎಂಬ ಅವರ ಕನಸು ನನಸಾಗಿದೆ. ಅವರು ಶೀಘ್ರವೇ ಬಿಹಾರದ ಗಯಾ ಪ್ರದೇಶದಲ್ಲಿ ತರಬೇತಿ ಪಡೆಯಲಿದ್ದಾರೆ.</p><p>ಬಾಗಲಕೋಟೆಯ ಬಸವೇಶ್ವರ ಇಂಟರ್ನ್ಯಾಶನಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು,<br>ಪ್ರೌಢಶಿಕ್ಷಣವನ್ನು ಬೆಂಗಳೂರಿನ ಶ್ರೀಚೇತನ ವಸತಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ರಾಜಸ್ತಾನದ ಕೋಕಾದಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿದ ಅವರು, ಜೈಪುರದ ಎನ್ಐಟಿ ಸಂಸ್ಥೆಯಲ್ಲಿ ಆರ್ಕಿಟೆಕ್ಚರ್ ಪದವಿ ಪಡೆದರು.</p><p>ಪದವಿ ಬಳಿಕ ದೆಹಲಿಯ ಪ್ರತಿಷ್ಠಿತ ಮಾರ್ಬಲ್ ಕಂಪನಿಯಲ್ಲಿ ಡಿಸೈನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತ ಎಸ್ಎಸ್ಸಿ ಟೆಕ್ ಪರೀಕ್ಷೆ ಪೂರ್ವ ತಯಾರಿ ನಡೆಸಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ವಿದ್ಯಾರ್ಥಿನಿಯು ಎಸ್ಎಸ್ಸಿ ಪರೀಕ್ಷೆಗೆ ಹಾಜರಾಗಿ, ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು.</p>. <p>ಚಿನ್ಮಯಿ ಅವರದ್ದು ವ್ಯಾಪರಸ್ಥರ ಕುಟುಂಬ. ತಂದೆ ಶಂಕರ ಘಟ್ಟದ ಮತ್ತು ತಾಯಿ ಗೌರಿ ಶಂಕರ ಘಟ್ಟದ ದಂಪತಿಗೆ ಮೂವರು ಪುತ್ರಿಯರು. ಮೂವರು ಉನ್ನತ ಶಿಕ್ಷಣ ಪಡೆದಿದ್ದಾರೆ.</p>. <p>‘ನಾನು ಸೇನಾಧಿಕಾರಿ ಆಗಿ ಆಯ್ಕೆಯಾಗಲು ತಾಯಿ ಪ್ರೇರಣೆ ಆಗಿದ್ದಾರೆ. ಊರಿನ ಪ್ರಮುಖರು ಮತ್ತು ಮಾಜಿ ಸೇನಾಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಮಾರ್ಗದರ್ಶನ ನೀಡಿ ನನಗೆ ಪ್ರೋತ್ಸಾಹಿಸಿದರು. ಊರಿನ ಜನರೆಲ್ಲರೂ ನನ್ನನ್ನು ಅಭಿನಂದಿಸುತ್ತಿರುವುದು ಖುಷಿ ತಂದಿದೆ. ಮಾರ್ಚ್ 26ರಂದು ಬಿಹಾರದ ಗಯಾ ಪ್ರದೇಶದ ಸೇನಾ ತರಬೇತಿಗೆ ಹಾಜರಾಗಲಿದ್ದೇನೆ’ ಎನ್ನುತ್ತಾರೆ ಚಿನ್ಮ ಯಿ.</p>.<div><blockquote>ಬಾಲ್ಯದಿಂದಲೂ ಸೇನೆಗೆ ಸೇರಬೇಕು ಎಂಬ ಆಸೆ ಇತ್ತು. ತಾಯಿಯ ಪ್ರೇರಣೆ ಮತ್ತು ಪ್ರೋತ್ಸಾದಿಂದ ಆ ಕನಸು ನನಸಾಗಿದೆ</blockquote><span class="attribution">ಚಿನ್ಮ ಯಿ ಘಟ್ಟದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>