<p><strong>ಕೂಡಲಸಂಗಮ:</strong> ವಯಸ್ಸಾದ, ರೋಗಗ್ರಸ್ಥ, ಅಂಗವಿಕಲ ಜಾನುವಾರು ಗಳಿಗೆ ಪುನರ್ ವಸತಿ ಕಲ್ಪಿಸಬೇಕು ಎಂಬ ಉದ್ದೇಶದಿಂದ 2023ರಲ್ಲಿ ಕೂಡಲಸಂಗಮದಲ್ಲಿ ಆರಂಭವಾದ ಸರ್ಕಾರಿ ಗೋಶಾಲೆ ಕಾಮಗಾರಿ ಆಮೆಗತಿಯಲ್ಲಿ ನಡೆದು, ಮುಕ್ತಾಯಗೊಂಡಿದೆ.</p>.<p>2025 ನವೆಂಬರ್ ತಿಂಗಳಲ್ಲಿ ಉದ್ಘಾಟನೆಗೊಂಡರು ಇನ್ನೂ ಗೋಶಾಲೆ ಯಲ್ಲಿ ಸಿಬ್ಬಂದಿ, ಗೋವುಗಳು ಇಲ್ಲದೇ ನಿರುಪಯುಕ್ತವಾಗಿದೆ. ಗೋಶಾಲೆಯ ಆವರಣ ಖಾಸಗಿ ವ್ಯಕ್ತಿಗಳ ವಾಹನ ನಿಲ್ದಾಣ, ದವಸಧಾನ್ಯಗಳ ಸಂಗ್ರಹಣಾ ಕೇಂದ್ರವಾಗಿದೆ. ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ದಿಂದ ನಿರ್ಮಾಣವಾದ ಗೋಶಾಲೆಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ 20 ಎಕರೆ ಭೂಮಿಯನ್ನು ನೀಡಿದೆ. ಸ್ಥಳೀಯ ಕ್ಷೇತ್ರಾಧಿಪತಿ ಸಂಗಮ ನಾಥನಿಗೆ ಭಕ್ತರು ಅನೇಕ ಜಾನುವಾರುಗಳನ್ನು ಬಿಟ್ಟಿದ್ದಾರೆ. ಆ ಜಾನುವಾರಗಳು ನಿತ್ಯ ರಸ್ತೆಯ ಬದಿ ವಾಸಮಾಡುತ್ತಿವೆ.</p>.<p>ಇಂತಹ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ಗೋಶಾಲೆ ಯಲ್ಲಿ ಪುನರ್ ವಸತಿ ಕಲ್ಪಿಸಬೇಕು, ಕೆಲವು ರೈತರಿಗೆ ವಯಸ್ಸಾದ ಗೋವುಗಳನ್ನು ಸಾಕಲು ಆಗುತ್ತಿಲ್ಲ ಗೋಶಾಲೆಗೆ ಬಿಡಲು ಸಿದ್ದರಿದ್ದಾರೆ. ಆದರೆ ಗೋಶಾಲೆಯೇ ಆರಂಭವಾಗಿಲ್ಲ. ಕೂಡಲೇ ಗೋ ಶಾಲೆ ಆರಂಭಿಸಬೇಕು ಎಂದು ಕೂಡಲ ಸಂಗಮ ಸುತ್ತಲಿನ ರೈತರು ಹೇಳುತ್ತಾರೆ.</p>.<p>‘ಗೋಶಾಲೆಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ. ಜನರ ಬಳಕೆ ಇಲ್ಲದೇ ಪ್ರವೇಶ ದ್ವಾರದ ಕಬ್ಬಿಣದ ಗೇಟ್ಗಳು ನಿರುಪಯುಕ್ತವಾಗಿದ್ದು ಕಿತ್ತು ನೆಲಕ್ಕೆ ಬಿದ್ದಿವೆ. ಕುಡುಕರ ನೆಚ್ಚಿನ ತಾಣವಾಗಿ ಪರಿಣಮಿಸಿದೆ. ಗೋ ಶಾಲೆಯನ್ನು ರಕ್ಷಿಸುವ ಕಾರ್ಯವನ್ನು ಪಶು ಸಂಗೋಪನಾ ಇಲಾಖೆ ಮಾಡಬೇಕು’ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ದೇವಾಲಯ ಆವರಣ, ಬಸವೇಶ್ವರ ವೃತ್ತದಲ್ಲಿ ಅನೇಕ ಬಿಡಾಡಿ ಜಾನುವಾರುಗಳು ಇವೆ. ಅವುಗಳನ್ನು ಗೋಶಾಲೆಯಲ್ಲಿ ಸಂರಕ್ಷಣೆ ಮಾಡುವ ಕಾರ್ಯವನ್ನು ಪಶುಸಂಗೋಪನಾ ಇಲಾಖೆ ಮಾಡಬೇಕು. ನಿರುಪಯುಕ್ತವಾದ ಗೋಶಾಲೆಗೆ ಸಿಬ್ಬಂದಿ ನಿಯೋಜಿಸಿ, ಕೂಡಲೇ ಗೋಶಾಲೆ ಆರಂಭಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟ ಕದ ಅಧ್ಯಕ್ಷ ಸಂಜು ಗೌಡರ ಹೇಳಿದರು.</p>.<p><strong>20 ಎಕರೆ ಭೂಮಿ ಮಂಜೂರು</strong></p><p>2022 ಜುಲೈ 7 ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 15ನೇ ಸಭೆಯಲ್ಲಿ 20 ಎಕರೆ ಭೂಮಿಯನ್ನು ಪಶುಸಂಗೋಪನಾ ಇಲಾಖೆಗೆ ಕಾಯ್ದಿರಿಸಿ, ಗೋ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.</p><p>ಸಾರ್ವಜನಿಕರ ಅಪೇಕ್ಷೆ ಮೇರೆಗೆ ಇಂತಹ ಉತ್ತಮ ಯೋಜನೆಯನ್ನು ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರ ಹಣ ಪೋಲಾಗುತ್ತಿರುವುದು ದುರ್ದೈವದ ಸಂಗತಿ</p><p>ಗೋ ಶಾಲೆ ನಮ್ಮ ಇಲಾಖೆಗೆ ಹಸ್ತಾಂತರಗೊಂಡಿದೆ. ಅಗತ್ಯ ಇರುವ ಸಿಬ್ಬಂದಿ ನಿಯೋಜಿಸಲು, ಮೇಲಾಧಿಕಾರಿಗಳಿಗೆ ಪತ್ರ ಬರೆದಿದೆ. ಅನುಮೋದನೆ ಪಡೆದು ಸಿಬ್ಬಂದಿ ನೇಮಿಸುತ್ತೇವೆ’ ಎಂದು ಪಶು ಸಂಗೋಪಲನಾ ಇಲಾಖೆ ಮೂಲಗಳು ತಿಳಿಸಿವೆ.</p>.<div><blockquote>ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೂಡಲಸಂಗಮದಲ್ಲಿ ಗೋಶಾಲೆ ಅತ್ಯಂತ ಅವಶ್ಯ. ಈಗಾಗಲೇ ಕೋಟ್ಯಂತರ ವೆಚ್ಚ ಮಾಡಿ ಉದ್ಘಾಟನೆಯಾಗಿದೆ ಶೀಘ್ರ ಆರಂಭಿಸಬೇಕು. </blockquote><span class="attribution">ಸಂಜು ಗೌಡರ, ಕರವೇ ಅಧ್ಯಕ್ಷ ಕೂಡಲಸಂಗಮ ಘಟಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ:</strong> ವಯಸ್ಸಾದ, ರೋಗಗ್ರಸ್ಥ, ಅಂಗವಿಕಲ ಜಾನುವಾರು ಗಳಿಗೆ ಪುನರ್ ವಸತಿ ಕಲ್ಪಿಸಬೇಕು ಎಂಬ ಉದ್ದೇಶದಿಂದ 2023ರಲ್ಲಿ ಕೂಡಲಸಂಗಮದಲ್ಲಿ ಆರಂಭವಾದ ಸರ್ಕಾರಿ ಗೋಶಾಲೆ ಕಾಮಗಾರಿ ಆಮೆಗತಿಯಲ್ಲಿ ನಡೆದು, ಮುಕ್ತಾಯಗೊಂಡಿದೆ.</p>.<p>2025 ನವೆಂಬರ್ ತಿಂಗಳಲ್ಲಿ ಉದ್ಘಾಟನೆಗೊಂಡರು ಇನ್ನೂ ಗೋಶಾಲೆ ಯಲ್ಲಿ ಸಿಬ್ಬಂದಿ, ಗೋವುಗಳು ಇಲ್ಲದೇ ನಿರುಪಯುಕ್ತವಾಗಿದೆ. ಗೋಶಾಲೆಯ ಆವರಣ ಖಾಸಗಿ ವ್ಯಕ್ತಿಗಳ ವಾಹನ ನಿಲ್ದಾಣ, ದವಸಧಾನ್ಯಗಳ ಸಂಗ್ರಹಣಾ ಕೇಂದ್ರವಾಗಿದೆ. ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ದಿಂದ ನಿರ್ಮಾಣವಾದ ಗೋಶಾಲೆಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ 20 ಎಕರೆ ಭೂಮಿಯನ್ನು ನೀಡಿದೆ. ಸ್ಥಳೀಯ ಕ್ಷೇತ್ರಾಧಿಪತಿ ಸಂಗಮ ನಾಥನಿಗೆ ಭಕ್ತರು ಅನೇಕ ಜಾನುವಾರುಗಳನ್ನು ಬಿಟ್ಟಿದ್ದಾರೆ. ಆ ಜಾನುವಾರಗಳು ನಿತ್ಯ ರಸ್ತೆಯ ಬದಿ ವಾಸಮಾಡುತ್ತಿವೆ.</p>.<p>ಇಂತಹ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ಗೋಶಾಲೆ ಯಲ್ಲಿ ಪುನರ್ ವಸತಿ ಕಲ್ಪಿಸಬೇಕು, ಕೆಲವು ರೈತರಿಗೆ ವಯಸ್ಸಾದ ಗೋವುಗಳನ್ನು ಸಾಕಲು ಆಗುತ್ತಿಲ್ಲ ಗೋಶಾಲೆಗೆ ಬಿಡಲು ಸಿದ್ದರಿದ್ದಾರೆ. ಆದರೆ ಗೋಶಾಲೆಯೇ ಆರಂಭವಾಗಿಲ್ಲ. ಕೂಡಲೇ ಗೋ ಶಾಲೆ ಆರಂಭಿಸಬೇಕು ಎಂದು ಕೂಡಲ ಸಂಗಮ ಸುತ್ತಲಿನ ರೈತರು ಹೇಳುತ್ತಾರೆ.</p>.<p>‘ಗೋಶಾಲೆಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ. ಜನರ ಬಳಕೆ ಇಲ್ಲದೇ ಪ್ರವೇಶ ದ್ವಾರದ ಕಬ್ಬಿಣದ ಗೇಟ್ಗಳು ನಿರುಪಯುಕ್ತವಾಗಿದ್ದು ಕಿತ್ತು ನೆಲಕ್ಕೆ ಬಿದ್ದಿವೆ. ಕುಡುಕರ ನೆಚ್ಚಿನ ತಾಣವಾಗಿ ಪರಿಣಮಿಸಿದೆ. ಗೋ ಶಾಲೆಯನ್ನು ರಕ್ಷಿಸುವ ಕಾರ್ಯವನ್ನು ಪಶು ಸಂಗೋಪನಾ ಇಲಾಖೆ ಮಾಡಬೇಕು’ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ದೇವಾಲಯ ಆವರಣ, ಬಸವೇಶ್ವರ ವೃತ್ತದಲ್ಲಿ ಅನೇಕ ಬಿಡಾಡಿ ಜಾನುವಾರುಗಳು ಇವೆ. ಅವುಗಳನ್ನು ಗೋಶಾಲೆಯಲ್ಲಿ ಸಂರಕ್ಷಣೆ ಮಾಡುವ ಕಾರ್ಯವನ್ನು ಪಶುಸಂಗೋಪನಾ ಇಲಾಖೆ ಮಾಡಬೇಕು. ನಿರುಪಯುಕ್ತವಾದ ಗೋಶಾಲೆಗೆ ಸಿಬ್ಬಂದಿ ನಿಯೋಜಿಸಿ, ಕೂಡಲೇ ಗೋಶಾಲೆ ಆರಂಭಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟ ಕದ ಅಧ್ಯಕ್ಷ ಸಂಜು ಗೌಡರ ಹೇಳಿದರು.</p>.<p><strong>20 ಎಕರೆ ಭೂಮಿ ಮಂಜೂರು</strong></p><p>2022 ಜುಲೈ 7 ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 15ನೇ ಸಭೆಯಲ್ಲಿ 20 ಎಕರೆ ಭೂಮಿಯನ್ನು ಪಶುಸಂಗೋಪನಾ ಇಲಾಖೆಗೆ ಕಾಯ್ದಿರಿಸಿ, ಗೋ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.</p><p>ಸಾರ್ವಜನಿಕರ ಅಪೇಕ್ಷೆ ಮೇರೆಗೆ ಇಂತಹ ಉತ್ತಮ ಯೋಜನೆಯನ್ನು ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರ ಹಣ ಪೋಲಾಗುತ್ತಿರುವುದು ದುರ್ದೈವದ ಸಂಗತಿ</p><p>ಗೋ ಶಾಲೆ ನಮ್ಮ ಇಲಾಖೆಗೆ ಹಸ್ತಾಂತರಗೊಂಡಿದೆ. ಅಗತ್ಯ ಇರುವ ಸಿಬ್ಬಂದಿ ನಿಯೋಜಿಸಲು, ಮೇಲಾಧಿಕಾರಿಗಳಿಗೆ ಪತ್ರ ಬರೆದಿದೆ. ಅನುಮೋದನೆ ಪಡೆದು ಸಿಬ್ಬಂದಿ ನೇಮಿಸುತ್ತೇವೆ’ ಎಂದು ಪಶು ಸಂಗೋಪಲನಾ ಇಲಾಖೆ ಮೂಲಗಳು ತಿಳಿಸಿವೆ.</p>.<div><blockquote>ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೂಡಲಸಂಗಮದಲ್ಲಿ ಗೋಶಾಲೆ ಅತ್ಯಂತ ಅವಶ್ಯ. ಈಗಾಗಲೇ ಕೋಟ್ಯಂತರ ವೆಚ್ಚ ಮಾಡಿ ಉದ್ಘಾಟನೆಯಾಗಿದೆ ಶೀಘ್ರ ಆರಂಭಿಸಬೇಕು. </blockquote><span class="attribution">ಸಂಜು ಗೌಡರ, ಕರವೇ ಅಧ್ಯಕ್ಷ ಕೂಡಲಸಂಗಮ ಘಟಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>