<p><strong>ಕೂಡಲಸಂಗಮ:</strong> ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಬಸವ ಜಯಂತಿ ದಿನ ಕಾಟಾಚಾರಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.</p>.<p>ಬಸವ ಜಯಂತಿ ಅಂಗವಾಗಿ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದು, ಪ್ರಾರ್ಥನೆ, ವಚನ ಪಠಣ ಮಾಡಿದರು. ಮಂಡಳಿ ಬಸವ ಜಯಂತಿ ಅಂಗವಾಗಿ ಬಸವ ಪುತ್ಥಳಿ, ಎತ್ತುಗಳ ಮೆರವಣಿಗೆ ಮಾಡುವುದನ್ನು ನೋಡಿ ಆಶ್ಚರ್ಯದ ಜೊತೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಮಂಡಳಿಯ ಅಧಿಕಾರಿಗಳು ಎತ್ತುಗಳ ಮೆರವಣಿಗೆ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.</p>.<p>ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಹಿಂದೆ ಮಂಡಳಿಯ ವಿಶೇಷಾಧಿಕಾರಿಯಾಗಿದ್ದ ಶಿವಾನಂದ ಜಾಮದಾರ, ಮಹಾದೇವ ಮುರಗಿ ಮತ್ತಿತರರು ಸಂಗೀತ, ವಿಶೇಷ ಉಪನ್ಯಾಸ ಹಮ್ಮಿಕೊಂಡಿದ್ದರು. ಕಳೆದ ವರ್ಷ ರಾಜ್ಯ ಸರ್ಕಾರವೇ ಬಸವ ಜಯಂತಿ ಅಂಗವಾಗಿ ಬಸವಾದಿ ಶರಣರ ವೈಭವ ಅನುಭವ ಮಂಟಪ ಕಾರ್ಯಕ್ರಮ ಹಮ್ಮಿಕೊಂಡಿತ್ತು.</p>.<p>ಚುನಾವಣೆ ನೀತಿ ಸಂಹಿತೆ ನಡುವೆ ಏ.7ರಂದು ಸಂಗಮೇಶ್ವರ ಜಾತ್ರೆ ಸಂಭ್ರಮದಿಂದ ನಡೆಯಿತು. ಜಾತ್ರೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಂಡಿತ್ತು. ಆಗ ಇಲ್ಲದ ನೀತಿ ಸಂಹಿತೆ ಬಸವ ಜಯಂತಿಗೆ ಹೇಗೆ ಬಂದಿತು ಎಂಬುದು ಬಸವರಾಜ ಗೌಡರ ಪ್ರಶ್ನಿಸಿದರು.</p>.<h2>₹ 5 ಲಕ್ಷ ಅನುದಾನ</h2><p>ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಅರ್ಥಪೂರ್ಣ ಬಸವ ಜಯಂತಿ ಆಚರಣೆ ಮಾಡಬೇಕು ಎಂದು 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ₹5 ಲಕ್ಷ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.</p>.<div><blockquote>ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಮುಂದಿನ ವರ್ಷ ವಿಶೇಷ ಕಾರ್ಯಕ್ರಮ ಮಾಡಲಾಗುವುದು.</blockquote><span class="attribution">–ವಿಜಯಕುಮಾರ ಆಜೂರ, ಆಯುಕ್ತ, ಕೂಡಲಸಂಗಮ ಅಭಿವೃದ್ಧಿ ಮಂಡಳಿ. ಕೂಡಲಸಂಗಮ</span></div>.<div><blockquote>ದಾರ್ಶನಿಕರ ಜಯಂತಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಆಗಬಾರದು. ಬಸವ ಜಯಂತಿಯನ್ನು ನೆಪಮಾತ್ರಕ್ಕೆ ಆಚರಿಸುವುದು ಸರಿಯಲ್ಲ. </blockquote><span class="attribution">–ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ, ಕೂಡಲಸಂಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ:</strong> ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಬಸವ ಜಯಂತಿ ದಿನ ಕಾಟಾಚಾರಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.</p>.<p>ಬಸವ ಜಯಂತಿ ಅಂಗವಾಗಿ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದು, ಪ್ರಾರ್ಥನೆ, ವಚನ ಪಠಣ ಮಾಡಿದರು. ಮಂಡಳಿ ಬಸವ ಜಯಂತಿ ಅಂಗವಾಗಿ ಬಸವ ಪುತ್ಥಳಿ, ಎತ್ತುಗಳ ಮೆರವಣಿಗೆ ಮಾಡುವುದನ್ನು ನೋಡಿ ಆಶ್ಚರ್ಯದ ಜೊತೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಮಂಡಳಿಯ ಅಧಿಕಾರಿಗಳು ಎತ್ತುಗಳ ಮೆರವಣಿಗೆ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.</p>.<p>ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಹಿಂದೆ ಮಂಡಳಿಯ ವಿಶೇಷಾಧಿಕಾರಿಯಾಗಿದ್ದ ಶಿವಾನಂದ ಜಾಮದಾರ, ಮಹಾದೇವ ಮುರಗಿ ಮತ್ತಿತರರು ಸಂಗೀತ, ವಿಶೇಷ ಉಪನ್ಯಾಸ ಹಮ್ಮಿಕೊಂಡಿದ್ದರು. ಕಳೆದ ವರ್ಷ ರಾಜ್ಯ ಸರ್ಕಾರವೇ ಬಸವ ಜಯಂತಿ ಅಂಗವಾಗಿ ಬಸವಾದಿ ಶರಣರ ವೈಭವ ಅನುಭವ ಮಂಟಪ ಕಾರ್ಯಕ್ರಮ ಹಮ್ಮಿಕೊಂಡಿತ್ತು.</p>.<p>ಚುನಾವಣೆ ನೀತಿ ಸಂಹಿತೆ ನಡುವೆ ಏ.7ರಂದು ಸಂಗಮೇಶ್ವರ ಜಾತ್ರೆ ಸಂಭ್ರಮದಿಂದ ನಡೆಯಿತು. ಜಾತ್ರೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಂಡಿತ್ತು. ಆಗ ಇಲ್ಲದ ನೀತಿ ಸಂಹಿತೆ ಬಸವ ಜಯಂತಿಗೆ ಹೇಗೆ ಬಂದಿತು ಎಂಬುದು ಬಸವರಾಜ ಗೌಡರ ಪ್ರಶ್ನಿಸಿದರು.</p>.<h2>₹ 5 ಲಕ್ಷ ಅನುದಾನ</h2><p>ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಅರ್ಥಪೂರ್ಣ ಬಸವ ಜಯಂತಿ ಆಚರಣೆ ಮಾಡಬೇಕು ಎಂದು 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ₹5 ಲಕ್ಷ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.</p>.<div><blockquote>ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಮುಂದಿನ ವರ್ಷ ವಿಶೇಷ ಕಾರ್ಯಕ್ರಮ ಮಾಡಲಾಗುವುದು.</blockquote><span class="attribution">–ವಿಜಯಕುಮಾರ ಆಜೂರ, ಆಯುಕ್ತ, ಕೂಡಲಸಂಗಮ ಅಭಿವೃದ್ಧಿ ಮಂಡಳಿ. ಕೂಡಲಸಂಗಮ</span></div>.<div><blockquote>ದಾರ್ಶನಿಕರ ಜಯಂತಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಆಗಬಾರದು. ಬಸವ ಜಯಂತಿಯನ್ನು ನೆಪಮಾತ್ರಕ್ಕೆ ಆಚರಿಸುವುದು ಸರಿಯಲ್ಲ. </blockquote><span class="attribution">–ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ, ಕೂಡಲಸಂಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>