ಎಸ್ಟಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಜಗದ ಕವಿ ಯುಗದ ಕವಿಯಾಗಿದ್ದರು. ಶ್ರೀ ರಾಮಾಯಣ ದರ್ಶನ ಮಹಾಕಾವ್ಯವನ್ನು ರಚಿಸುವುದರ ಮೂಲ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಕತೆ, ಕಾದಂಬರಿ, ಶಿಶು ಸಾಹಿತ್ಯ, ವಿಮರ್ಶೆ, ನಾಟಕ, ಮಹಾಕಾವ್ಯ, ವೈಚಾರಿಕ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡ ವಿಶ್ವಶ್ರೇಷ್ಠ ಸಾಹಿತಿಯಾಗಿದ್ದರು ಎಂದು ನಡೋಣಿ ತಿಳಿಸಿದರು.