ತವರು ಮನೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ಮಲ್ಲಪ್ಪ ಯರಗಟ್ಟಿಯ ಅಕ್ಕ ಶಂಕರವ್ವ ತಮ್ಮನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರಿಂದ ಅಕ್ಕನ ಮೇಲೆ ಮಲ್ಲಪ್ಪ ಕೋಪಗೊಂಡಿದ್ದನು. ಶಂಕರವ್ವ ತುಮ್ಮರಮಟ್ಟಿಗೆ ಬಂದಾಗಲೆಲ್ಲಾ, ಆಕೆಯೊಂದಿಗೆ ತನ್ನ ಪತ್ನಿ ಪದ್ಮಾ ಮಾತನಾಡುತ್ತಿದ್ದದ್ದು ಮಲ್ಲಪ್ಪನಲ್ಲಿ ಅಸಮಾಧಾನ ಮೂಡಿಸಿತ್ತು. ನಂತರ ಪದ್ಮಾ ತವರು ಮನೆಗೆ ಹೋಗಿದ್ದು, ತನ್ನ ತಾಯಿ ಕರೆಯಲು ಹೋದರೂ ಆಕೆ ಬರಲಿಲ್ಲ ಎಂದು ಆಕ್ರೋಶಗೊಂಡಿದ್ದ ಮಲ್ಲಪ್ಪ ಆಕೆಯ ಶೀಲದ ಬಗ್ಗೆ ಸಂಶಯಗೊಂಡು ಕೊಲೆ ಮಾಡಲು ನಿರ್ಧರಿಸಿದ್ದನು.