<p><strong>ಬಾಗಲಕೋಟೆ</strong>: ‘ಮನುಷ್ಯ ಇಂದು ಸ್ನೇಹ, ಪ್ರೀತಿ ಸಂಪಾದನೆ ಮಾಡುತ್ತಿಲ್ಲ, ಬರೀ ದುಡ್ಡಿನ ಬೆನ್ನು ಹತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ಸಾಹಿತ್ಯ ಕ್ಷೇತ್ರ ಮಾನವೀಯ ಮೌಲ್ಯಗಳ ಬಿತ್ತುವ ಕಾರ್ಯ ಮಾಡಬೇಕು’ ಎಂದು ಸಾಹಿತಿ ಹೇಮಾ ಪಟ್ಟಣಶೆಟ್ಟಿ ಹೇಳಿದರು.</p>.<p>ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ಭಾನುವಾರ ಬಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ‘ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಹಾಗೂ ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಸಾಹಿತ್ಯ ಬರವಣಿಗೆಯಲ್ಲಿ ವಿಮರ್ಶೆ ಹೆಚ್ಚಾಗಬೇಕು. ಸಾಮಾಜಿಕ ಜಾಲತಾಣದಿಂದ ಕನ್ನಡ ಬರವಣಿಗೆ ಕುಂಠಿತವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ದುಃಖದ ಸಂಗತಿ ಎಂದರೆ ಇಂದು ನಮ್ಮನ್ನು ಬೌದ್ಧಿಕ ಅಹಂಕಾರ ಆಳುತ್ತಿದೆ. ಗೂಗಲ್ ಅಲ್ಲಿ ಮಾಹಿತಿ ಸಿಗುತ್ತದೆ, ಜ್ಞಾನ ಸಿಗುವುದಿಲ್ಲ. ಇದನ್ನು ಎಲ್ಲರಿಗೂ ಅರ್ಥ ಮಾಡಿಸುವ ಅವಶ್ಯಕತೆ ಇದೆ’ ಎಂದರು.</p>.<p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ‘ನಾಡಿನ ಸಾಂಸ್ಕೃತಿಕ ಪರಂಪರೆ ಜೀವಂತವಾಗಿಡುವ ಕಾರ್ಯವನ್ನು ಸಾಹಿತ್ಯ ಮಾಡುತ್ತದೆ. ಸಾಹಿತಿಗಳು ಅಳಿದು ಹೋಗಬಹುದು. ಆದರೆ, ಸಾಹಿತ್ಯ ಕೃತಿಗಳು ಅನಂತವಾಗಿರುತ್ತವೆ’ ಎಂದರು.</p>.<p>‘ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಶಕ್ತಿ ತುಂಬಿ ಬಾಗಿಲು ತೆರದ ಬಾಗಲಕೋಟೆ ತನ್ನ ಒಡಲಲ್ಲಿ ಸಾವಿರಾರು ಸಾಹಿತಿಗಳನ್ನು ನಾಡಿಗೆ ನೀಡಿದೆ. ಪ್ರತಿಷ್ಠಾನವು ಸಾಹಿತಿಗಳನ್ನು ಗುರುತಿಸಿ, ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ನಿಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ವಿಶ್ವವಿದ್ಯಾನಿಲಯ ಕುಲಪತಿ ವಿಷ್ಣುವರ್ಧನ ಮಾತನಾಡಿ, ‘ಸಮಾಜ, ಸಂಸ್ಕೃತಿ, ಪರಂಪರೆಯನ್ನು ಬೆಳೆಸುವಲ್ಲಿ ಸಾಹಿತ್ಯದ ಕೃಷಿ ತುಂಬಾ ಅಗತ್ಯವಿದೆ. ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಡೀಡೆಕರೆ ಜಮೀನು’ ಕಥಾ ಸಂಕಲನ ಮೂರನೇ ಆವೃತ್ತಿ ಬಿಡುಗೊಂಡಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.<p>ತೀರ್ಪುಗಾರರಾದ ಸಾಹಿತಿ ಕಂನಾಡಿಗ ನಾರಾಯಣ, ರಾಜಶೇಖರ ಕುಕ್ಕುಂದ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಶೆಲ್ಲಿಕೇರಿ ಉಪಸ್ಥಿತರಿದ್ದರು.</p>.<p>ತ್ರಿವೇಣಿ ಶೆಲ್ಲಿಕೇರಿ ಪ್ರಶಸ್ತಿಗೆ ಪ್ರಮೋದ ಮರವಂತೆ ಅವರ ಕಾದಂಬರಿ ‘ತೊಂಡೆ ಚಪ್ಪರ’, ಸಿದ್ದು ಸತ್ಯಣ್ಣವರ ಅವರ ಕಥಾ ಸಂಕಲನ ‘ಒಂದು ತೇಗದ ಕುರ್ಚಿ’, ಶೋಭಾ ನಾಯಕ ಅವರ ಕವನ ಸಂಕಲನ ‘ಅರ್ಧ ಮುಖಗಳ ಶಹರ’ ಭಾಜನವಾಗಿದ್ದು, ತಲಾ ₹10 ಸಾವಿರ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿಗೆ ವಸು ವತ್ಸಲೆ ಅವರ ‘ಮಹಿ’ ಕಾದಂಬರಿ, ಗುಂಡುರಾವ್ ದೇಸಾಯಿ ಅವರ ‘ಚಾರ್ಲಿ ಚಾರ್ಲಿ ವ್ಹೇರ್ ಆರ್ ಯೂ’ (ಕತೆಗಳು) ಭಾಜನವಾಗಿದ್ದು, ತಲಾ ₹5 ಸಾವಿರ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ಮನುಷ್ಯ ಇಂದು ಸ್ನೇಹ, ಪ್ರೀತಿ ಸಂಪಾದನೆ ಮಾಡುತ್ತಿಲ್ಲ, ಬರೀ ದುಡ್ಡಿನ ಬೆನ್ನು ಹತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ಸಾಹಿತ್ಯ ಕ್ಷೇತ್ರ ಮಾನವೀಯ ಮೌಲ್ಯಗಳ ಬಿತ್ತುವ ಕಾರ್ಯ ಮಾಡಬೇಕು’ ಎಂದು ಸಾಹಿತಿ ಹೇಮಾ ಪಟ್ಟಣಶೆಟ್ಟಿ ಹೇಳಿದರು.</p>.<p>ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ಭಾನುವಾರ ಬಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ‘ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಹಾಗೂ ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಸಾಹಿತ್ಯ ಬರವಣಿಗೆಯಲ್ಲಿ ವಿಮರ್ಶೆ ಹೆಚ್ಚಾಗಬೇಕು. ಸಾಮಾಜಿಕ ಜಾಲತಾಣದಿಂದ ಕನ್ನಡ ಬರವಣಿಗೆ ಕುಂಠಿತವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ದುಃಖದ ಸಂಗತಿ ಎಂದರೆ ಇಂದು ನಮ್ಮನ್ನು ಬೌದ್ಧಿಕ ಅಹಂಕಾರ ಆಳುತ್ತಿದೆ. ಗೂಗಲ್ ಅಲ್ಲಿ ಮಾಹಿತಿ ಸಿಗುತ್ತದೆ, ಜ್ಞಾನ ಸಿಗುವುದಿಲ್ಲ. ಇದನ್ನು ಎಲ್ಲರಿಗೂ ಅರ್ಥ ಮಾಡಿಸುವ ಅವಶ್ಯಕತೆ ಇದೆ’ ಎಂದರು.</p>.<p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ‘ನಾಡಿನ ಸಾಂಸ್ಕೃತಿಕ ಪರಂಪರೆ ಜೀವಂತವಾಗಿಡುವ ಕಾರ್ಯವನ್ನು ಸಾಹಿತ್ಯ ಮಾಡುತ್ತದೆ. ಸಾಹಿತಿಗಳು ಅಳಿದು ಹೋಗಬಹುದು. ಆದರೆ, ಸಾಹಿತ್ಯ ಕೃತಿಗಳು ಅನಂತವಾಗಿರುತ್ತವೆ’ ಎಂದರು.</p>.<p>‘ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಶಕ್ತಿ ತುಂಬಿ ಬಾಗಿಲು ತೆರದ ಬಾಗಲಕೋಟೆ ತನ್ನ ಒಡಲಲ್ಲಿ ಸಾವಿರಾರು ಸಾಹಿತಿಗಳನ್ನು ನಾಡಿಗೆ ನೀಡಿದೆ. ಪ್ರತಿಷ್ಠಾನವು ಸಾಹಿತಿಗಳನ್ನು ಗುರುತಿಸಿ, ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ನಿಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ವಿಶ್ವವಿದ್ಯಾನಿಲಯ ಕುಲಪತಿ ವಿಷ್ಣುವರ್ಧನ ಮಾತನಾಡಿ, ‘ಸಮಾಜ, ಸಂಸ್ಕೃತಿ, ಪರಂಪರೆಯನ್ನು ಬೆಳೆಸುವಲ್ಲಿ ಸಾಹಿತ್ಯದ ಕೃಷಿ ತುಂಬಾ ಅಗತ್ಯವಿದೆ. ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಡೀಡೆಕರೆ ಜಮೀನು’ ಕಥಾ ಸಂಕಲನ ಮೂರನೇ ಆವೃತ್ತಿ ಬಿಡುಗೊಂಡಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.<p>ತೀರ್ಪುಗಾರರಾದ ಸಾಹಿತಿ ಕಂನಾಡಿಗ ನಾರಾಯಣ, ರಾಜಶೇಖರ ಕುಕ್ಕುಂದ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಶೆಲ್ಲಿಕೇರಿ ಉಪಸ್ಥಿತರಿದ್ದರು.</p>.<p>ತ್ರಿವೇಣಿ ಶೆಲ್ಲಿಕೇರಿ ಪ್ರಶಸ್ತಿಗೆ ಪ್ರಮೋದ ಮರವಂತೆ ಅವರ ಕಾದಂಬರಿ ‘ತೊಂಡೆ ಚಪ್ಪರ’, ಸಿದ್ದು ಸತ್ಯಣ್ಣವರ ಅವರ ಕಥಾ ಸಂಕಲನ ‘ಒಂದು ತೇಗದ ಕುರ್ಚಿ’, ಶೋಭಾ ನಾಯಕ ಅವರ ಕವನ ಸಂಕಲನ ‘ಅರ್ಧ ಮುಖಗಳ ಶಹರ’ ಭಾಜನವಾಗಿದ್ದು, ತಲಾ ₹10 ಸಾವಿರ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿಗೆ ವಸು ವತ್ಸಲೆ ಅವರ ‘ಮಹಿ’ ಕಾದಂಬರಿ, ಗುಂಡುರಾವ್ ದೇಸಾಯಿ ಅವರ ‘ಚಾರ್ಲಿ ಚಾರ್ಲಿ ವ್ಹೇರ್ ಆರ್ ಯೂ’ (ಕತೆಗಳು) ಭಾಜನವಾಗಿದ್ದು, ತಲಾ ₹5 ಸಾವಿರ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>