‘ಸರ್ಕಾರಕ್ಕೆ ಕ್ಲೇಮು ಮಾಡಿದ ಹೆಚ್ಚುವರಿ ಮೊತ್ತ ಇನ್ನೂ ಸಾಲ ಪಡೆದ ರೈತರ ಖಾತೆಯಲ್ಲಿಯೇ ಇದೆ. ಹೀಗಾಗಿ ಹಣ ಸೊಸೈಟಿಯಿಂದ ಹೊರಗೆ ಹೋಗಿಲ್ಲ. ಬದಲಿಗೆ ಬೇರೆ ಬೇರೆ ರೈತರ ಹೆಸರಿಗೆ ಖರ್ಚು ಹಾಕಿ ಮುಂದೆ ಹಣ ಬಳಕೆ ಮಾಡಿಕೊಳ್ಳುವ ಸಂಭವ ಇತ್ತು’ ಎನ್ನುವ ಸರನಾಯಕ, ‘ಇನ್ನೊಂದ ವಾರದಲ್ಲಿ ತನಿಖೆ ಪೂರ್ಣಗೊಳ್ಳಲಿದೆ. ದುರುಪಯೋಗವಾಗಲಿದ್ದ ಹಣದ ಪ್ರಮಾಣದ ಗೊತ್ತಾಗಲಿದೆ’ ಎಂದು ತಿಳಿಸಿದರು.