ಲಾಕ್ಡೌನ್ಗೆ ಮುನ್ನ ಮುಧೋಳ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಓಡಾಡಿಕೊಂಡು ಎದುರಿಗೆ ಸಿಕ್ಕವರನ್ನು ಸೊಂಡಿಲು ಎತ್ತಿ ಆಶೀರ್ವದಿಸಿ ಅವರು ಕೊಟ್ಟ ಅಕ್ಕಿ, ಬಾಳೆಹಣ್ಣು, ಬೆಲ್ಲ, ಕಬ್ಬು ಮೆದ್ದು ನೆಮ್ಮದಿಯಾಗಿದ್ದ ಆನೆಗೆ ಲಾಕ್ಡೌನ್ ಬಲವಂತದ ಬಂಧನಕ್ಕೆ ದೂಡಿದೆ. ಹೊರಗೆ ಓಡಾಟವಿಲ್ಲದ ಕಾರಣ ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ. ಜೊತೆಗೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದೆ. ಸೊಂಟ ನೋವಿನಿಂದಾಗಿ ಎದ್ದರೆ ಮಲಗಲು, ಮಲಗಿದರೆ ಏಳಲು ಕಷ್ಟಪಡುತ್ತಿದೆ. ನಿತ್ಯ ವೈದ್ಯರು ಬಂದು ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ.