ಆದರೆ ಕೋವಿಡ್–19 ಲಾಕ್ಡೌನ್ ಪರಿಣಾಮ ಆಟೊ ಸಂಚಾರ ಸ್ಥಗಿತಗೊಂಡಿದೆ. ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತು ಬದುಕು ನಡೆಸುವುದು ಕಷ್ಟವಾಗಿದೆ. ನಮ್ಮ ಬಿಪಿಎಲ್ ಪಡಿತರ ಚೀಟಿಯಲ್ಲಿ ನಮ್ಮೂರು ನಾಗರಾಳದ ವಿಳಾಸ ಇದೆ. ಹೀಗಾಗಿ ಕೂಡಲಸಂಗಮದಲ್ಲಿ ಪಡಿತರ ನೀಡಲಿಲ್ಲ. ಪಕ್ಕದ ಮನೆಯವರು ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸ್ವಲ್ಪ ಕೊಟ್ಟರು. ಒಂದು ವಾರ ಬದುಕು ನಡೆಯಿತು. ಮುಂದೆ ಹೇಗೆ ಎಂಬ ಆಲೋಚನೆಯಲ್ಲಿದ್ದಾಗ, ಕೂಡಲಸಂಗಮದ ಮಹಾಂತೇಶ ಕುರಿ, ಈರಪ್ಪ ಹಡಪದ ಸ್ವಲ್ಪ ಹಣದ ಸಹಾಯ ಮಾಡಿದರು. ಆ ಹಣದಿಂದ ಹುನಗುಂದದಿಂದ ಹಣ್ಣುಗಳನ್ನು ತಂದು ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಆರಂಭಿಸಿದೆ ಎಂದು ಸಂಗಮೇಶ ನಾಗರಾಳ ಹೇಳಿದರು.