<p>ಲೋಕಾಪುರ: ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಮರಳು ಅಕ್ರಮ ಗಣಿಗಾರಿಕೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿ, ಅಪಾರ ಪ್ರಮಾಣದ ಮರಳು ವಶಪಡಿಸಿಕೊಂಡಿದ್ದಾರೆ.</p>.<p>ಜಂಬಗಿ ಕೆ.ಡಿ ಗ್ರಾಮದ ಘಟಪ್ರಭಾ ನದಿ ದಂಡೆಯ ತೀರದಲ್ಲಿ 168 ಟನ್ ಮರಳು ಅಂದಾಜು ₹1.20 ಲಕ್ಷ, ಮರಳು ತೆಗೆಯಲು ಬಳಸುತ್ತಿದ್ದ 1 ಹಿಟ್ಯಾಚಿ ಮತ್ತು ಎರಡು ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಧೋಳ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಹನಮಂತ ಡೋಣಿ ದೂರು ದಾಖಲಿಸಿದ್ದಾರೆ.</p>.<p>ಚಿಕ್ಕೂರ ಗ್ರಾಮದ ಹತ್ತಿರದ ನದಿ ದಡದಲ್ಲಿ 173 ಟನ್ ಮರಳು, ₹1.30 ಲಕ್ಷ ಮೊತ್ತದ ಮರಳು, ಕಸಬಾಜಂಬಗಿ ಗ್ರಾಮದಲ್ಲಿ 168 ಟನ್ ಮರಳು, ₹1.26 ಲಕ್ಷ ಮರಳು ಮತ್ತು ಹಿಟ್ಯಾಚಿ ವಶಪಡಿಸಿಕೊಂಡಿದ್ದಾರೆ.</p>.<p>ರೂಗಿ ಗ್ರಾಮದಲ್ಲಿ 500 ಟನ್, ₹3.75 ಲಕ್ಷ ಮೊತ್ತದ ಮರಳನ್ನು ಈಗಾಗಲೇ ಸಾಗಾಣಿಕೆ ಮಾಡಿದ್ದು, 10 ಟನ್ ನಷ್ಟು ₹7,500 ಮರಳನ್ನು ಖೇಡ್ಡಾಕ್ಕೆ ಹಾಕಲಾಗಿದೆ. ಹಿಟ್ಯಾಚಿ ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶಿವಕುಮಾರ ಬೀದಿಭಾವಿ ದೂರು ದಾಖಲಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-19-1182863883</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲೋಕಾಪುರ: ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಮರಳು ಅಕ್ರಮ ಗಣಿಗಾರಿಕೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿ, ಅಪಾರ ಪ್ರಮಾಣದ ಮರಳು ವಶಪಡಿಸಿಕೊಂಡಿದ್ದಾರೆ.</p>.<p>ಜಂಬಗಿ ಕೆ.ಡಿ ಗ್ರಾಮದ ಘಟಪ್ರಭಾ ನದಿ ದಂಡೆಯ ತೀರದಲ್ಲಿ 168 ಟನ್ ಮರಳು ಅಂದಾಜು ₹1.20 ಲಕ್ಷ, ಮರಳು ತೆಗೆಯಲು ಬಳಸುತ್ತಿದ್ದ 1 ಹಿಟ್ಯಾಚಿ ಮತ್ತು ಎರಡು ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಧೋಳ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಹನಮಂತ ಡೋಣಿ ದೂರು ದಾಖಲಿಸಿದ್ದಾರೆ.</p>.<p>ಚಿಕ್ಕೂರ ಗ್ರಾಮದ ಹತ್ತಿರದ ನದಿ ದಡದಲ್ಲಿ 173 ಟನ್ ಮರಳು, ₹1.30 ಲಕ್ಷ ಮೊತ್ತದ ಮರಳು, ಕಸಬಾಜಂಬಗಿ ಗ್ರಾಮದಲ್ಲಿ 168 ಟನ್ ಮರಳು, ₹1.26 ಲಕ್ಷ ಮರಳು ಮತ್ತು ಹಿಟ್ಯಾಚಿ ವಶಪಡಿಸಿಕೊಂಡಿದ್ದಾರೆ.</p>.<p>ರೂಗಿ ಗ್ರಾಮದಲ್ಲಿ 500 ಟನ್, ₹3.75 ಲಕ್ಷ ಮೊತ್ತದ ಮರಳನ್ನು ಈಗಾಗಲೇ ಸಾಗಾಣಿಕೆ ಮಾಡಿದ್ದು, 10 ಟನ್ ನಷ್ಟು ₹7,500 ಮರಳನ್ನು ಖೇಡ್ಡಾಕ್ಕೆ ಹಾಕಲಾಗಿದೆ. ಹಿಟ್ಯಾಚಿ ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶಿವಕುಮಾರ ಬೀದಿಭಾವಿ ದೂರು ದಾಖಲಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-19-1182863883</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>