<p><strong>ಮಹಾಲಿಂಗಪುರ:</strong> ನೂಲು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ, ಮಾರುಕಟ್ಟೆಯ ಅಭಾವ, ಯಂತ್ರ ಮಗ್ಗಗಳ ಪೈಪೋಟಿ ಮತ್ತು ಆರ್ಥಿಕ ನಿರ್ವಹಣೆಯ ಕೊರತೆಯಿಂದಾಗಿ ಪಟ್ಟಣದಲ್ಲಿನ ನೇಕಾರರ ಸಹಕಾರಿ ಸಂಘಗಳು ನೇಪಥ್ಯಕ್ಕೆ ಸರಿದಿವೆ.</p>.<p>ಸಂಘದ ಮೂಲಕ ಸದಸ್ಯ ನೇಕಾರರಿಗೆ ಕಚ್ಚಾ ಮಾಲನ್ನು ಪೂರೈಸಿ, ಪಕ್ಕಾ ಮಾಲನ್ನು ತಯಾರಿಸಿಕೊಳ್ಳುವುದು, ಅವರಿಗೆ ಯೋಗ್ಯ ಮಜೂರಿ ನಿಗದಿಪಡಿಸಿ ತಯಾರಾದ ಮಾಲನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದ ನೇಕಾರರ ಸಹಕಾರಿ ಸಂಘಗಳು ಕಳೆದ ಹತ್ತಾರು ವರ್ಷಗಳಿಂದ ಉತ್ಪಾದನಾ ಚಟುವಟಿಕೆಯಿಂದ ಹಿಂದೆ ಸರಿದಿವೆ.</p>.<p>ಪಟ್ಟಣದಲ್ಲಿ ಸ್ಥಾಪಿತವಾದ ಇಂತಹ ಐದು ಸಹಕಾರಿ ಸಂಘಗಳು ಯಾವುದೇ ಕಾರ್ಯ ಚಟುವಟಿಕೆ ಇಲ್ಲದೆ ಬಣಗುಡುತ್ತಿವೆ. ಸಂಘಗಳ ಆರ್ಥಿಕ ದುರ್ಬಲತೆ, ನಿರ್ವಹಣಾ ಲೋಪ, ಯುವ ಪೀಳಿಗೆಯ ಆಸಕ್ತಿ ಕೊರತೆ ಹಾಗೂ ಹಳೆಯ ತಂತ್ರಜ್ಞಾನಗಳಿಂದ ಈ ಸಂಘಗಳು ಅಳಿವು-ಉಳಿವಿಗಾಗಿ ಹೋರಾಟ ನಡೆಸುವಂತಾಗಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ಸಹಾಯವಿದ್ದರೂ, ಸಂಘಗಳು ನಿಷ್ಕ್ರಿಯಗೊಂಡಿವೆ.</p>.<p>ನೇಕಾರಿಕೆಯು ಸಣ್ಣ ಹಾಗೂ ಅತಿ ಸಣ್ಣ ಗುಡಿ ಕೈಗಾರಿಕೆಯಾಗಿದ್ದು, ಮನೆಮಂದಿಯೆಲ್ಲ ಕೂಡಿ ಕೆಲಸ ಮಾಡುವ ಉದ್ದಿಮೆಯಾಗಿದೆ. ಬೃಹತ್ ಕಾರ್ಖಾನೆಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಇಂತಹ ಸಣ್ಣ ಉದ್ದಿಮೆಗೆ ಹೊಡೆತ ಬಿದ್ದಂತಾಗಿದೆ.</p>.<p>‘ನೇಯ್ಗೆಗೆ ಬೇಕಾಗುವ ನೂಲು, ಚಮಕಾ, ರೇಷ್ಮೆ ಪಾಲಿಸ್ಟರ್ ದರಗಳು ವಿಪರೀತ ಏರಿಕೆಯಾಗಿವೆ. ತಯಾರಿಸಿದ ಪಕ್ಕಾ ಮಾಲಿಗೆ ಮಾರುಕಟ್ಟೆಯೇ ಇಲ್ಲ. ಯುವ ಪೀಳಿಗೆ ವಿಮುಖವಾಗಿದ್ದರಿಂದ ನೇಕಾರರ ಕೊರತೆ ಕಾಡುತ್ತಿದೆ. ಸರ್ಕಾರದಿಂದ ಸಿಗುತ್ತಿದ್ದ ರಿಬೇಟ್ ಹೆಚ್ಚಿಸಬೇಕು. ಆರ್ಥಿಕ ನೆರವು ಸಕಾಲಕ್ಕೆ ದೊರೆಯುವಂತಾಗಬೇಕು’ ಎಂದು ಸೌಜನ್ಯ ಕೈಮಗ್ಗ ನೇಕಾರರ ಉತ್ಪಾದಕ ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್.ಗೊಂಬಿ ಹೇಳುತ್ತಾರೆ.</p>.<p>‘ನೇಕಾರಿಕೆ ಮಾಡಲು ಸರ್ಕಾರ ಆರ್ಥಿಕ ಸಹಾಯ ಧನ ಒದಗಿಸುತ್ತಿದ್ದರೂ ಕಳೆದ 3-4 ವರ್ಷಗಳಿಂದ ಆ ಸಹಾಯಧನವೂ ಪಾವತಿಯಾಗಿಲ್ಲ. ರೈತರಂತೆ ನೇಕಾರರನ್ನು ಕಾಣಬೇಕು. ರೈತರಷ್ಟೇ ನೇಕಾರರಿಗೆ ಕಷ್ಟವಿದೆ. ಮಗ್ಗಗಳನ್ನು ಗುಜರಿಗೆ ಹಾಕುವ ಪರಿಸ್ಥಿತಿ ಬಂದಿದೆ. ನೇಕಾರರ ಸಂಘಗಳಿಗೆ ಪುನಶ್ಚೇತನ ಪ್ಯಾಕೇಜ್, ಸಾಲ ಮನ್ನಾ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಬೆಂಬಲ ನೀಡಬೇಕಾಗಿದೆ’ ಎಂದು ಪ್ರಗತಿ ವಿದ್ಯುತ್ ಚಾಲಿತ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಜೀರಗಾಳ ಹೇಳುತ್ತಾರೆ.</p>.<p>‘ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಾಲ ಮತ್ತು ಬಡ್ಡಿ ತುಂಬಬೇಕಾದರೆ ನೇಕಾರರು ಮಗ್ಗಗಳನ್ನು ಮಾರಬೇಕು. ಸಂಘಗಳು ನೇಕಾರರಿಂದ ಸಾಲ ಮರುಪಾವತಿ ಮಾಡಿಕೊಳ್ಳದಿದ್ದರೆ, ಸರ್ಕಾರ ಬಡ್ಡಿ ಸಹಾಯಧನ ಒದಗಿಸದಿದ್ದರೆ ಸಹಕಾರಿ ಸಂಘಗಳು ಮುಚ್ಚುವ ಪರಿಸ್ಥಿತಿ ಬರಲಿವೆ. ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟರಕಿ ಆಗ್ರಹಿಸುತ್ತಾರೆ.</p>.<p>‘ನೇಕಾರರು ಸಂಘಗಳಿಂದ ಪಡೆದ ಸಾಲ ತೀರಿಸಲಾಗದೆ, ಸಂಘಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ. ಪವರ್ಲೂಮ್ (ಯಂತ್ರಮಗ್ಗ) ಮತ್ತು ಪವರ್ಲೂಮ್ ಸೀರೆಗಳು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ಕೈಮಗ್ಗ ಉತ್ಪನ್ನಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ನೂಲು, ಬಣ್ಣಗಳ ಬೆಲೆ ನಿರಂತರ ಏರಿಕೆ ಆಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಆಡಳಿತಾತ್ಮಕ ಲೋಪಗಳು ಸಂಘಗಳ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿವೆ. ಸಾಂಪ್ರದಾಯಿಕ ನೇಯ್ಗೆಯಲ್ಲಿ ಕಡಿಮೆ ಆದಾಯ ಇರುವುದರಿಂದ ಯುವಕರು ಈ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ’ ಎಂದು ನೇಕಾರ ರಾಜೇಂದ್ರ ಮಿರ್ಜಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><blockquote>ನೇಕಾರರ ಸಹಕಾರಿ ಸಂಘದ ಉತ್ತೇಜನಕ್ಕೆ ಸದ್ಯ ಯಾವುದೇ ಯೋಜನೆಗಳಿಲ್ಲ. ನೇಕಾರರಿಗೆ ಆರ್ಥಿಕ ಸಹಾಯಧನ ಸದ್ಯದಲ್ಲಿ ಬಿಡುಗಡೆಯಾಗಲಿದೆ. ನೇಕಾರರು ಹೊಸ ಯೋಜನೆ ಕೈಗೊಂಡರೆ ಅಗತ್ಯ ಸಹಕಾರ ನೀಡಲಾಗುವುದು </blockquote><span class="attribution">ಸತೀಶ ಕಮ್ಮಲದಿನ್ನಿ, ಸಹಾಯಕ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ನೂಲು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ, ಮಾರುಕಟ್ಟೆಯ ಅಭಾವ, ಯಂತ್ರ ಮಗ್ಗಗಳ ಪೈಪೋಟಿ ಮತ್ತು ಆರ್ಥಿಕ ನಿರ್ವಹಣೆಯ ಕೊರತೆಯಿಂದಾಗಿ ಪಟ್ಟಣದಲ್ಲಿನ ನೇಕಾರರ ಸಹಕಾರಿ ಸಂಘಗಳು ನೇಪಥ್ಯಕ್ಕೆ ಸರಿದಿವೆ.</p>.<p>ಸಂಘದ ಮೂಲಕ ಸದಸ್ಯ ನೇಕಾರರಿಗೆ ಕಚ್ಚಾ ಮಾಲನ್ನು ಪೂರೈಸಿ, ಪಕ್ಕಾ ಮಾಲನ್ನು ತಯಾರಿಸಿಕೊಳ್ಳುವುದು, ಅವರಿಗೆ ಯೋಗ್ಯ ಮಜೂರಿ ನಿಗದಿಪಡಿಸಿ ತಯಾರಾದ ಮಾಲನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದ ನೇಕಾರರ ಸಹಕಾರಿ ಸಂಘಗಳು ಕಳೆದ ಹತ್ತಾರು ವರ್ಷಗಳಿಂದ ಉತ್ಪಾದನಾ ಚಟುವಟಿಕೆಯಿಂದ ಹಿಂದೆ ಸರಿದಿವೆ.</p>.<p>ಪಟ್ಟಣದಲ್ಲಿ ಸ್ಥಾಪಿತವಾದ ಇಂತಹ ಐದು ಸಹಕಾರಿ ಸಂಘಗಳು ಯಾವುದೇ ಕಾರ್ಯ ಚಟುವಟಿಕೆ ಇಲ್ಲದೆ ಬಣಗುಡುತ್ತಿವೆ. ಸಂಘಗಳ ಆರ್ಥಿಕ ದುರ್ಬಲತೆ, ನಿರ್ವಹಣಾ ಲೋಪ, ಯುವ ಪೀಳಿಗೆಯ ಆಸಕ್ತಿ ಕೊರತೆ ಹಾಗೂ ಹಳೆಯ ತಂತ್ರಜ್ಞಾನಗಳಿಂದ ಈ ಸಂಘಗಳು ಅಳಿವು-ಉಳಿವಿಗಾಗಿ ಹೋರಾಟ ನಡೆಸುವಂತಾಗಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ಸಹಾಯವಿದ್ದರೂ, ಸಂಘಗಳು ನಿಷ್ಕ್ರಿಯಗೊಂಡಿವೆ.</p>.<p>ನೇಕಾರಿಕೆಯು ಸಣ್ಣ ಹಾಗೂ ಅತಿ ಸಣ್ಣ ಗುಡಿ ಕೈಗಾರಿಕೆಯಾಗಿದ್ದು, ಮನೆಮಂದಿಯೆಲ್ಲ ಕೂಡಿ ಕೆಲಸ ಮಾಡುವ ಉದ್ದಿಮೆಯಾಗಿದೆ. ಬೃಹತ್ ಕಾರ್ಖಾನೆಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಇಂತಹ ಸಣ್ಣ ಉದ್ದಿಮೆಗೆ ಹೊಡೆತ ಬಿದ್ದಂತಾಗಿದೆ.</p>.<p>‘ನೇಯ್ಗೆಗೆ ಬೇಕಾಗುವ ನೂಲು, ಚಮಕಾ, ರೇಷ್ಮೆ ಪಾಲಿಸ್ಟರ್ ದರಗಳು ವಿಪರೀತ ಏರಿಕೆಯಾಗಿವೆ. ತಯಾರಿಸಿದ ಪಕ್ಕಾ ಮಾಲಿಗೆ ಮಾರುಕಟ್ಟೆಯೇ ಇಲ್ಲ. ಯುವ ಪೀಳಿಗೆ ವಿಮುಖವಾಗಿದ್ದರಿಂದ ನೇಕಾರರ ಕೊರತೆ ಕಾಡುತ್ತಿದೆ. ಸರ್ಕಾರದಿಂದ ಸಿಗುತ್ತಿದ್ದ ರಿಬೇಟ್ ಹೆಚ್ಚಿಸಬೇಕು. ಆರ್ಥಿಕ ನೆರವು ಸಕಾಲಕ್ಕೆ ದೊರೆಯುವಂತಾಗಬೇಕು’ ಎಂದು ಸೌಜನ್ಯ ಕೈಮಗ್ಗ ನೇಕಾರರ ಉತ್ಪಾದಕ ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್.ಗೊಂಬಿ ಹೇಳುತ್ತಾರೆ.</p>.<p>‘ನೇಕಾರಿಕೆ ಮಾಡಲು ಸರ್ಕಾರ ಆರ್ಥಿಕ ಸಹಾಯ ಧನ ಒದಗಿಸುತ್ತಿದ್ದರೂ ಕಳೆದ 3-4 ವರ್ಷಗಳಿಂದ ಆ ಸಹಾಯಧನವೂ ಪಾವತಿಯಾಗಿಲ್ಲ. ರೈತರಂತೆ ನೇಕಾರರನ್ನು ಕಾಣಬೇಕು. ರೈತರಷ್ಟೇ ನೇಕಾರರಿಗೆ ಕಷ್ಟವಿದೆ. ಮಗ್ಗಗಳನ್ನು ಗುಜರಿಗೆ ಹಾಕುವ ಪರಿಸ್ಥಿತಿ ಬಂದಿದೆ. ನೇಕಾರರ ಸಂಘಗಳಿಗೆ ಪುನಶ್ಚೇತನ ಪ್ಯಾಕೇಜ್, ಸಾಲ ಮನ್ನಾ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಬೆಂಬಲ ನೀಡಬೇಕಾಗಿದೆ’ ಎಂದು ಪ್ರಗತಿ ವಿದ್ಯುತ್ ಚಾಲಿತ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಜೀರಗಾಳ ಹೇಳುತ್ತಾರೆ.</p>.<p>‘ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಾಲ ಮತ್ತು ಬಡ್ಡಿ ತುಂಬಬೇಕಾದರೆ ನೇಕಾರರು ಮಗ್ಗಗಳನ್ನು ಮಾರಬೇಕು. ಸಂಘಗಳು ನೇಕಾರರಿಂದ ಸಾಲ ಮರುಪಾವತಿ ಮಾಡಿಕೊಳ್ಳದಿದ್ದರೆ, ಸರ್ಕಾರ ಬಡ್ಡಿ ಸಹಾಯಧನ ಒದಗಿಸದಿದ್ದರೆ ಸಹಕಾರಿ ಸಂಘಗಳು ಮುಚ್ಚುವ ಪರಿಸ್ಥಿತಿ ಬರಲಿವೆ. ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟರಕಿ ಆಗ್ರಹಿಸುತ್ತಾರೆ.</p>.<p>‘ನೇಕಾರರು ಸಂಘಗಳಿಂದ ಪಡೆದ ಸಾಲ ತೀರಿಸಲಾಗದೆ, ಸಂಘಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ. ಪವರ್ಲೂಮ್ (ಯಂತ್ರಮಗ್ಗ) ಮತ್ತು ಪವರ್ಲೂಮ್ ಸೀರೆಗಳು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ಕೈಮಗ್ಗ ಉತ್ಪನ್ನಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ನೂಲು, ಬಣ್ಣಗಳ ಬೆಲೆ ನಿರಂತರ ಏರಿಕೆ ಆಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಆಡಳಿತಾತ್ಮಕ ಲೋಪಗಳು ಸಂಘಗಳ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿವೆ. ಸಾಂಪ್ರದಾಯಿಕ ನೇಯ್ಗೆಯಲ್ಲಿ ಕಡಿಮೆ ಆದಾಯ ಇರುವುದರಿಂದ ಯುವಕರು ಈ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ’ ಎಂದು ನೇಕಾರ ರಾಜೇಂದ್ರ ಮಿರ್ಜಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><blockquote>ನೇಕಾರರ ಸಹಕಾರಿ ಸಂಘದ ಉತ್ತೇಜನಕ್ಕೆ ಸದ್ಯ ಯಾವುದೇ ಯೋಜನೆಗಳಿಲ್ಲ. ನೇಕಾರರಿಗೆ ಆರ್ಥಿಕ ಸಹಾಯಧನ ಸದ್ಯದಲ್ಲಿ ಬಿಡುಗಡೆಯಾಗಲಿದೆ. ನೇಕಾರರು ಹೊಸ ಯೋಜನೆ ಕೈಗೊಂಡರೆ ಅಗತ್ಯ ಸಹಕಾರ ನೀಡಲಾಗುವುದು </blockquote><span class="attribution">ಸತೀಶ ಕಮ್ಮಲದಿನ್ನಿ, ಸಹಾಯಕ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>