ಮುಧೋಳ: ದೇಶದ ಏಕತೆ ಸಂಕೇತವಾಗಿ ‘ನನ್ನ ಮಣ್ಣು ನನ್ನ ದೇಶದ ಅಭಿಯಾನ’ ಅಡಿಯಲ್ಲಿ ದೇಶಾದ್ಯಂತ ಮೃತ್ತಿಕೆ ಸಂಗ್ರಹಿಸಿ ಅಮೃತ ಉದ್ಯಾನ ನಿರ್ಮಾಣ ಮಾಡಲಾಗುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ನಗರದ ಐತಿಹಾಸಿಕ ದೇವಸ್ಥಾನ ಶ್ರೀರಾಮ ಮಂದಿರ ಹಾಗೂ ರನ್ನ ಸರ್ಕಾರಿ ಮಾದರಿ ಶಾಲೆ ಮತ್ತು ನಗರದ ವಿವಿಧ ಶಾಲೆಗಳಿಂದ ಅಮೃತ ಉದ್ಯಾನಕ್ಕಾಗಿ ಮಣ್ಣು ಸಂಗ್ರಹ ಮಾಡಲಾಯಿತು. ಅಭಿಯಾನದ ಜಿಲ್ಲಾ ಸಂಚಾಲಕ ನಂದು ಗಾಯಕವಾಡ ಮತ್ತು ಸಹ ಸಂಚಾಲಕ ವಿಠ್ಠಲ ಪರೀಟ, ನಗರ ಘಟಕದ ಅಧ್ಯಕ್ಷ ಡಾ.ರವಿ ನಂದಗಾಂವ, ಬಂಡು ಘಾಟಗೆ,
ನಾಗಪ್ಪ ಅಂಬಿ, ರವಿ ಲಕ್ಷಾಣಿ, ಬಸವರಾಜ ಘಟ್ನಟ್ಟಿ, ಸೋನಪ್ಪಿ ಕುಲಕರ್ಣಿ, ಅರುಣ ಕಾರಜೋಳ, ರಾಜು ಟಂಕಸಾಲಿ, ಮಹಾದೇವ ಇಂಗಳೆ, ಶಿವು ತೇಲಿ, ಮಾರುತಿ ಮೋರೆ, ಪ್ರಜ್ವಲ್ ಚಿಮ್ಮಡ, ಸಿದ್ದು ಜೀರಗಾಳ, ಪ್ರದೀಪ ನಿಂಬಾಳಕರ, ಕುಮಾರ ಪಮ್ಮಾರ, ಸುನೀಲ ನಿಂಬಾಳಕರ, ಸದಾ ಜಾಧವ ಮುಂತಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.