<p><strong>ಮುಧೋಳ</strong>: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ, ಗುಡುಗು ಸಿಡಿಲು ಮಿಶ್ರಿತ ಧಾರಾಕಾರ ಮಳೆಗೆ ನಗರದಲ್ಲಿ ಗ್ರಂಥಾಲಯ ಹಾಗೂ ದತ್ತ ಮಂದಿರ ರಸ್ತೆಯಲ್ಲಿ ಎರಡು ಮರಗಳು ಧರೆಗುರುಳಿದೆ.</p>.<p>ತಾಲ್ಲೂಕಿನ ಮಿರ್ಜಿ ಗ್ರಾಮದ ಡೊಂಗ್ರಿಸಾಬ ಕಾನಬೋಗಿ ಅವರಿಗೆ ಸೇರಿದ ಎರಡು ಎಮ್ಮಿ ಕರುಗಳು ಹಾಗೂ ಒಂದು ಹೋತ್ (ಆಡು) ಸಿಡಿಲಿನ ಬಡಿತಕ್ಕೆ ಮೃತಪಟ್ಟಿವೆ. ತಾಲ್ಲೂಕಿನಾದ್ಯಂತ 11 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಾದ ಬಾಳೆ, ಉಳ್ಳಾಗಡಿ, ಪಪ್ಪಾಯಿ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ.</p>.<p>ಮಾಚಕನೂರ ಗ್ರಾಮದಲ್ಲಿ ಬೆಳೆದ ಬಾಳೆ ನೆಲಕಚ್ಚಿದೆ. ಶೋಭಾ ದಾಸರಡ್ಡಿ ಅವರ 2.32 ಎಕರೆ, ರೂಪಾ ದಾಸರಡ್ಡಿ ಅವರ 2.16 ಎಕರೆ, ರೇಣುಕಾ ದಾಸರಡ್ಡಿ 3.18 ಎಕರೆ, ರಾಧಾಬಾಯಿ ಘೋರ್ಪಡೆ ಅವರ 2 ಎಕರೆ, ಅಕ್ಷಯಕುಮಾರ ಘೋರ್ಪಡೆ 2 ಎಕರೆ, ಶಿವಾಜಿ ಘೋರ್ಪಡೆ ಅವರ 3.23 ಎಕರೆ, ಹಣಮಂತ ನಾವಿ ಅವರ 1.22 ಎಕರೆ, ಉಮಾ ದಾಸರಡ್ಡಿ 2.06 ಎಕರೆ, ದಿವ್ಯಾ ದಾಸರಡ್ಡಿ ಅವರ 2.10 ಎಕರೆ ಹಾಗೂ ಸದಾಶಿವ ದಾಸರಡ್ಡಿ ಅವರ 1 ಎಕರೆ ಬಾಳೆ ನೆಲಕಚ್ಚಿದೆ.</p>.<p>ಹನಿ ಮಳೆಯಿಂದ ವಿದ್ಯುತ್ ಸಂಪರ್ಕ್ ಕಡಿತಗೊಳಿಸಲಾಗಿತ್ತು. ತೆಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನಕ್ಕೆ ಮಳೆ ಬಂದಿದ್ದು ಸಂತಸ ತಂದಿದೆ.</p>.<p>ಮಳೆಯಿಂದ ರೈತ ಸಮುದಾಯ ಖುಷಿಗೊಂಡಿದ್ದು ಕೃಷಿ ಚಟುವಟಿಗಕೆಗಳು ಭರದಿಂದ ಸಾಗಿದೆ. ಬೀಜ ಮಾರಾಟ ಕೇಂದ್ರದಲ್ಲಿ ರೈತರು ಬೀಜ ಖರೀದಿಸುತ್ತಿರುವುದು ಕಂಡು ಬಂತು.</p>.<p><strong>ಕುಳಗೇರಿ ಕ್ರಾಸ್:</strong> ಕುಳಗೇರಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ರಾತ್ರಿ ಭಾರಿ ಬಿರುಸಿನಿಂದ ಮಳೆ ಸುರಿಯಿತು. ಸ್ವಲ್ಪ ಹೊತ್ತು ಮಾತ್ರ ಸುರಿದ ಮಳೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಯಿತು. ಭೂಮಿಗೆ ಬೀಜವನ್ನು ಹಾಕುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ಉತ್ತೇಜನ ನೀಡಿದಂತಾಗಿದೆ ಎಂದು ರೈತ ಬೀರಪ್ಪ ದಂಡಿನ ತಿಳಿಸಿದರು.</p>.<p>ಆದರೆ ಕೃಷಿ ಚಟವಟಿಕೆಗಳನ್ನು ಕೈಗೊಳ್ಳಲು ಗ್ರಾಮದಲ್ಲಿರುವ ಮೂರು ಪೆಟ್ರೋಲ್ ಪಂಪ್ಗಳಲ್ಲಿ ಡೀಸೆಲ್ ಇರದ ಕಾರಣ ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗಿದೆ.</p>.<p>ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಂಪರ್ಕಿಸಿದಾಗ ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-19-1004325992</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ</strong>: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ, ಗುಡುಗು ಸಿಡಿಲು ಮಿಶ್ರಿತ ಧಾರಾಕಾರ ಮಳೆಗೆ ನಗರದಲ್ಲಿ ಗ್ರಂಥಾಲಯ ಹಾಗೂ ದತ್ತ ಮಂದಿರ ರಸ್ತೆಯಲ್ಲಿ ಎರಡು ಮರಗಳು ಧರೆಗುರುಳಿದೆ.</p>.<p>ತಾಲ್ಲೂಕಿನ ಮಿರ್ಜಿ ಗ್ರಾಮದ ಡೊಂಗ್ರಿಸಾಬ ಕಾನಬೋಗಿ ಅವರಿಗೆ ಸೇರಿದ ಎರಡು ಎಮ್ಮಿ ಕರುಗಳು ಹಾಗೂ ಒಂದು ಹೋತ್ (ಆಡು) ಸಿಡಿಲಿನ ಬಡಿತಕ್ಕೆ ಮೃತಪಟ್ಟಿವೆ. ತಾಲ್ಲೂಕಿನಾದ್ಯಂತ 11 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಾದ ಬಾಳೆ, ಉಳ್ಳಾಗಡಿ, ಪಪ್ಪಾಯಿ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ.</p>.<p>ಮಾಚಕನೂರ ಗ್ರಾಮದಲ್ಲಿ ಬೆಳೆದ ಬಾಳೆ ನೆಲಕಚ್ಚಿದೆ. ಶೋಭಾ ದಾಸರಡ್ಡಿ ಅವರ 2.32 ಎಕರೆ, ರೂಪಾ ದಾಸರಡ್ಡಿ ಅವರ 2.16 ಎಕರೆ, ರೇಣುಕಾ ದಾಸರಡ್ಡಿ 3.18 ಎಕರೆ, ರಾಧಾಬಾಯಿ ಘೋರ್ಪಡೆ ಅವರ 2 ಎಕರೆ, ಅಕ್ಷಯಕುಮಾರ ಘೋರ್ಪಡೆ 2 ಎಕರೆ, ಶಿವಾಜಿ ಘೋರ್ಪಡೆ ಅವರ 3.23 ಎಕರೆ, ಹಣಮಂತ ನಾವಿ ಅವರ 1.22 ಎಕರೆ, ಉಮಾ ದಾಸರಡ್ಡಿ 2.06 ಎಕರೆ, ದಿವ್ಯಾ ದಾಸರಡ್ಡಿ ಅವರ 2.10 ಎಕರೆ ಹಾಗೂ ಸದಾಶಿವ ದಾಸರಡ್ಡಿ ಅವರ 1 ಎಕರೆ ಬಾಳೆ ನೆಲಕಚ್ಚಿದೆ.</p>.<p>ಹನಿ ಮಳೆಯಿಂದ ವಿದ್ಯುತ್ ಸಂಪರ್ಕ್ ಕಡಿತಗೊಳಿಸಲಾಗಿತ್ತು. ತೆಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನಕ್ಕೆ ಮಳೆ ಬಂದಿದ್ದು ಸಂತಸ ತಂದಿದೆ.</p>.<p>ಮಳೆಯಿಂದ ರೈತ ಸಮುದಾಯ ಖುಷಿಗೊಂಡಿದ್ದು ಕೃಷಿ ಚಟುವಟಿಗಕೆಗಳು ಭರದಿಂದ ಸಾಗಿದೆ. ಬೀಜ ಮಾರಾಟ ಕೇಂದ್ರದಲ್ಲಿ ರೈತರು ಬೀಜ ಖರೀದಿಸುತ್ತಿರುವುದು ಕಂಡು ಬಂತು.</p>.<p><strong>ಕುಳಗೇರಿ ಕ್ರಾಸ್:</strong> ಕುಳಗೇರಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ರಾತ್ರಿ ಭಾರಿ ಬಿರುಸಿನಿಂದ ಮಳೆ ಸುರಿಯಿತು. ಸ್ವಲ್ಪ ಹೊತ್ತು ಮಾತ್ರ ಸುರಿದ ಮಳೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಯಿತು. ಭೂಮಿಗೆ ಬೀಜವನ್ನು ಹಾಕುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ಉತ್ತೇಜನ ನೀಡಿದಂತಾಗಿದೆ ಎಂದು ರೈತ ಬೀರಪ್ಪ ದಂಡಿನ ತಿಳಿಸಿದರು.</p>.<p>ಆದರೆ ಕೃಷಿ ಚಟವಟಿಕೆಗಳನ್ನು ಕೈಗೊಳ್ಳಲು ಗ್ರಾಮದಲ್ಲಿರುವ ಮೂರು ಪೆಟ್ರೋಲ್ ಪಂಪ್ಗಳಲ್ಲಿ ಡೀಸೆಲ್ ಇರದ ಕಾರಣ ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗಿದೆ.</p>.<p>ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಂಪರ್ಕಿಸಿದಾಗ ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-19-1004325992</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>