<p>ಮುಧೋಳ: ಗುರು ತೋರಿಸುವ ಸನ್ಮಾರ್ಗದಿಂದ ನಡೆದರೆ ಸತ್ಕಾರ್ಯ, ಮಾನವೀಯತೆಯಿಂದ ಸಕಲ ಜೀವರಾಶಿಗೆ ಲೇಸು ಬಯಸಿದರೆ ಜೀವನ ಸಂತೃಪ್ತಿಯಿಂದ ನಡೆಯುವುದು ಎಂದು ನಗರದ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದ ಸದ್ಗುರು ಪರಮೇಶ್ವರ ಸಾಧುಮಹಾರಾಜ ಹೇಳಿದರು.</p>.<p>ಅವರು ಸೋಮವಾರ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದಲ್ಲಿ ಶಿವಶರಣಾನಂದ ಶ್ರೀಗಳ ಪುಣ್ಯಾರಾಧನೆ ಹಾಗೂ 19 ನೇ ಮಹಾ ನವಬಂಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಶ್ರೀಗಳ ಆದರ್ಶ ಬದುಕು ನಮಗೆಲ್ಲ ಪ್ರೇರಣೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಹೇಳಿದರು.</p>.<p>ಇದರ ಅಂಗವಾಗಿ ಇದೇ 14 ದಿಂದಲೇ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ, ಪ್ರತಿನಿತ್ಯ ಸಂಜೆ ಶ್ರೀ ನಿತ್ಯಾನಂದ ಶ್ರೀಗಳಿಂದ ಸಂಗೀತ ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-19-61370447</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಧೋಳ: ಗುರು ತೋರಿಸುವ ಸನ್ಮಾರ್ಗದಿಂದ ನಡೆದರೆ ಸತ್ಕಾರ್ಯ, ಮಾನವೀಯತೆಯಿಂದ ಸಕಲ ಜೀವರಾಶಿಗೆ ಲೇಸು ಬಯಸಿದರೆ ಜೀವನ ಸಂತೃಪ್ತಿಯಿಂದ ನಡೆಯುವುದು ಎಂದು ನಗರದ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದ ಸದ್ಗುರು ಪರಮೇಶ್ವರ ಸಾಧುಮಹಾರಾಜ ಹೇಳಿದರು.</p>.<p>ಅವರು ಸೋಮವಾರ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದಲ್ಲಿ ಶಿವಶರಣಾನಂದ ಶ್ರೀಗಳ ಪುಣ್ಯಾರಾಧನೆ ಹಾಗೂ 19 ನೇ ಮಹಾ ನವಬಂಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಶ್ರೀಗಳ ಆದರ್ಶ ಬದುಕು ನಮಗೆಲ್ಲ ಪ್ರೇರಣೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಹೇಳಿದರು.</p>.<p>ಇದರ ಅಂಗವಾಗಿ ಇದೇ 14 ದಿಂದಲೇ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ, ಪ್ರತಿನಿತ್ಯ ಸಂಜೆ ಶ್ರೀ ನಿತ್ಯಾನಂದ ಶ್ರೀಗಳಿಂದ ಸಂಗೀತ ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-19-61370447</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>