ಘಟನೆಯ ವಿವರ: ಯುವತಿಗೆ ಪರಿಚಿತನೇ ಆಗಿದ್ದ ನಬಿಸಾಬ್, ಕಳೆದ ಏಳೆಂಟು ತಿಂಗಳಿನಿಂದ ಪದೇ ಪದೇ ಕರೆ ಮಾಡಿ ತನ್ನನ್ನು ಪ್ರೀತಿಸುವಂತೆ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಆತನ ಹಿಂಸೆ ತಾಳಲಾರದೇ ಆಕೆ ಈ ಸಂಗತಿಯನ್ನು ತನ್ನ ತಮ್ಮ ವಿಠ್ಠಲನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ವಿಠ್ಠಲ ಹಲವು ಬಾರಿ ನಬಿಸಾಬ್ಗೆ ಎಚ್ಚರಿಕೆ ನೀಡಿದ್ದನು.ಗುರುವಾರ ಕೂಡ ನಬಿಸಾಬ್ ಯುವತಿಗೆ ಹಲವು ಬಾರಿ ಕರೆ ಮಾಡಿದ್ದನು. ಆಗ ವಿಠ್ಠಲನೇ ಕರೆ ಸ್ವೀಕರಿಸಿದ್ದನು. ಆಕ್ರೋಶಗೊಂಡ ವಿಠ್ಠಲ, ನಬಿಸಾಬ್ಗೆ ಬುದ್ಧಿ ಕಲಿಸಲು ತೀರ್ಮಾನಿಸಿದ್ದಾನೆ.