ಘಟನೆಯ ವಿವರ: ಕಾವ್ಯಶ್ರೀ ತನ್ನ ಗಂಡನ ಸ್ನೇಹಿತ ಮಲ್ಲಪ್ಪನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಅದಕ್ಕೆ ಅಡ್ಡಿಯಾಗಿದ್ದ ಪತಿ ಪ್ರವೀಣನನ್ನು ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದರು ಎನ್ನಲಾಗಿದೆ. ಮೇ 9ರಂದು ಮನೆಯಿಂದ ತನ್ನ ಹೊಂಡಾ ಟ್ರಿಗ್ಗರ್ ಬೈಕ್ನಲ್ಲಿ ಹೊರಟಿದ್ದ ಪ್ರವೀಣ ಮಧ್ಯಾಹ್ನ 3 ಗಂಟೆಯ ವೇಳೆ ಮಲ್ಲಪ್ಪ ನಾಶಿಯ ಕಂಪ್ಯೂಟರ್ ಸೆಂಟರ್ನಲ್ಲಿ ಬಂದು ಮಲಗಿದ್ದನು. ಈ ಅವಕಾಶ ಬಳಸಿಕೊಂಡ ಮಲ್ಲಪ್ಪ, ಬೆಡ್ಶೀಟ್ನಿಂದ ಪ್ರವೀಣನ ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಅದೇ ದಿನ ರಾತ್ರಿ ಶವವನ್ನು ಚೀಲದಲ್ಲಿ ತುಂಬಿ ತನ್ನ ಬೈಕ್ನಲ್ಲಿ ಒಯ್ದು ಬಾವಿಯಲ್ಲಿ ಒಗೆದಿದ್ದನು.