<p>ಬೀಳಗಿ: ಸಮೀಪದ ನಾಗರಾಳ ಗ್ರಾಮದಲ್ಲಿ ಭಾನುವಾರ ಹಾಲೋಕಳಿಯು ಅದ್ದೂರಿಯಾಗಿ ನೆರವೇರಿತು.</p>.<p>ಕಪ್ಪರಪಡಿಯಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹಾಲೋಕಳಿ ನೋಡಲು ಸೇರಿದ ಸಾವಿರಾರು ಜನರು ಗಂಜಿ ಹಚ್ಚಿದ ಕಂಬವನ್ನು ಏರುತ್ತಿರುವ ಯುವಕರ ಮೋಜು ಮಸ್ತಿಯನ್ನು ಕಂಡು ಸಂಭ್ರಮಿಸಿದರು.</p>.<p>ಸಂಜೆ 5.30ಕ್ಕೆ ಪ್ರಾರಂಭವಾದ ಹಾಲೋಕಳಿಯು ಈ ಕಂಬವನ್ನು ಮೇಲೆರಲು ಯುವಕರು ತಾಮುಂದು ನಾಮುಂದು ಎಂದು ಹಾತೊರೆಯುತ್ತಿರುವ ದೃಶ್ಯ ಹಾಲೋಕಳಿ ನೋಡಲು ಸೇರಿದ ಸಹಸ್ರಾರು ಜನರ ಕಣ್ಮನ ಸೆಳೆದವು.</p>.<p>ಪೀಠಾಧಿಪತಿ ಶೇಷಪ್ಪಯ್ಯ ಸ್ವಾಮೀಜಿ, ನಿಯೋಜಿತ ಶ್ರೀಗಳಾದ ನಿಂಗಪ್ಪಯ್ಯ ಸ್ವಾಮೀಜಿ, ಸಿದ್ದಾಪುರ ಹುಚ್ಚಪ್ಪಯ್ಯ ಸ್ವಾಮೀಜಿ ಅವರು ಹಾಲೋಕಳಿ ಕಂಬದ ಎದುರು ನಿರ್ಮಿಸಿದ ವೇದಿಕೆ ಮೇಲೆ ಕುಳಿತು ತದೇಕಚಿತ್ತದಿಂದ ಹಾಲೋಕಳಿ ವೀಕ್ಷಿಸಿದರು.</p>.<p>ಜಾತ್ರಾ ಕಮಿಟಿಯ ರಾಜೇಂದ್ರ ದೇಶಪಾಂಡೆ ,ಪಿತಾಂಬ್ರೆಪ್ಪ ಕೋಲಾರ,ಹುಚ್ಚಪ್ಪ ಗಾಣಿಗೇರ, ವಿಠ್ಠಲ ತಿರಕನ್ನವರ,ಬುಡ್ಡೆಸಾಬ ತಹಶಿಲ್ದಾರ್, ಶರಣಪ್ಪ ಕುಂಬಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-19-178189155</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀಳಗಿ: ಸಮೀಪದ ನಾಗರಾಳ ಗ್ರಾಮದಲ್ಲಿ ಭಾನುವಾರ ಹಾಲೋಕಳಿಯು ಅದ್ದೂರಿಯಾಗಿ ನೆರವೇರಿತು.</p>.<p>ಕಪ್ಪರಪಡಿಯಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹಾಲೋಕಳಿ ನೋಡಲು ಸೇರಿದ ಸಾವಿರಾರು ಜನರು ಗಂಜಿ ಹಚ್ಚಿದ ಕಂಬವನ್ನು ಏರುತ್ತಿರುವ ಯುವಕರ ಮೋಜು ಮಸ್ತಿಯನ್ನು ಕಂಡು ಸಂಭ್ರಮಿಸಿದರು.</p>.<p>ಸಂಜೆ 5.30ಕ್ಕೆ ಪ್ರಾರಂಭವಾದ ಹಾಲೋಕಳಿಯು ಈ ಕಂಬವನ್ನು ಮೇಲೆರಲು ಯುವಕರು ತಾಮುಂದು ನಾಮುಂದು ಎಂದು ಹಾತೊರೆಯುತ್ತಿರುವ ದೃಶ್ಯ ಹಾಲೋಕಳಿ ನೋಡಲು ಸೇರಿದ ಸಹಸ್ರಾರು ಜನರ ಕಣ್ಮನ ಸೆಳೆದವು.</p>.<p>ಪೀಠಾಧಿಪತಿ ಶೇಷಪ್ಪಯ್ಯ ಸ್ವಾಮೀಜಿ, ನಿಯೋಜಿತ ಶ್ರೀಗಳಾದ ನಿಂಗಪ್ಪಯ್ಯ ಸ್ವಾಮೀಜಿ, ಸಿದ್ದಾಪುರ ಹುಚ್ಚಪ್ಪಯ್ಯ ಸ್ವಾಮೀಜಿ ಅವರು ಹಾಲೋಕಳಿ ಕಂಬದ ಎದುರು ನಿರ್ಮಿಸಿದ ವೇದಿಕೆ ಮೇಲೆ ಕುಳಿತು ತದೇಕಚಿತ್ತದಿಂದ ಹಾಲೋಕಳಿ ವೀಕ್ಷಿಸಿದರು.</p>.<p>ಜಾತ್ರಾ ಕಮಿಟಿಯ ರಾಜೇಂದ್ರ ದೇಶಪಾಂಡೆ ,ಪಿತಾಂಬ್ರೆಪ್ಪ ಕೋಲಾರ,ಹುಚ್ಚಪ್ಪ ಗಾಣಿಗೇರ, ವಿಠ್ಠಲ ತಿರಕನ್ನವರ,ಬುಡ್ಡೆಸಾಬ ತಹಶಿಲ್ದಾರ್, ಶರಣಪ್ಪ ಕುಂಬಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-19-178189155</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>