‘ಶಿಕ್ಷಣ ನನಗೆ ದುಬಾರಿಯಾಗಲಿಲ್ಲ, ಶಿಷ್ಯವೇತನ, ಕಡಿಮೆ ಶುಲ್ಕ ನನ್ನ ಸಾಧನೆಗೆ ಶಕ್ತಿಯಾಯಿತು. ಒಳ್ಳೆಯಸ್ನೇಹಿತರ ಸಹವಾಸ, ಪಾಲಕರಿಂದ ಸಂಸ್ಕಾರ, ಶಿಕ್ಷಕರ ಮಾರ್ಗದರ್ಶನದ ಕಾರಣ ಗುರಿ ಮುಟ್ಟಿದ್ದೇನೆ. ಯಾವುದೂ ಕಠಿಣವಲ್ಲ. ಗ್ರಾಮೀಣರು ಪ್ರಯತ್ನದಿಂದ ಸಾಧನೆ ಮಾಡಬಹುದು‘ ಎಂದು ಹೇಳಿದ ಮಂಜುನಾಥ, ಓದು ಮುಗಿದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಯೋಚನೆ ಹೊಂದಿದ್ದಾರೆ.