<p><strong>ಬಾದಾಮಿ:</strong> ‘ತಾಲ್ಲೂಕಿನ ಕೆರೂರಿನ ಜಿ.ಎಸ್. ಗದ್ದಗಿಮಠ ಮತ್ತು ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರು ಉತ್ತರ ಕರ್ನಾಟಕದ ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಉಳಿಸಿ ಬೆಳೆಸಿ ಶ್ರೀಮಂತಗೊಳಿಸಿದರು ’ ಎಂದು ಹುನಗುಂದ ವಿ.ಎಂ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ತಿಪ್ಪೇಸ್ವಾಮಿ ಡಿ.ಎಸ್. ಹೇಳಿದರು.</p>.<p>ಕಾಲೇಜು ಶಿಕ್ಷಣ ಇಲಾಖೆಯ ಬಾಗಲಕೋಟೆ ವಿಶ್ವ ವಿದ್ಯಾಲಯ ಜಮಖಂಡಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಸಹಯೋಗದಲ್ಲಿ ಹೇಮರಡ್ಡಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಜನಪದ ನೃತ್ಯ ಮತ್ತು ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.</p>.<p>‘ಕರ್ನಾಟಕ ವಿವಿ ಪ್ರಾಧ್ಯಾಪಕರಾಗಿದ್ದ ಜಿ.ಎಸ್. ಗದ್ದಗಿಮಠ ಅವರು ಗ್ರಾಮೀಣ ಪ್ರದೇಶದಲ್ಲಿ ಜನಪದ ಸಾಹಿತ್ಯ ಸಂಗ್ರಹಿಸಲು ಚಕ್ಕಡಿಯಲ್ಲಿ ಹೋಗುತ್ತಿದ್ದರು. ಕ.ವಿ.ವಿ. ಯಲ್ಲಿ ಅವರು ಸಂಶೋಧನೆ ಮಾಡಿದ ಗ್ರಂಥ, ಮೊದಲ ಜಾನಪದ ಸಂಶೋಧನಾ ಗ್ರಂಥವಾಗಿದೆ’ ಎಂದರು.</p>.<p>‘ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದರೆ, ಜನಪದ ಸಾಹಿತ್ಯಕ್ಕೆ ಜನರು ಹುಟ್ಟಿದಾಗಿನಿಂದ ಇತಿಹಾಸವಿದೆ. ಜನಪದ ಸಾಹಿತ್ಯಕ್ಕೆ ಕಾಲಮಿತಿ ಇಲ್ಲ, ಸಾವಿರಾರು ವರ್ಷಗಳ ಹಿಂದೆಯೇ ತ್ರಿಪದಿ ರೂಪದಲ್ಲಿರುವುದನ್ನು ಸಂಶೋಧನೆ ಮಾಡಿದ್ದಾರೆ ’ ಎಂದು ಅತಿಥಿಯಾಗಿದ್ದ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್. ಹೊರಕೇರಿ ಹೇಳಿದರು.</p>.<p>‘ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿನ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಅಧ್ಯಯನ ಮಾಡಬೇಕು ’ ಎಂದು ಸಮಾರಂಭಕ್ಕೆ ಚಾಲನೆ ನೀಡಿದ ಕಾಲೇಜು ಸಮಿತಿ ಸದಸ್ಯ ಎಂ.ಐ. ಬಾರಾವಲಿ ಹೇಳಿದರು.</p>.<p>ಪ್ರಾಚಾರ್ಯ ಶಿವಾನಂದ ರಾಯನಗೌಡರ ಅಧ್ಯಕ್ಷತೆ ವಹಿಸಿ, ‘ಜನಪದ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಯುವ ಜನಾಂಗ ಉಳಿಸಬೇಕು’ ಎಂದರು.</p>.<p>ನಿರ್ಣಾಯಕರಾಗಿ ನಾಗರಾಜ ಹೊಟ್ಟಿ, ಪವಿತ್ರಾ ಜಕ್ಕಪ್ಪನವರ, ಶಂಕರ ನಾಯಕ ಪಾಲ್ಗೊಂಡಿದ್ದರು. ಆರ್.ಎಸ್. ಪೂಜಾರ, ಹನುಮಂತ ಅಪ್ಪಣ್ಣವರ, ಎಂ.ಎಸ್. ಸಿದ್ದಲಿಂಗಪ್ಪನವರ, ಗೋವರ್ಧನ ಪಿ.ಟಿ. ಇದ್ದರು.</p>.<p>ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾಂಚನಮಾಲಾ ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬುರಾಯಣ್ಣ ಧನ್ನೂರ ಅಭಿನಂದಿಸಿದರು.</p>.<h2> ಪ್ರಶಸ್ತಿ ವಿಜೇತರು: </h2><p>ಜನಪದ ನೃತ್ಯ: ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಎಸ್.ಬಿ. ಮಮದಾಪೂರ ಪದವಿ ಕಾಲೇಜ್ ಬಾದಾಮಿ (ತೃತೀಯ). ಜನಪದ ಗೀತಗಾಯನ : ಎಸ್.ಬಿ. ಮಮದಾಪೂರ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ತೃತೀಯ) ಪ್ರಶಸ್ತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ತಾಲ್ಲೂಕಿನ ಕೆರೂರಿನ ಜಿ.ಎಸ್. ಗದ್ದಗಿಮಠ ಮತ್ತು ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರು ಉತ್ತರ ಕರ್ನಾಟಕದ ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಉಳಿಸಿ ಬೆಳೆಸಿ ಶ್ರೀಮಂತಗೊಳಿಸಿದರು ’ ಎಂದು ಹುನಗುಂದ ವಿ.ಎಂ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ತಿಪ್ಪೇಸ್ವಾಮಿ ಡಿ.ಎಸ್. ಹೇಳಿದರು.</p>.<p>ಕಾಲೇಜು ಶಿಕ್ಷಣ ಇಲಾಖೆಯ ಬಾಗಲಕೋಟೆ ವಿಶ್ವ ವಿದ್ಯಾಲಯ ಜಮಖಂಡಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಸಹಯೋಗದಲ್ಲಿ ಹೇಮರಡ್ಡಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಜನಪದ ನೃತ್ಯ ಮತ್ತು ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.</p>.<p>‘ಕರ್ನಾಟಕ ವಿವಿ ಪ್ರಾಧ್ಯಾಪಕರಾಗಿದ್ದ ಜಿ.ಎಸ್. ಗದ್ದಗಿಮಠ ಅವರು ಗ್ರಾಮೀಣ ಪ್ರದೇಶದಲ್ಲಿ ಜನಪದ ಸಾಹಿತ್ಯ ಸಂಗ್ರಹಿಸಲು ಚಕ್ಕಡಿಯಲ್ಲಿ ಹೋಗುತ್ತಿದ್ದರು. ಕ.ವಿ.ವಿ. ಯಲ್ಲಿ ಅವರು ಸಂಶೋಧನೆ ಮಾಡಿದ ಗ್ರಂಥ, ಮೊದಲ ಜಾನಪದ ಸಂಶೋಧನಾ ಗ್ರಂಥವಾಗಿದೆ’ ಎಂದರು.</p>.<p>‘ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದರೆ, ಜನಪದ ಸಾಹಿತ್ಯಕ್ಕೆ ಜನರು ಹುಟ್ಟಿದಾಗಿನಿಂದ ಇತಿಹಾಸವಿದೆ. ಜನಪದ ಸಾಹಿತ್ಯಕ್ಕೆ ಕಾಲಮಿತಿ ಇಲ್ಲ, ಸಾವಿರಾರು ವರ್ಷಗಳ ಹಿಂದೆಯೇ ತ್ರಿಪದಿ ರೂಪದಲ್ಲಿರುವುದನ್ನು ಸಂಶೋಧನೆ ಮಾಡಿದ್ದಾರೆ ’ ಎಂದು ಅತಿಥಿಯಾಗಿದ್ದ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್. ಹೊರಕೇರಿ ಹೇಳಿದರು.</p>.<p>‘ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿನ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಅಧ್ಯಯನ ಮಾಡಬೇಕು ’ ಎಂದು ಸಮಾರಂಭಕ್ಕೆ ಚಾಲನೆ ನೀಡಿದ ಕಾಲೇಜು ಸಮಿತಿ ಸದಸ್ಯ ಎಂ.ಐ. ಬಾರಾವಲಿ ಹೇಳಿದರು.</p>.<p>ಪ್ರಾಚಾರ್ಯ ಶಿವಾನಂದ ರಾಯನಗೌಡರ ಅಧ್ಯಕ್ಷತೆ ವಹಿಸಿ, ‘ಜನಪದ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಯುವ ಜನಾಂಗ ಉಳಿಸಬೇಕು’ ಎಂದರು.</p>.<p>ನಿರ್ಣಾಯಕರಾಗಿ ನಾಗರಾಜ ಹೊಟ್ಟಿ, ಪವಿತ್ರಾ ಜಕ್ಕಪ್ಪನವರ, ಶಂಕರ ನಾಯಕ ಪಾಲ್ಗೊಂಡಿದ್ದರು. ಆರ್.ಎಸ್. ಪೂಜಾರ, ಹನುಮಂತ ಅಪ್ಪಣ್ಣವರ, ಎಂ.ಎಸ್. ಸಿದ್ದಲಿಂಗಪ್ಪನವರ, ಗೋವರ್ಧನ ಪಿ.ಟಿ. ಇದ್ದರು.</p>.<p>ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾಂಚನಮಾಲಾ ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬುರಾಯಣ್ಣ ಧನ್ನೂರ ಅಭಿನಂದಿಸಿದರು.</p>.<h2> ಪ್ರಶಸ್ತಿ ವಿಜೇತರು: </h2><p>ಜನಪದ ನೃತ್ಯ: ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಎಸ್.ಬಿ. ಮಮದಾಪೂರ ಪದವಿ ಕಾಲೇಜ್ ಬಾದಾಮಿ (ತೃತೀಯ). ಜನಪದ ಗೀತಗಾಯನ : ಎಸ್.ಬಿ. ಮಮದಾಪೂರ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ತೃತೀಯ) ಪ್ರಶಸ್ತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>