ಗ್ರಾಮೀಣ ಪ್ರದೇಶಗಳಲ್ಲಿ ಶೇಂಗಾ ಒಡೆದು ಬೀಜ ಸಂಗ್ರಹಿಸುವ ಕೆಲಸ ಭರದಿಂದ ನಡೆದಿದೆ. ಸರ್ಕಾರ ಬೀಜ ವಿತರಿಸುವ ಪೂರ್ವದಲ್ಲಿ ರೈತರೇ ಎಲ್ಲ ರೀತಿಯ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ, ಬೀಜ ನಿಗಮ ಅಸ್ತಿತ್ವಕ್ಕೆ ಬಂದ ನಂತರ ಬೀಜ ಸಂಗ್ರಹಣೆಯಿಂದ ರೈತರು ದೂರ ಸರಿದಿದ್ದಾರೆ. ಬಳ್ಳಿ ಶೇಂಗಾದ ಬೀಜವನ್ನು ಮಾತ್ರ ಈಗಲೂ ರೈತರೇ ಸಿದ್ಧ ಮಾಡಿಕೊಳ್ಳುತ್ತಾರೆ. ಈ ವರ್ಷವೂ ಶೇಂಗಾ ಕಾಯಿ ಒಡೆಯುವ ಸುಗ್ಗಿ ತಾಲ್ಲೂಕಿನಾದ್ಯಂತ ಆರಂಭವಾಗಿರುವುದು ಕಂಡು ಬರುತ್ತಿದೆ.