<p><strong>ಬಾಗಲಕೋಟೆ: </strong>ತಮಿಳುನಾಡಿನ ಮಧುರೈನಿಂದ ಇಳಕಲ್ ನಗರಕ್ಕೆ ಬಂದ ಸರಕು ತುಂಬಿದ ಲಾರಿಯಲ್ಲಿ ವೃದ್ಧೆಯ ರುಂಡ ಪತ್ತೆಯಾಗಿದೆ.</p>.<p>ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ತಲೆ ಕತ್ತರಿಸಿ ಚೀಲದಲ್ಲಿ ತುಂಬಿ ಲಾರಿಯಲ್ಲಿ (ಟಿಎನ್-52, ಆರ್-7952) ಎಸೆಯಲಾಗಿದೆ.</p>.<p>ಲಾರಿಯಲ್ಲಿದ್ದ ಗ್ರಾನೈಟ್ ಫಲಕಗಳನ್ನು ಇಳಿಸುವಾಗ ಒಳಗೆ ಬಿದ್ದಿದ್ದ ಚೀಲ ತೆಗೆದು ಚಾಲಕ ನೋಡಿದಾಗ ರುಂಡ ಕಂಡು ಬಂದಿದೆ.</p>.<p>ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಹಿನ್ನೆಲೆ ಲಾರಿಯಲ್ಲಿ ರುಂಡ ಎಸೆದಿರುಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಶಂಕಿಸಿದ್ದಾರೆ.</p>.<p>ಲಾರಿ ಚಾಲಕ ರಾಜಾ ಕಲ್ಯಾಣಸುಂದರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ತಮಿಳುನಾಡಿನ ಮಧುರೈನಿಂದ ಇಳಕಲ್ ನಗರಕ್ಕೆ ಬಂದ ಸರಕು ತುಂಬಿದ ಲಾರಿಯಲ್ಲಿ ವೃದ್ಧೆಯ ರುಂಡ ಪತ್ತೆಯಾಗಿದೆ.</p>.<p>ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ತಲೆ ಕತ್ತರಿಸಿ ಚೀಲದಲ್ಲಿ ತುಂಬಿ ಲಾರಿಯಲ್ಲಿ (ಟಿಎನ್-52, ಆರ್-7952) ಎಸೆಯಲಾಗಿದೆ.</p>.<p>ಲಾರಿಯಲ್ಲಿದ್ದ ಗ್ರಾನೈಟ್ ಫಲಕಗಳನ್ನು ಇಳಿಸುವಾಗ ಒಳಗೆ ಬಿದ್ದಿದ್ದ ಚೀಲ ತೆಗೆದು ಚಾಲಕ ನೋಡಿದಾಗ ರುಂಡ ಕಂಡು ಬಂದಿದೆ.</p>.<p>ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಹಿನ್ನೆಲೆ ಲಾರಿಯಲ್ಲಿ ರುಂಡ ಎಸೆದಿರುಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಶಂಕಿಸಿದ್ದಾರೆ.</p>.<p>ಲಾರಿ ಚಾಲಕ ರಾಜಾ ಕಲ್ಯಾಣಸುಂದರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>