ಸಾರ್ವಕರ್ಗೆ ಭಾರತ ರತ್ನ; ವಿರೋಧ ಸರಿಯಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

ಬಾಗಲಕೋಟೆ: ‘ವಿವಾದಾಸ್ಪದ ಕೆಲಸಗಳನ್ನು ಮಾಡಿದ ಟಿಪ್ಪು ಸುಲ್ತಾನ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಕೊಡ್ತಾರೆ, ವೀರ ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ಕೊಡೋದಕ್ಕೆ ವಿರೊಧಿಸುತ್ತಾರೆ. ಅದು ಸರಿಯಲ್ಲ‘ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವೀರ ಸಾರ್ವಕರ್ ಅಪರಾಧಿ ಎಂದು ಅಂದಿನ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಎಲ್ಲಿಯೂ ಹೇಳಿಲ್ಲ. ಹಾಗಿದ್ದರೆ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಬೇಕಿತ್ತು‘ ಎಂದರು.
ಇದನ್ನೂ ಓದಿ... ಸಿದ್ಧಗಂಗಾ ಶ್ರೀಗೆ ಭಾರತ ರತ್ನ ಕೊಡಿ: ಸಿದ್ದರಾಮಯ್ಯ
‘ಗಾಂಧಿ ಹತ್ಯೆಯಲ್ಲಿ ಆರ್ಎಸ್ಎಸ್ ಹಾಗೂ ಸಾವರ್ಕರ್ ಕೈವಾಡ ಇತ್ತು ಎಂದು ಹೇಳೋದು ಸರಿಯಲ್ಲ. ಸಾರ್ವಕರ್ ಅವರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಖಂಡಿತವಾಗಿಯೂ ಬಲಬಂದಿತ್ತು. ಅವರೊಬ್ಬ ಅಪ್ರತಿಮ ದೇಶಭಕ್ತ‘ ಎಂದು ಬಣ್ಣಿಸಿದರು.
‘ರಾಮಜನ್ಮಭೂಮಿ ವಿವಾದ ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥವಾದರೆ ಒಳ್ಳೆಯದು. ಹಿಂದೂ–ಮುಸ್ಲಿಮರ ನಡುವೆ ಪ್ರೀತಿ ಬೆಳೆಯುತ್ತೆ. ತೀರ್ಪು ಬಂದರೆ ಮಾನಸಿಕ ಘರ್ಷಣೆಗೆ ಕಾರಣವಾಗುತ್ತದೆ. ಕೋರ್ಟ್ ತೀರ್ಪಿನಿಂದ ಗೆದ್ದೆ, ಸೋತೆ ಅನ್ನೋ ಭಾವನೆ ಬರುತ್ತದೆ‘ ಎಂದು ಹೇಳಿದರು.
ಇನ್ನಷ್ಟು...
‘ಸಾವರ್ಕರ್, ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಭೂಮಿ ಮೇಲಿರಬಾರದು’
ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನವೇ ದಯಿಸುತ್ತಿರಲಿಲ್ಲ: ಉದ್ಧವ್ ಠಾಕ್ರೆ
ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಹೆಸರಿತ್ತು, ಮರೆಯಬೇಡಿ: ದಿಗ್ವಿಜಯ್ ಸಿಂಗ್
ಅಂಬೇಡ್ಕರ್ಗೆ ಭಾರತರತ್ನ ನಿರಾಕರಿಸಿದವರಿಂದಲೇ ಸಾವರ್ಕರ್ಗೆ ಅವಮಾನ
ಭಾರತ ರತ್ನ-ರಾಜ್ಯೋತ್ಸವ ಪ್ರಶಸ್ತಿ | ಸಿದ್ದರಾಮಯ್ಯ VS ಸಿ.ಟಿ.ರವಿ ಟ್ವೀಟ್ ವಾರ್
‘ಸಾವರ್ಕರ್, ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಭೂಮಿ ಮೇಲಿರಬಾರದು’
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.