ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಮಂಡಳಿಯ ಈ ನಡೆ, ಕೈಗಾರಿಕೋದ್ಯಮಿಗಳ ಜತೆಗೆ ರೈತ ಸಮೂಹವನ್ನು ಸಹ ತನ್ನ ಭ್ರಷ್ಟಾಚಾರದ ತೆಕ್ಕೆಗೆ ಸೆಳೆದುಕೊಳ್ಳುವ ಹೀನ ಕೃತ್ಯವಾಗಿದೆ. ಗೋಶಾಲೆಗಳು, ಡೇರಿಗಳು ಮತ್ತು ಹಸು ಸಾಕಣೆ ಮಾಡುವ ರೈತರು ಸಗಣಿ, ಗಂಜಲು ಮತ್ತಿತರ ತ್ಯಾಜ್ಯಗಳ ನಿರ್ವಹಣೆಯನ್ನು 1974ರ ಜಲ ಕಾಯ್ದೆ ಮತ್ತು 1981 ವಾಯು ಸಂರಕ್ಷಣೆ ಮತ್ತು ಮಾಲಿನ್ಯ ಮಾಲಿನ್ಯ ಕಾಯ್ದೆ ವ್ಯಾಪ್ತಿಗೆ ತರಲು ನಿರ್ಧರಿಸುವ ಕ್ರಮವು ಅವಿವೇಕತನದ್ದಾಗಿದೆ ಎಂದು ಕಿಡಿ ಕಾರಿದ್ದಾರೆ.