ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 2ರಿಂದ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈರಯ್ಯ ಪ್ಲಾಸ್ಟಿಕ್ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್ಗೆ ಬರುವವರಿಗೆ ಶನಿವಾರ ಹಾಗೂ ಭಾನುವಾರ (ಅಕ್ಟೋಬರ್ 19, 20) ಉಚಿತವಾಗಿ ಊಟ ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.