ಮುಕ್ತಿಬಾವುಟದ ಹರಾಜಿನ ನಂತರ, ಅದೇ ಬಾವುಟವನ್ನು ರಥಕ್ಕೆ ತೊಡಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ರಥದ ಮುಕ್ತಿ ಬಾವುಟ ಪಡೆದರೆ ಆರೋಗ್ಯ, ಸಂಪತ್ತು, ವ್ಯಾಪಾರ, ವ್ಯವಹಾರ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಉದ್ಯಮಿಗಳು, ರಾಜಕಾರಣಿಗಳು ಇದನ್ನು ಪಡೆಯಲು ಪ್ರತಿ ವರ್ಷ ಪೈಪೋಟಿ ನಡೆಸುತ್ತಾರೆ.