ಹಂತಕ ಬೈಕ್ನಲ್ಲಿ ಬಂದು ಗೌರಿಯತ್ತ ಗುಂಡು ಹಾರಿಸಿದ್ದ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆ ದೃಶ್ಯಗಳು ಸ್ಪಷ್ಟವಾಗಿರಲಿಲ್ಲ. ಕೃತ್ಯದಲ್ಲಿ ನವೀನ್ ಮೇಲೆ ಅನುಮಾನ ಹೊಂದಿರುವ ಎಸ್ಐಟಿ, ಆತನ ಹಾಗೂ ಹಂತಕನ ನಡುವೆ ಏನಾದರೂ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಈ ಪ್ರಕ್ರಿಯೆ ಮಾಡಿಸಿತು.