<p><strong>ಗುಳೇದಗುಡ್ಡ:</strong> ಪಟ್ಟಣದ ಬನ್ನಿಕಟ್ಟಿ ಹತ್ತಿರ ಇರುವ ಪುರಸಭೆ ಕಟ್ಟಡದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯ ಸೌಲಭ್ಯಗಳಿಂದ ವಂಚಿತವಾಗಿದೆ. ಪಟ್ಟಣದಲ್ಲಿ ಸಾರ್ವಜನಿಕರ ಓದಿಗಾಗಿ ಇರುವ ಏಕೈಕ ಕೇಂದ್ರವಾಗಿದ್ದರೂ ಇಲ್ಲಿ ಓದಲು ಸೌಲಭ್ಯಗಳೇ ಇಲ್ಲ.</p>.<p>ಗ್ರಂಥಾಲಯ ಕಟ್ಟಡ 30 *10 ಅಳತೆಯ ಕ್ಷೇತ್ರದಲ್ಲಿ ಸಣ್ಣ ಕಟ್ಟಡವಿದೆ ಅದರಲ್ಲಿ ಕಚೇರಿ ಒಳಗೊಂಡಿದೆ. ಗ್ರಂಥಾಲಯದ ಮುಂದೆ ಒಂದು ಸಣ್ಣ ರೂಂ ಇದ್ದು ಅದರಲ್ಲಿ ಎಲ್ಲ ಪುಸ್ತಕಗಳನ್ನು ರ್ಯಾಕ್ನಲ್ಲಿ ಇಡಲಾಗಿದೆ. ಸುಮಾರು 300ಕ್ಕೂ ಅಧಿಕ ಹೆಚ್ಚುವರಿ ಪುಸ್ತಕಗಳನ್ನು ನೆಲದಮೇಲೆ ಇಡಲಾಗಿದೆ. ಅದಕ್ಕೂ ಜಾಗದ ಕೊರತೆಯಾಗಿದೆ. ಓದುವ ಕೊಠಡಿಯು ಒಂದೇ ಇದ್ದು ಅದರಲ್ಲಿ ದಿನಪತ್ರಿಕೆ ಓದಲು ಇದ್ದ ಕಟ್ಟಿಗೆಯ ಸ್ಟ್ಯಾಂಡ್ಗಳು ಮುರಿದು ಹೋಗಿವೆ. ಅವುಗಳನ್ನು ಅಲ್ಲಿಯೇ ಒಂದರ ಮೇಲೊಂದು ಇಡಲಾಗಿದೆ. ಕಚೇರಿಯಲ್ಲಿಯೂ ಮುರಿದು ಹೋದ ಟೇಬಲ್ ಮತ್ತು ಸ್ಟ್ಯಾಂಡ್ಗಳನ್ನು ಇಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಓದಲು ಸ್ಥಳದ ಕೊರತೆ ಇದೆ. ಇಲ್ಲಿ ಕುಳಿತು ಓದಲು ಕೇವಲ 10 ಜನರಿಗೆ ಮಾತ್ರ ಅವಕಾಶವಿದೆ. ನಿಂತು ಓದಲು ಸ್ಥಳವಿಲ್ಲ.</p>.<p>ಒಟ್ಟು 2220 ಜನ ಸದಸ್ಯರಿದ್ದು ಗ್ರಂಥಾಲಯದಲ್ಲಿ ವಿವಿಧ ಬಗೆಯ ಒಟ್ಟು 32,327 ಪುಸ್ತಕಗಳಿವೆ.<br> ಎರಡು ಮೂರು ವರ್ಷಗಳಿಂದ ಸುರಿದ ಮಳೆಯಿಂದ ಗ್ರಂಥಾಲಯ ಸೋರಿ ಕಟ್ಟಿಗೆಯ ಟೇಬಲ್, ಸ್ಟ್ಯಾಂಡ್ಗಳು ನೆನೆದು ಹಾಳಾಗಿವೆ. ‘ಸೋರುತಿಹುದು ಗ್ರಂಥಾಲಯ ಮಾಳಿಗೆ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ಕಳೆದ ವರ್ಷ ವಿಶೇಷ ವರದಿ ಪ್ರಕಟಿಸಿದ ನಂತರ ಎಚ್ಚೆತ್ತುಕೊಂಡ ಪುರಸಭೆ ಮಾಳಿಗೆಯ ಮೇಲೆ ತಗಡುಗಳನ್ನು ಹಾಕಿದೆ.</p>.<p><strong>ಹೊಸ ಕಟ್ಟಡಕ್ಕೆ ಜಾಗದ ಕೊರತೆ</strong> : ಲೋಕೋಪಯೋಗಿ ಇಲಾಖೆಯಿಂದ ಹೊಸ ಕಟ್ಟಡ ಕಟ್ಟಲು ಯೋಜನೆ ರೂಪಿಸಿದ್ದು ಸರ್ಕಾರ 3 ಕೋಟಿ 75 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಪುರಸಭೆಯಿಂದ ಸೂಕ್ತ ಜಾಗ ತೋರಿಸದ ಹಿನ್ನಲೆಯಲ್ಲಿ ಕಟ್ಟಡ ಕಾಮಗಾರಿ ಇಂದಿಗೂ ಆರಂಭವಾಗಿಲ್ಲ.</p>.<p><strong>ಜಾಗಕ್ಕಾಗಿ ಮನವಿ</strong></p><p> ಗುಳೇದಗುಡ್ಡ ಪಟ್ಟಣದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಲು ಎರಡು ಮೂರು ಕಡೆ ಜಾಗ ನೋಡಲಾಗಿದೆ. ಸೂಕ್ತ ಜಾಗ ಇರದೆ ಇರುವುದರಿಂದ ಪ್ರಸ್ತುತ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ ವಿಶಾಲವಾಗಿದ್ದು ಒಂದು ಕಡೆ ಕಟ್ಟಲು ಮನವಿ ಮಾಡಲಾಗಿದೆ. ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರದ ಅನುಮತಿ ದೊರೆತರೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಬಾದಾಮಿಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವೈ.ಎಫ್.ಆಡೀನ ತಿಳಿಸಿದ್ದಾರೆ.</p>.<div><blockquote>ಇದ್ದ ಕಟ್ಟಡದಲ್ಲಿ ಇದ್ದ ವ್ಯವಸ್ಥೆಯೊಂದಿಗೆ ಗ್ರಂಥಾಲಯ ನಡೆಸಿಕೊಂಡು ಹೋಗಲಾಗುತ್ತಿದೆ. </blockquote><span class="attribution">-ಬಸವರಾಜ ಮೊಕಾಶಿ, ಗ್ರಂಥಪಾಲಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ, ಗುಳೇದಗುಡ್ಡ</span></div>.<div><blockquote>ಕಟ್ಟಡದಲ್ಲಿ ಸ್ಥಳದ ಕೊರತೆ ಇರುವುದು ನಿಜ. ಪುರಸಭೆ ಮುಖ್ಯಾಧಿಕಾರಿಗಳಿಗೆ ದೊಡ್ಡ ಕಟ್ಟಡ ಇದ್ದರೆ ನೀಡಲು ಮನವಿ ಮಾಡಲಾಗಿದೆ.</blockquote><span class="attribution">-ಹಾಜಿರಾ ನದಾಫ್, ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯ ಅಧಿಕಾರಿ,ಬಾಗಲಕೋಟೆ</span></div>.<div><blockquote>ಓದಲು ವಿಶಾಲವಾದ ಕಟ್ಟಡ, ಉತ್ತಮ ವ್ಯವಸ್ಥೆ ಇರುವುದಿಲ್ಲ ಸರ್ಕಾರ ಮತ್ತು ಪುರಸಭೆ ವ್ಯವಸ್ಥೆಗೊಳಿಸಬೇಕು</blockquote><span class="attribution"> –ಈರಣ್ಣ ಅಲದಿ, ಓದುಗ,ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ಪಟ್ಟಣದ ಬನ್ನಿಕಟ್ಟಿ ಹತ್ತಿರ ಇರುವ ಪುರಸಭೆ ಕಟ್ಟಡದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯ ಸೌಲಭ್ಯಗಳಿಂದ ವಂಚಿತವಾಗಿದೆ. ಪಟ್ಟಣದಲ್ಲಿ ಸಾರ್ವಜನಿಕರ ಓದಿಗಾಗಿ ಇರುವ ಏಕೈಕ ಕೇಂದ್ರವಾಗಿದ್ದರೂ ಇಲ್ಲಿ ಓದಲು ಸೌಲಭ್ಯಗಳೇ ಇಲ್ಲ.</p>.<p>ಗ್ರಂಥಾಲಯ ಕಟ್ಟಡ 30 *10 ಅಳತೆಯ ಕ್ಷೇತ್ರದಲ್ಲಿ ಸಣ್ಣ ಕಟ್ಟಡವಿದೆ ಅದರಲ್ಲಿ ಕಚೇರಿ ಒಳಗೊಂಡಿದೆ. ಗ್ರಂಥಾಲಯದ ಮುಂದೆ ಒಂದು ಸಣ್ಣ ರೂಂ ಇದ್ದು ಅದರಲ್ಲಿ ಎಲ್ಲ ಪುಸ್ತಕಗಳನ್ನು ರ್ಯಾಕ್ನಲ್ಲಿ ಇಡಲಾಗಿದೆ. ಸುಮಾರು 300ಕ್ಕೂ ಅಧಿಕ ಹೆಚ್ಚುವರಿ ಪುಸ್ತಕಗಳನ್ನು ನೆಲದಮೇಲೆ ಇಡಲಾಗಿದೆ. ಅದಕ್ಕೂ ಜಾಗದ ಕೊರತೆಯಾಗಿದೆ. ಓದುವ ಕೊಠಡಿಯು ಒಂದೇ ಇದ್ದು ಅದರಲ್ಲಿ ದಿನಪತ್ರಿಕೆ ಓದಲು ಇದ್ದ ಕಟ್ಟಿಗೆಯ ಸ್ಟ್ಯಾಂಡ್ಗಳು ಮುರಿದು ಹೋಗಿವೆ. ಅವುಗಳನ್ನು ಅಲ್ಲಿಯೇ ಒಂದರ ಮೇಲೊಂದು ಇಡಲಾಗಿದೆ. ಕಚೇರಿಯಲ್ಲಿಯೂ ಮುರಿದು ಹೋದ ಟೇಬಲ್ ಮತ್ತು ಸ್ಟ್ಯಾಂಡ್ಗಳನ್ನು ಇಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಓದಲು ಸ್ಥಳದ ಕೊರತೆ ಇದೆ. ಇಲ್ಲಿ ಕುಳಿತು ಓದಲು ಕೇವಲ 10 ಜನರಿಗೆ ಮಾತ್ರ ಅವಕಾಶವಿದೆ. ನಿಂತು ಓದಲು ಸ್ಥಳವಿಲ್ಲ.</p>.<p>ಒಟ್ಟು 2220 ಜನ ಸದಸ್ಯರಿದ್ದು ಗ್ರಂಥಾಲಯದಲ್ಲಿ ವಿವಿಧ ಬಗೆಯ ಒಟ್ಟು 32,327 ಪುಸ್ತಕಗಳಿವೆ.<br> ಎರಡು ಮೂರು ವರ್ಷಗಳಿಂದ ಸುರಿದ ಮಳೆಯಿಂದ ಗ್ರಂಥಾಲಯ ಸೋರಿ ಕಟ್ಟಿಗೆಯ ಟೇಬಲ್, ಸ್ಟ್ಯಾಂಡ್ಗಳು ನೆನೆದು ಹಾಳಾಗಿವೆ. ‘ಸೋರುತಿಹುದು ಗ್ರಂಥಾಲಯ ಮಾಳಿಗೆ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ಕಳೆದ ವರ್ಷ ವಿಶೇಷ ವರದಿ ಪ್ರಕಟಿಸಿದ ನಂತರ ಎಚ್ಚೆತ್ತುಕೊಂಡ ಪುರಸಭೆ ಮಾಳಿಗೆಯ ಮೇಲೆ ತಗಡುಗಳನ್ನು ಹಾಕಿದೆ.</p>.<p><strong>ಹೊಸ ಕಟ್ಟಡಕ್ಕೆ ಜಾಗದ ಕೊರತೆ</strong> : ಲೋಕೋಪಯೋಗಿ ಇಲಾಖೆಯಿಂದ ಹೊಸ ಕಟ್ಟಡ ಕಟ್ಟಲು ಯೋಜನೆ ರೂಪಿಸಿದ್ದು ಸರ್ಕಾರ 3 ಕೋಟಿ 75 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಪುರಸಭೆಯಿಂದ ಸೂಕ್ತ ಜಾಗ ತೋರಿಸದ ಹಿನ್ನಲೆಯಲ್ಲಿ ಕಟ್ಟಡ ಕಾಮಗಾರಿ ಇಂದಿಗೂ ಆರಂಭವಾಗಿಲ್ಲ.</p>.<p><strong>ಜಾಗಕ್ಕಾಗಿ ಮನವಿ</strong></p><p> ಗುಳೇದಗುಡ್ಡ ಪಟ್ಟಣದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಲು ಎರಡು ಮೂರು ಕಡೆ ಜಾಗ ನೋಡಲಾಗಿದೆ. ಸೂಕ್ತ ಜಾಗ ಇರದೆ ಇರುವುದರಿಂದ ಪ್ರಸ್ತುತ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ ವಿಶಾಲವಾಗಿದ್ದು ಒಂದು ಕಡೆ ಕಟ್ಟಲು ಮನವಿ ಮಾಡಲಾಗಿದೆ. ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರದ ಅನುಮತಿ ದೊರೆತರೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಬಾದಾಮಿಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವೈ.ಎಫ್.ಆಡೀನ ತಿಳಿಸಿದ್ದಾರೆ.</p>.<div><blockquote>ಇದ್ದ ಕಟ್ಟಡದಲ್ಲಿ ಇದ್ದ ವ್ಯವಸ್ಥೆಯೊಂದಿಗೆ ಗ್ರಂಥಾಲಯ ನಡೆಸಿಕೊಂಡು ಹೋಗಲಾಗುತ್ತಿದೆ. </blockquote><span class="attribution">-ಬಸವರಾಜ ಮೊಕಾಶಿ, ಗ್ರಂಥಪಾಲಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ, ಗುಳೇದಗುಡ್ಡ</span></div>.<div><blockquote>ಕಟ್ಟಡದಲ್ಲಿ ಸ್ಥಳದ ಕೊರತೆ ಇರುವುದು ನಿಜ. ಪುರಸಭೆ ಮುಖ್ಯಾಧಿಕಾರಿಗಳಿಗೆ ದೊಡ್ಡ ಕಟ್ಟಡ ಇದ್ದರೆ ನೀಡಲು ಮನವಿ ಮಾಡಲಾಗಿದೆ.</blockquote><span class="attribution">-ಹಾಜಿರಾ ನದಾಫ್, ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯ ಅಧಿಕಾರಿ,ಬಾಗಲಕೋಟೆ</span></div>.<div><blockquote>ಓದಲು ವಿಶಾಲವಾದ ಕಟ್ಟಡ, ಉತ್ತಮ ವ್ಯವಸ್ಥೆ ಇರುವುದಿಲ್ಲ ಸರ್ಕಾರ ಮತ್ತು ಪುರಸಭೆ ವ್ಯವಸ್ಥೆಗೊಳಿಸಬೇಕು</blockquote><span class="attribution"> –ಈರಣ್ಣ ಅಲದಿ, ಓದುಗ,ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>