ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ನ ಸರ್ಕಾರಿ ಹಾಸ್ಟೆಲ್ನಲ್ಲಿ ಮಂಗಳೂರು, ಪುಣೆ ಹಾಗೂ ಬಿಹಾರದಿಂದ ಬಂದ 14 ಮಂದಿಯನ್ನು ಮಂಗಳವಾರ ರಾತ್ರಿ ಕ್ವಾರೆಂಟೈನ್ ಮಾಡಲು ಮುಂದಾಗಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಕಾರ್ಖಾನೆಯೊಂದಕ್ಕೆ ಸೇರಿದ ಅಧಿಕಾರಿ, ಸಿಬ್ಬಂದಿಗಳು ಅದರಲ್ಲಿ ಇದ್ದರು. ’ಅವರನ್ನು ಕಾರ್ಖಾನೆಯ ಆವರಣದಲ್ಲಿಯೇ ಕ್ವಾರಂಟೈನ್ಗೆ ಮಾಡಿ. ನಮ್ಮೂರಿನಲ್ಲಿ ಬೇಡ‘ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ವೇಳೆ ಪ್ರತಿಭಟನೆಗೂ ಮುಂದಾದರು.