<p><strong>ಬಾಗಲಕೋಟೆ</strong>: ‘ಸಿದ್ದರಾಮಯ್ಯ ಹಿಂದುಳಿದವರ ಅಭಿವೃದ್ಧಿಯ ಹರಿಕಾರ ಅಲ್ಲ, ಮಜಾವಾದಿ ರಾಮಯ್ಯ, ಪೇಪರ್ ರಾಮಯ್ಯ, ಚೀಲದ ರಾಮಯ್ಯ, ಭಿಕ್ಷುಕ ರಾಮಯ್ಯ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದರು.</p>.<p>ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2022–23ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸರ್ಪ್ಲಸ್ ಬಜೆಟ್ ಮಂಡಿಸಿದ್ದರು. ₹47 ಸಾವಿರ ಕೋಟಿ ಸಾಲ ಮಾಡಿದ್ದ ಅವರು, ₹84 ಸಾವಿರ ಕೋಟಿ ಅಭಿವೃದ್ಧಿಗೆ ನೀಡಿದ್ದರು. ಆದರೆ, ಸಿದ್ದರಾಮಯ್ಯ 1.32 ಲಕ್ಷ ಕೋಟಿ ಸಾಲ ಮಾಡಿ, ಅಭಿವೃದ್ಧಿಗೆ ₹82 ಸಾವಿರ ಕೋಟಿ ನೀಡಿದ್ದಾರೆ. ಇವರು ಮಜಾವಾದಿ ರಾಮಯ್ಯ ಎಂದು ಟೀಕಿಸಿದರು.</p>.<p>‘ಪ್ರಧಾನಿ ಮೋದಿ ಅಕ್ಕಿ ಕೊಡುತ್ತಾರೆ. ಇವರು ಬರೀ ಚೀಲ ನೀಡುವ ಚೀಲರಾಮಯ್ಯ. ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ₹75 ಸಾವಿರ ಕೋಟಿ ಬಿಲ್ ಬಾಕಿ ಇದೆ. ಇದನ್ನು ಬಜೆಟ್ನಲ್ಲಿ ತೋರಿಸಿದ್ದರೆ ಪಾಪರ್ ಗಿರಾಕಿ ಎಂಬುದು ಗೊತ್ತಾಗುತ್ತಿತ್ತು. ಇವರು ಪೇಪರ್ ರಾಮಯ್ಯ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಬಿಜೆಪಿ ಸರ್ಕಾರವಿದ್ದಾಗ ಪ್ರತಿ ವ್ಯಕ್ತಿ ಮೇಲೆ ₹13 ಸಾವಿರ ಸಾಲವಿತ್ತು. ಈಗ ಪ್ರತಿ ವ್ಯಕ್ತಿ ಮೇಲೆ ₹1.20 ಲಕ್ಷ ಸಾಲವಿದೆ. ಸರಾಸರಿ ಪ್ರತಿ ವರ್ಷ ₹82 ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದು, ಪ್ರತಿ ಗಂಟೆಗೆ ₹9.5 ಕೋಟಿಯಾಗುತ್ತದೆ. ಇವರೊಬ್ಬ ಭಿಕ್ಷುಕ ರಾಮಯ್ಯ’ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ಸಿದ್ದರಾಮಯ್ಯ ಹಿಂದುಳಿದವರ ಅಭಿವೃದ್ಧಿಯ ಹರಿಕಾರ ಅಲ್ಲ, ಮಜಾವಾದಿ ರಾಮಯ್ಯ, ಪೇಪರ್ ರಾಮಯ್ಯ, ಚೀಲದ ರಾಮಯ್ಯ, ಭಿಕ್ಷುಕ ರಾಮಯ್ಯ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದರು.</p>.<p>ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2022–23ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸರ್ಪ್ಲಸ್ ಬಜೆಟ್ ಮಂಡಿಸಿದ್ದರು. ₹47 ಸಾವಿರ ಕೋಟಿ ಸಾಲ ಮಾಡಿದ್ದ ಅವರು, ₹84 ಸಾವಿರ ಕೋಟಿ ಅಭಿವೃದ್ಧಿಗೆ ನೀಡಿದ್ದರು. ಆದರೆ, ಸಿದ್ದರಾಮಯ್ಯ 1.32 ಲಕ್ಷ ಕೋಟಿ ಸಾಲ ಮಾಡಿ, ಅಭಿವೃದ್ಧಿಗೆ ₹82 ಸಾವಿರ ಕೋಟಿ ನೀಡಿದ್ದಾರೆ. ಇವರು ಮಜಾವಾದಿ ರಾಮಯ್ಯ ಎಂದು ಟೀಕಿಸಿದರು.</p>.<p>‘ಪ್ರಧಾನಿ ಮೋದಿ ಅಕ್ಕಿ ಕೊಡುತ್ತಾರೆ. ಇವರು ಬರೀ ಚೀಲ ನೀಡುವ ಚೀಲರಾಮಯ್ಯ. ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ₹75 ಸಾವಿರ ಕೋಟಿ ಬಿಲ್ ಬಾಕಿ ಇದೆ. ಇದನ್ನು ಬಜೆಟ್ನಲ್ಲಿ ತೋರಿಸಿದ್ದರೆ ಪಾಪರ್ ಗಿರಾಕಿ ಎಂಬುದು ಗೊತ್ತಾಗುತ್ತಿತ್ತು. ಇವರು ಪೇಪರ್ ರಾಮಯ್ಯ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಬಿಜೆಪಿ ಸರ್ಕಾರವಿದ್ದಾಗ ಪ್ರತಿ ವ್ಯಕ್ತಿ ಮೇಲೆ ₹13 ಸಾವಿರ ಸಾಲವಿತ್ತು. ಈಗ ಪ್ರತಿ ವ್ಯಕ್ತಿ ಮೇಲೆ ₹1.20 ಲಕ್ಷ ಸಾಲವಿದೆ. ಸರಾಸರಿ ಪ್ರತಿ ವರ್ಷ ₹82 ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದು, ಪ್ರತಿ ಗಂಟೆಗೆ ₹9.5 ಕೋಟಿಯಾಗುತ್ತದೆ. ಇವರೊಬ್ಬ ಭಿಕ್ಷುಕ ರಾಮಯ್ಯ’ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>