ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಅವರದ್ದು ಅತಂತ್ರ ಸರ್ಕಾರ. ದೇವೇಗೌಡರ ನೆರವು ಕೋರುವ ಬದಲು ಬಿಜೆಪಿಯವರು ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬದಲಾದರೂ ಭ್ರಷ್ಟಾಚಾರದ ವಾಸನೆಯಿಂದ ಈ ಸರ್ಕಾರ ಮುಕ್ತವಾಗುವುದಿಲ್ಲ ಅದೇನಿದ್ದರೂ ಹಳೆಯ ಬಾಟಲಿಯಲ್ಲಿ ಹೊಸ ಮದ್ಯ ಹಾಕಿದಂತಾಗಿದೆ ಎಂದರು.
ನಾಲ್ಕಾರು ಗುಂಪುಗಳಿಂದ ಕೂಡಿರುವ ಈ ಸರ್ಕಾರಕ್ಕೆ ಬಹಳ ದಿನ ಭವಿಷ್ಯವೂ ಇಲ್ಲ. ಅತಂತ್ರ ಸರ್ಕಾರಕ್ಕೆ ಒಳ್ಳೆಯ ಆಡಳಿತ ಕೊಡಲು ಆಗುವುದಿಲ್ಲ. ಹೀಗಾಗಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.