ಮುಂಡಗೋಡ: ತಾಲ್ಲೂಕಿನ ಕ್ಯಾತ್ನಳ್ಳಿ, ಬ್ಯಾನಳ್ಳಿ ಅರಣ್ಯ ಪ್ರದೇಶದಂಚಿನಲ್ಲಿ ಕೆಲ ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆಯು, ಮಂಗಳವಾರ ಚವಡಳ್ಳಿ ಗದ್ದೆಯೊಂದರಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಕೆಲವು ದಿನಗಳಿಂದ ಚಿರತೆಯು ಸುಳ್ಳಳ್ಳಿ–ಅಂದಲಗಿ ರಸ್ತೆ ಮಧ್ಯೆ ಕಾಣಿಸಿಕೊಂಡು ವಾಹನ ಸವಾರರಲ್ಲಿ ಭಯವನ್ನುಂಟು ಮಾಡಿತ್ತು. ನಂತರ ಅರಣ್ಯ ಇಲಾಖೆಯವರು ಬ್ಯಾನಳ್ಳಿ ಸನಿಹದ ಗದ್ದೆಯೊಂದರಲ್ಲಿ ಪಂಜರ ಇಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರು.