<p><strong>ರಬಕವಿ ಬನಹಟ್ಟಿ:</strong> ‘ನಮ್ಮನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಗೆ ಪರೋಪಕಾರ ಮಾಡುವ ಮನಸ್ಸನ್ನು ನಮ್ಮದಾಗಿಸಿಕೊಳ್ಳಬೇಕು. ಮನುಷ್ಯರಂತೆ ಬದುಕಿದಾಗ ಮಾತ್ರ ಮೋಕ್ಷ ಪಡೆದುಕೊಳ್ಳಲು ಸಾಧ್ಯ ಎಂಬ ಅಂಶಗಳು ಚಂದಮಮ ಕೃತಿಯಲ್ಲಿವೆ’ ಎಂದು ಧಾರವಾಡದ ಪ್ರೊ.ಜೀನದತ್ತ ಹಡಗಲಿ ತಿಳಿಸಿದರು.</p>.<p>ಇಲ್ಲಿನ ಬ್ರಹ್ಮಾನಂದ ಉತ್ಸವದಲ್ಲಿ ಆಶ್ರಮದ ಗುರುಸಿದ್ಧೇಶ್ವರರು ರಚಿಸಿದ ‘ಚಂದಮಮ’ ಕೃತಿ ಲೋಕಾರ್ಪಣೆ ಹಾಗೂ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ನೀತಿಕ್ರಿಯಾಚರ್ಯ ಸ್ಥಲದ ಆಚರಣೆಯ ನಿರೂಪಣಾ ಪದ್ಯ ಕೃತಿ ಕುರಿತು ಶುಕ್ರವಾರ ಅವರು ಮಾತನಾಡಿದರು.</p>.<p>‘ಇಂದ್ರೀಯಗಳನ್ನು ಮತ್ತು ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಪ್ರಾಮಾಣಿಕವಾಗಿ, ಶ್ರಮ ವಹಿಸಿ ಪಡೆದಂತಹ ಸಂಪತ್ತನ್ನು ಯೋಗ್ಯ ಕಾರ್ಯಗಳಿಗಾಗಿ ಬಳಸಬೇಕು’ ಎಂದು ಹಡಗಲಿ ತಿಳಿಸಿದರು.</p>.<p>ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಹಾತ್ಮರ ಸ್ಮರಣೆ ಮಾಡುವುದರಿಂದ ಜೀವನ ಪಾವನವಾಗುತ್ತದೆ. ಗುರು ನೀಡಿದ ವಿದ್ಯೆ ಮತ್ತು ಪ್ರಸಾದ ಶ್ರೇಷ್ಠವಾದುದು’ ಎಂದರು.</p>.<p>ಹಂಚಿನಾಳದ ಭಕ್ತಿ ಯೋಗಾಶ್ರಮದ ಮಹೇಶ್ವರಾನಂದ ಸ್ವಾಮೀಜಿ, ‘ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡಬೇಕಾಗಿದೆ’ ಎಂದರು.</p>.<p>ಮರೆಗುದ್ದಿಯ ನಿರುಪಾಧಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನ ಬೆಳಗಲಿಯ ಸಿದ್ಧರಾಮ ಶಿವಯೋಗಿ ಸ್ವಾಮೀಜಿ ಅಂಕಲಗಿಯ ಅಡವಿಸಿದ್ಧೇಶ್ವರರ ಕುರಿತು ಪ್ರವಚನ ನೀಡಿದರು.</p>.<p>ಗುರುಸಿದ್ಧೇಶ್ವರ ಸ್ವಾಮೀಜಿ, ವಿಶ್ವಜ ಕಾಡದೇವರ, ಪಶು ವೈದ್ಯ ಪ್ರಭು ಬಿರಾದಾರ ಪಾಟೀಲ, ಗಿರೀಶ ಮುತ್ತೂರ, ಮಹಾದೇವ ಕವಿಶೆಟ್ಟಿ ಮಾತನಾಡಿದರು.</p>.<p>ಮಾರುತು ಗಂಥಡೆ, ಈರಣ್ಣ ಹಲಗತ್ತಿ, ದುಂಡಪ್ಪ ದೂಪದಾಳ, ಶಂಕರ ಜಾಲಿಗಿಡದ, ಸದಾಶಿವ ನಾಯಕ, ಶ್ರೀನಿವಾಸ ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ‘ನಮ್ಮನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಗೆ ಪರೋಪಕಾರ ಮಾಡುವ ಮನಸ್ಸನ್ನು ನಮ್ಮದಾಗಿಸಿಕೊಳ್ಳಬೇಕು. ಮನುಷ್ಯರಂತೆ ಬದುಕಿದಾಗ ಮಾತ್ರ ಮೋಕ್ಷ ಪಡೆದುಕೊಳ್ಳಲು ಸಾಧ್ಯ ಎಂಬ ಅಂಶಗಳು ಚಂದಮಮ ಕೃತಿಯಲ್ಲಿವೆ’ ಎಂದು ಧಾರವಾಡದ ಪ್ರೊ.ಜೀನದತ್ತ ಹಡಗಲಿ ತಿಳಿಸಿದರು.</p>.<p>ಇಲ್ಲಿನ ಬ್ರಹ್ಮಾನಂದ ಉತ್ಸವದಲ್ಲಿ ಆಶ್ರಮದ ಗುರುಸಿದ್ಧೇಶ್ವರರು ರಚಿಸಿದ ‘ಚಂದಮಮ’ ಕೃತಿ ಲೋಕಾರ್ಪಣೆ ಹಾಗೂ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ನೀತಿಕ್ರಿಯಾಚರ್ಯ ಸ್ಥಲದ ಆಚರಣೆಯ ನಿರೂಪಣಾ ಪದ್ಯ ಕೃತಿ ಕುರಿತು ಶುಕ್ರವಾರ ಅವರು ಮಾತನಾಡಿದರು.</p>.<p>‘ಇಂದ್ರೀಯಗಳನ್ನು ಮತ್ತು ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಪ್ರಾಮಾಣಿಕವಾಗಿ, ಶ್ರಮ ವಹಿಸಿ ಪಡೆದಂತಹ ಸಂಪತ್ತನ್ನು ಯೋಗ್ಯ ಕಾರ್ಯಗಳಿಗಾಗಿ ಬಳಸಬೇಕು’ ಎಂದು ಹಡಗಲಿ ತಿಳಿಸಿದರು.</p>.<p>ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಹಾತ್ಮರ ಸ್ಮರಣೆ ಮಾಡುವುದರಿಂದ ಜೀವನ ಪಾವನವಾಗುತ್ತದೆ. ಗುರು ನೀಡಿದ ವಿದ್ಯೆ ಮತ್ತು ಪ್ರಸಾದ ಶ್ರೇಷ್ಠವಾದುದು’ ಎಂದರು.</p>.<p>ಹಂಚಿನಾಳದ ಭಕ್ತಿ ಯೋಗಾಶ್ರಮದ ಮಹೇಶ್ವರಾನಂದ ಸ್ವಾಮೀಜಿ, ‘ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡಬೇಕಾಗಿದೆ’ ಎಂದರು.</p>.<p>ಮರೆಗುದ್ದಿಯ ನಿರುಪಾಧಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನ ಬೆಳಗಲಿಯ ಸಿದ್ಧರಾಮ ಶಿವಯೋಗಿ ಸ್ವಾಮೀಜಿ ಅಂಕಲಗಿಯ ಅಡವಿಸಿದ್ಧೇಶ್ವರರ ಕುರಿತು ಪ್ರವಚನ ನೀಡಿದರು.</p>.<p>ಗುರುಸಿದ್ಧೇಶ್ವರ ಸ್ವಾಮೀಜಿ, ವಿಶ್ವಜ ಕಾಡದೇವರ, ಪಶು ವೈದ್ಯ ಪ್ರಭು ಬಿರಾದಾರ ಪಾಟೀಲ, ಗಿರೀಶ ಮುತ್ತೂರ, ಮಹಾದೇವ ಕವಿಶೆಟ್ಟಿ ಮಾತನಾಡಿದರು.</p>.<p>ಮಾರುತು ಗಂಥಡೆ, ಈರಣ್ಣ ಹಲಗತ್ತಿ, ದುಂಡಪ್ಪ ದೂಪದಾಳ, ಶಂಕರ ಜಾಲಿಗಿಡದ, ಸದಾಶಿವ ನಾಯಕ, ಶ್ರೀನಿವಾಸ ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>