ಶುಕ್ರವಾರ ಕರಡಕಲ್ಲ, ಕಸಬಾಲಿಂಗಸುಗೂರು, ಹೊನ್ನಳ್ಳಿ, ಗುಂತಗೋಳ ಸೇರಿದಂತೆ ಕೆಲವೆಡೆ ಅಮಾಯಕ ಸಾಧುಗಳು, ಕೂಲಿಕಾರರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಮೊಬೈಲ್ ಮೂಲಕ ಕಪೋಲಕಲ್ಪಿತ ಚಿತ್ರಗಳು, ಸಂದೇಶಗಳು ಹರಿದಾಡುತ್ತಿರುವುದರಿಂದ ಜನತೆ ಭಯ ಭೀತಿಗೊಂಡಿದ್ದಾರೆ. ಈ ರೀತಿ ಜಾಲತಾಣದಲ್ಲಿ ಅನಗತ್ಯ ವಿಷಯಗಳನ್ನು ಹಾಕುವವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.