ವರ್ತೂರು ಪ್ರಕಾಶ್, ಅವರ ಅಣ್ಣನ ಮಗ ವಿ.ಪಿ.ರಕ್ಷಿತ್, ಕೋಲಾರದ ಮುನೇಶ್ವರ ನಗರದ ವೈ.ಎಚ್.ದಿನೇಶ್ಬಾಬು, ಮುನಿಯಪ್ಪ, ಪೇಟೆಚಾಮನಹಳ್ಳಿಯ ಎನ್.ಸುಬ್ರಮಣಿ ಮತ್ತು ಬೆಗ್ಲಿ ಹೊಸಹಳ್ಳಿಯ ನಾಗರಾಜ್ ವಿರುದ್ಧ ವಂಚನೆ, ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರ ಸೃಷ್ಟಿ, ಶಾಂತಿ ಕದಡುವ ಉದ್ದೇಶದಿಂದ ನಿಂದನೆ, ಅಪರಾಧ ಸಂಚು ಹಾಗೂ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.