‘ಮಾರ್ಚ್ 14 ರಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ, ಸಿ.ಬಸವಲಿಂಗಯ್ಯ ನಿರ್ದೇಶನದ ‘ಗುರುಮಾತೆ ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾರ್ಚ್ 15 ರಂದು ಜ.ಹೊ.ನಾರಾಯಣಸ್ವಾಮಿ ರಚಿಸಿದ ಹಾಗೂ ಸವಿತಾ ಬೆಂಗಳೂರು ನಿರ್ದೇಶನದ ‘ನರಬಲಿ’ ಹಾಗೂ ಮಾರ್ಚ್ 16 ರಂದು ತುಳಸಿಗೇರಿಯ ಹನುಮಂತ ಹಾಲಿಗೇರಿ ರಚನೆಯ, ಮಾಲತೇಶ ಬಡಿಗೇರ ನಿರ್ದೇಶನದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕಗಳ ಪ್ರದರ್ಶನಗೊಳ್ಳಲಿವೆ.