ಅಪಘಾತದಲ್ಲಿ ಗೂಡಂಗಡಿ ಮಾಲಿಕ ಪಾಂಡುರಂಗ ತೆಗ್ಗಿ ಸ್ನೇಹಿತ ಲಕ್ಷ್ಮಣ ಹಾದಿಮನಿ (28), ಹುಬ್ಬಳ್ಳಿಯ ಪೂಜಾ ಹಳಪೇಟೆ, ಬೆಳಗಾವಿ ಜಿಲ್ಲೆ ಸುರೇಬಾನದ ಮಹಾನಂದ ಕರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವಿಗೀಡಾದವರಲ್ಲಿ ಇಬ್ಬರು ಊರೂರು ಸುತ್ತಾಡಿ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಮಾಡುತ್ತಿದ್ದರು. ನರಗುಂದಕ್ಕೆ ತೆರಳಲು ಬಸ್ ಗೆ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.