<p><strong>ಗುಳೇದಗುಡ್ಡ:</strong> ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುತ್ತ ಬಂದರೂ ಇದುವರೆಗೂ ಪಟ್ಟಣದ ಕೆಇಬಿಯಿಂದ ಹಾದಿ ಬಸವೇಶ್ವರ ದೇವಸ್ಥಾನದವರೆಗೆ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ವಾಹನ ಸವಾರರು ನಿತ್ಯ ಕತ್ತಲಲ್ಲಿ ಸಂಚರಿಸುವಂತಾಗಿದೆ.</p>.<p>ಇದುವರೆಗೂ ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿರುವ ವಿಭಜಕಗಳಿಗೆ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ವಾಹನ ಸವಾರರಿಗೆ ರಾತ್ರಿ ಸಮಯದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ.</p>.<p><strong>ಏನೇನು ಕೆಲಸ ನಡೆಯಬೇಕಿದೆ?:</strong> ರಸ್ತೆ ನಿರ್ಮಾಣವಾಗಿದೆ. ಆ ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿರುವ ವಿಭಜಕಗಳಿಗೆ ಬಣ್ಣ ಬಳಿದು ಬೀದಿ ದೀಪ ಅಳವಡಿಸಬೇಕಿದೆ. ಅಷ್ಟೇ ಅಲ್ಲದೇ ಗಿಡಗಳನ್ನು ನೆಡುವ ಕೆಲಸವಾಗಬೇಕಿದೆ. ಅಲ್ಲಲ್ಲಿ ಪೈಪ್ ಕನೆಕ್ಷನ್ಗಾಗಿ ರಸ್ತೆ ಮಧ್ಯದಲ್ಲಿ ಮಣ್ಣು ಹಾಕಿ ಒಂದಿಷ್ಟು ಅಂತರ ಬಿಡಲಾಗಿದೆ. ಆದರೆ ಅದರಲ್ಲಿನ ಮಣ್ಣು ವಾಹನ ಸಂಚಾರದಿಂದ ಸವೆದು ಹೋಗಿ ತಗ್ಗುಗಳಾಗಿದೆ. ಇದರಿಂದ ವಾಹನ ಸವಾರರು ನಿತ್ಯವು ರಸ್ತೆ ಚೆನ್ನಾಗಿದ್ದರೂ ಈ ತಗ್ಗುಗಳಿಂದ ಹೈರಾಣಾಗುವಂತಾಗಿದೆ. ಅವುಗಳನ್ನು ಸರಿಯಾಗಿ ಮುಚ್ಚಿ ಇಲ್ಲವೇ ಪೇವರ್ಸ್ ಅಳವಡಿಸಿದರೆ ವಾಹನ ಸವಾರರಿಗೂ ಅನುಕೂಲವಾಗಲಿದೆ.</p>.<p><strong>ಕಂಬವಿದ್ದರೂ ಉರಿಯದ ದೀಪ: </strong>ಬಾದಾಮಿ ನಾಕಾದಿಂದ ಕೋಟೆಕಲ್ವರೆಗೆ ಕಂಬ ಇದ್ದರೂ 10 ದಿನಗಳಿಂದ ಹೆದ್ದಾರಿಯಲ್ಲಿರುವ ದೀಪ ಉರಿಯದೆ ಸವಾರರಿಗೆ ಕಿರಿ ಕಿರಿಯಾಗಿದೆ. ಸಂಬಂಧ ಪಟ್ಟವರು ಕೂಡಲೇ ದುರಸ್ತಿ ಮಾಡಿ ಬೆಳಕು ಹಚ್ಚುವ ಕೆಲಸ ಮಾಡಬೇಕೆಂದು ಗುಂಡಪ್ಪ ಕೋಟಿ ಆಗ್ರಹಿಸಿದರು.</p>.<div><blockquote>ಹೆಸ್ಕಾಂ ಕಚೇರಿಯಿಂದ ಮುಂದಿನ ರಸ್ತೆ ನಿರ್ಮಾಣ ಮಾಡಿದ್ದು, ರಸ್ತೆಗೆ ಬೀದಿ ದೀಪ ಅಳವಡಿಕೆಗೆ ಆಲೂರ ಕಂಪನಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿ ದೀಪಗಳನ್ನು ಅಳವಡಿಸಲಾಗುವುದು.<br></blockquote><span class="attribution">-ವೈ.ಎಫ್.ಆಡೀನ,ಎಂಜಿನೀಯರ,ಲೋಕೋಪಯೋಗಿ ಇಲಾಖೆ,ಬಾದಾಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುತ್ತ ಬಂದರೂ ಇದುವರೆಗೂ ಪಟ್ಟಣದ ಕೆಇಬಿಯಿಂದ ಹಾದಿ ಬಸವೇಶ್ವರ ದೇವಸ್ಥಾನದವರೆಗೆ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ವಾಹನ ಸವಾರರು ನಿತ್ಯ ಕತ್ತಲಲ್ಲಿ ಸಂಚರಿಸುವಂತಾಗಿದೆ.</p>.<p>ಇದುವರೆಗೂ ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿರುವ ವಿಭಜಕಗಳಿಗೆ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ವಾಹನ ಸವಾರರಿಗೆ ರಾತ್ರಿ ಸಮಯದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ.</p>.<p><strong>ಏನೇನು ಕೆಲಸ ನಡೆಯಬೇಕಿದೆ?:</strong> ರಸ್ತೆ ನಿರ್ಮಾಣವಾಗಿದೆ. ಆ ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿರುವ ವಿಭಜಕಗಳಿಗೆ ಬಣ್ಣ ಬಳಿದು ಬೀದಿ ದೀಪ ಅಳವಡಿಸಬೇಕಿದೆ. ಅಷ್ಟೇ ಅಲ್ಲದೇ ಗಿಡಗಳನ್ನು ನೆಡುವ ಕೆಲಸವಾಗಬೇಕಿದೆ. ಅಲ್ಲಲ್ಲಿ ಪೈಪ್ ಕನೆಕ್ಷನ್ಗಾಗಿ ರಸ್ತೆ ಮಧ್ಯದಲ್ಲಿ ಮಣ್ಣು ಹಾಕಿ ಒಂದಿಷ್ಟು ಅಂತರ ಬಿಡಲಾಗಿದೆ. ಆದರೆ ಅದರಲ್ಲಿನ ಮಣ್ಣು ವಾಹನ ಸಂಚಾರದಿಂದ ಸವೆದು ಹೋಗಿ ತಗ್ಗುಗಳಾಗಿದೆ. ಇದರಿಂದ ವಾಹನ ಸವಾರರು ನಿತ್ಯವು ರಸ್ತೆ ಚೆನ್ನಾಗಿದ್ದರೂ ಈ ತಗ್ಗುಗಳಿಂದ ಹೈರಾಣಾಗುವಂತಾಗಿದೆ. ಅವುಗಳನ್ನು ಸರಿಯಾಗಿ ಮುಚ್ಚಿ ಇಲ್ಲವೇ ಪೇವರ್ಸ್ ಅಳವಡಿಸಿದರೆ ವಾಹನ ಸವಾರರಿಗೂ ಅನುಕೂಲವಾಗಲಿದೆ.</p>.<p><strong>ಕಂಬವಿದ್ದರೂ ಉರಿಯದ ದೀಪ: </strong>ಬಾದಾಮಿ ನಾಕಾದಿಂದ ಕೋಟೆಕಲ್ವರೆಗೆ ಕಂಬ ಇದ್ದರೂ 10 ದಿನಗಳಿಂದ ಹೆದ್ದಾರಿಯಲ್ಲಿರುವ ದೀಪ ಉರಿಯದೆ ಸವಾರರಿಗೆ ಕಿರಿ ಕಿರಿಯಾಗಿದೆ. ಸಂಬಂಧ ಪಟ್ಟವರು ಕೂಡಲೇ ದುರಸ್ತಿ ಮಾಡಿ ಬೆಳಕು ಹಚ್ಚುವ ಕೆಲಸ ಮಾಡಬೇಕೆಂದು ಗುಂಡಪ್ಪ ಕೋಟಿ ಆಗ್ರಹಿಸಿದರು.</p>.<div><blockquote>ಹೆಸ್ಕಾಂ ಕಚೇರಿಯಿಂದ ಮುಂದಿನ ರಸ್ತೆ ನಿರ್ಮಾಣ ಮಾಡಿದ್ದು, ರಸ್ತೆಗೆ ಬೀದಿ ದೀಪ ಅಳವಡಿಕೆಗೆ ಆಲೂರ ಕಂಪನಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿ ದೀಪಗಳನ್ನು ಅಳವಡಿಸಲಾಗುವುದು.<br></blockquote><span class="attribution">-ವೈ.ಎಫ್.ಆಡೀನ,ಎಂಜಿನೀಯರ,ಲೋಕೋಪಯೋಗಿ ಇಲಾಖೆ,ಬಾದಾಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>