<p><strong>ಮಹಾಲಿಂಗಪುರ:</strong> ಸಮೀಪದ ರನ್ನಬೆಳಗಲಿಯ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಮುಗಿಸಿದ ಐವರು ವಿದ್ಯಾರ್ಥಿಗಳು ಮಾರ್ಚ್ 6ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.</p>.<p>ಇಂಗ್ಲಿಷ್ ಶಿಕ್ಷಕ ಕೆ.ಎ. ಧಡೂತಿ ಹಾಗೂ ಗಣಿತ ಶಿಕ್ಷಕ ಎಂ.ಡಿ. ನೆವನಕ್ಕಿ ಅವರೇ ಈ ಮಕ್ಕಳ ವಿಮಾನ ಪ್ರಯಾಣದ ಕನಸು ನನಸು ಮಾಡಿದ್ದಾರೆ. ಪ್ರಯಾಣ, ಊಟ ಹಾಗೂ ಇತರ ಅಂದಾಜು ₹ 80 ಸಾವಿರ ಖರ್ಚಾಗಲಿದೆ. ಈ ಎಲ್ಲ ವೆಚ್ಚವನ್ನು ಈ ಇಬ್ಬರು ಶಿಕ್ಷಕರೇ ಭರಿಸುತ್ತಿದ್ದಾರೆ.</p>.<p>ಕಳೆದ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಗಣಿತ ಹಾಗೂ ಇಂಗ್ಲಿಷ್ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕರೆದುಕೊಂಡು ಹೋಗುತ್ತೇವೆ ಎಂಬ ವಾಗ್ದಾನವನ್ನು ಈ ಶಿಕ್ಷಕರು ನೀಡಿದ್ದರು. ಅದರಂತೆ ಗಣಿತದಲ್ಲಿ ರೂಪಾ ಹಳ್ಳೂರ, ಪಲ್ಲವಿ ಭದ್ರಶೆಟ್ಟಿ, ಪದ್ಮಾ ಸಣಹಟ್ಟಿ, ಸುಜಾತಾ ಯಡಹಳ್ಳಿ ಹಾಗೂ ಗಣಿತ, ಇಂಗ್ಲಿಷ್ ಎರಡೂ ವಿಷಯದಲ್ಲಿ ಮಹಾಲಿಂಗಪ್ಪ ಬಡಿಗೇರ ನೂರಕ್ಕೆ ನೂರು ಅಂಕ ಪಡೆದಿದ್ದರಿಂದ ಈ ಅವಕಾಶ ದೊರಕಿದೆ.</p>.<p>ವಿದ್ಯಾರ್ಥಿಗಳಿಗೆ ನೀಡಿದ ವಾಗ್ದಾನದಂತೆ ಶಿಕ್ಷಕರು ಈ ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ವಿಮಾನ ಮೂಲಕ ಕರೆದೊಯ್ಯಲಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಬೇರೆ ಬೇರೆ ಕಾಲೇಜಿನಲ್ಲಿ ಪ್ರಥಮ ಪಿಯು ಮುಗಿಸಿದ್ದಾರೆ. ಸದ್ಯ ಇವರೆಲ್ಲ ಸೇರಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಚ್ 6 ರಂದು ಬೆಳಿಗ್ಗೆ 8.20ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಸ್ಥಳಗಳ ವೀಕ್ಷಣೆ ಮಾಡಿ ಮರಳಲಿದ್ದಾರೆ.<br /> ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ಹೆಚ್ಚಿನ ಅಂಕ ಪಡೆಯಲು ಉತ್ತೇಜನ ಬೆಳೆಯಬೇಕು ಹಾಗೂ ಮಕ್ಕಳಿಗೂ ವಿಮಾನದ ಪ್ರಯಾಣದ ಅನುಭವ ಮಾಡಿಸಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಶಿಕ್ಷಕ ಕೆ.ಎ.ಧಡೂತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ಸಮೀಪದ ರನ್ನಬೆಳಗಲಿಯ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಮುಗಿಸಿದ ಐವರು ವಿದ್ಯಾರ್ಥಿಗಳು ಮಾರ್ಚ್ 6ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.</p>.<p>ಇಂಗ್ಲಿಷ್ ಶಿಕ್ಷಕ ಕೆ.ಎ. ಧಡೂತಿ ಹಾಗೂ ಗಣಿತ ಶಿಕ್ಷಕ ಎಂ.ಡಿ. ನೆವನಕ್ಕಿ ಅವರೇ ಈ ಮಕ್ಕಳ ವಿಮಾನ ಪ್ರಯಾಣದ ಕನಸು ನನಸು ಮಾಡಿದ್ದಾರೆ. ಪ್ರಯಾಣ, ಊಟ ಹಾಗೂ ಇತರ ಅಂದಾಜು ₹ 80 ಸಾವಿರ ಖರ್ಚಾಗಲಿದೆ. ಈ ಎಲ್ಲ ವೆಚ್ಚವನ್ನು ಈ ಇಬ್ಬರು ಶಿಕ್ಷಕರೇ ಭರಿಸುತ್ತಿದ್ದಾರೆ.</p>.<p>ಕಳೆದ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಗಣಿತ ಹಾಗೂ ಇಂಗ್ಲಿಷ್ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕರೆದುಕೊಂಡು ಹೋಗುತ್ತೇವೆ ಎಂಬ ವಾಗ್ದಾನವನ್ನು ಈ ಶಿಕ್ಷಕರು ನೀಡಿದ್ದರು. ಅದರಂತೆ ಗಣಿತದಲ್ಲಿ ರೂಪಾ ಹಳ್ಳೂರ, ಪಲ್ಲವಿ ಭದ್ರಶೆಟ್ಟಿ, ಪದ್ಮಾ ಸಣಹಟ್ಟಿ, ಸುಜಾತಾ ಯಡಹಳ್ಳಿ ಹಾಗೂ ಗಣಿತ, ಇಂಗ್ಲಿಷ್ ಎರಡೂ ವಿಷಯದಲ್ಲಿ ಮಹಾಲಿಂಗಪ್ಪ ಬಡಿಗೇರ ನೂರಕ್ಕೆ ನೂರು ಅಂಕ ಪಡೆದಿದ್ದರಿಂದ ಈ ಅವಕಾಶ ದೊರಕಿದೆ.</p>.<p>ವಿದ್ಯಾರ್ಥಿಗಳಿಗೆ ನೀಡಿದ ವಾಗ್ದಾನದಂತೆ ಶಿಕ್ಷಕರು ಈ ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ವಿಮಾನ ಮೂಲಕ ಕರೆದೊಯ್ಯಲಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಬೇರೆ ಬೇರೆ ಕಾಲೇಜಿನಲ್ಲಿ ಪ್ರಥಮ ಪಿಯು ಮುಗಿಸಿದ್ದಾರೆ. ಸದ್ಯ ಇವರೆಲ್ಲ ಸೇರಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಚ್ 6 ರಂದು ಬೆಳಿಗ್ಗೆ 8.20ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಸ್ಥಳಗಳ ವೀಕ್ಷಣೆ ಮಾಡಿ ಮರಳಲಿದ್ದಾರೆ.<br /> ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ಹೆಚ್ಚಿನ ಅಂಕ ಪಡೆಯಲು ಉತ್ತೇಜನ ಬೆಳೆಯಬೇಕು ಹಾಗೂ ಮಕ್ಕಳಿಗೂ ವಿಮಾನದ ಪ್ರಯಾಣದ ಅನುಭವ ಮಾಡಿಸಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಶಿಕ್ಷಕ ಕೆ.ಎ.ಧಡೂತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>