<p>ತೇರದಾಳ: ಪಟ್ಟಣದ ಅಲ್ಲಮಪ್ರಭು ದೇವರ ದ್ವಾರಬಾಗಿಲ ಬಳಿಯಿರುವ ವಿಠ್ಠಲ ಮಂದಿರದಲ್ಲಿ ಸಂತ ಶಿರೋಮಣಿ ನಾಮದೇವ ಸಿಂಪಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಐದು ದಿನಗಳ ಕಾಲ ಜರುಗಿದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಗುರುವಾರ ನಗರ ಪ್ರದಕ್ಷಿಣೆಯೊಂದಿಗೆ ಸಂಪನ್ನಗೊಂಡಿತು.</p>.<p>ಸಪ್ತಾಹದ ನಾಲ್ಕು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹರಿಪಾಠ, ಸಂಜೆ 6 ಗಂಟೆಗೆ ಪ್ರವಚನ, 7.30ಕ್ಕೆ ಕೀರ್ತನ ಜರುಗಿತು. ಗುರುವಾರ ಬೆಳಿಗ್ಗೆ ಪಲ್ಲಕ್ಕಿ ಸಮೇತ ದಿಂಡಿ ನಗರ ಪ್ರದಕ್ಷಿಣೆ ಜರುಗಿತು. ವಿಠ್ಠಲ ಮಂದಿರದಿಂದ ಅಲ್ಲಮಪ್ರಭು ದೇವಸ್ಥಾನ , ಸಿದ್ದೇಶ್ವರ ದೇವಸ್ಥಾನ, ಮಲ್ಲಿಕಾಜರ್ುನ ಗುಡಿ, ಜವಳಿ ಬಜಾರ, ಪೇಟೆ ಮಧ್ಯಭಾಗ, ಕನ್ನಡ ಶಾಲೆ, ವಿನಾಯಕ ಮಂದಿರ ಮಾರ್ಗವಾಗಿ ಮರಳಿ ವಿಠ್ಠಲ ಮಂದಿರ ಸೇರಿತು. ಮಾರ್ಗಮಧ್ಯದ ಪೇಟೆ ಮಧ್ಯಭಾಗದಲ್ಲಿ ಬಾರೂಡ ಎಂಬ ಭಕ್ತಿ ಪ್ರಧಾನ ಮನರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತರು ದಾರಿಗೆ ರಂಗೋಲಿ ಹಾಕಿ ದಿಂಡಿ ಸ್ವಾಗತಿಸಿದರು. ಸಂತರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ವಾರಕರಿ ಸಂತರು, ಭಕ್ತರು, ಸಮಾಜದ ಮಹಿಳೆಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಗಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಠ್ಠಲ ಭಜನೆ ಮಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-19-498806765</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೇರದಾಳ: ಪಟ್ಟಣದ ಅಲ್ಲಮಪ್ರಭು ದೇವರ ದ್ವಾರಬಾಗಿಲ ಬಳಿಯಿರುವ ವಿಠ್ಠಲ ಮಂದಿರದಲ್ಲಿ ಸಂತ ಶಿರೋಮಣಿ ನಾಮದೇವ ಸಿಂಪಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಐದು ದಿನಗಳ ಕಾಲ ಜರುಗಿದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಗುರುವಾರ ನಗರ ಪ್ರದಕ್ಷಿಣೆಯೊಂದಿಗೆ ಸಂಪನ್ನಗೊಂಡಿತು.</p>.<p>ಸಪ್ತಾಹದ ನಾಲ್ಕು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹರಿಪಾಠ, ಸಂಜೆ 6 ಗಂಟೆಗೆ ಪ್ರವಚನ, 7.30ಕ್ಕೆ ಕೀರ್ತನ ಜರುಗಿತು. ಗುರುವಾರ ಬೆಳಿಗ್ಗೆ ಪಲ್ಲಕ್ಕಿ ಸಮೇತ ದಿಂಡಿ ನಗರ ಪ್ರದಕ್ಷಿಣೆ ಜರುಗಿತು. ವಿಠ್ಠಲ ಮಂದಿರದಿಂದ ಅಲ್ಲಮಪ್ರಭು ದೇವಸ್ಥಾನ , ಸಿದ್ದೇಶ್ವರ ದೇವಸ್ಥಾನ, ಮಲ್ಲಿಕಾಜರ್ುನ ಗುಡಿ, ಜವಳಿ ಬಜಾರ, ಪೇಟೆ ಮಧ್ಯಭಾಗ, ಕನ್ನಡ ಶಾಲೆ, ವಿನಾಯಕ ಮಂದಿರ ಮಾರ್ಗವಾಗಿ ಮರಳಿ ವಿಠ್ಠಲ ಮಂದಿರ ಸೇರಿತು. ಮಾರ್ಗಮಧ್ಯದ ಪೇಟೆ ಮಧ್ಯಭಾಗದಲ್ಲಿ ಬಾರೂಡ ಎಂಬ ಭಕ್ತಿ ಪ್ರಧಾನ ಮನರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತರು ದಾರಿಗೆ ರಂಗೋಲಿ ಹಾಕಿ ದಿಂಡಿ ಸ್ವಾಗತಿಸಿದರು. ಸಂತರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ವಾರಕರಿ ಸಂತರು, ಭಕ್ತರು, ಸಮಾಜದ ಮಹಿಳೆಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಗಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಠ್ಠಲ ಭಜನೆ ಮಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-19-498806765</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>