<p><strong>ಬಾಗಲಕೋಟೆ</strong>: ರನ್ನ ಪ್ರತಿಷ್ಠಾನ, ಪಿ.ಬಿ. ದುತ್ತರಗಿ ಟ್ರಸ್ಟ್ನೊಂದಿಗೆ ಮತ್ತೊಂದು ಟ್ರಸ್ಟ್ ಹಾಗೂ ಪ್ರತಿಷ್ಠಾನ ಸೇರಿಕೊಂಡಿವೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಗರಿಗೆದರಲಿವೆ.</p>.<p>ನಾಟಕಕಾರ ಪಿ.ಬಿ.ದುತ್ತರಗಿ ಹೆಸರಿನಲ್ಲಿರುವ ಟ್ರಸ್ಟ್ನೊಂದಿಗೆ ಮತ್ತಿತರರು ನಾಟಕಕಾರರಾದ ಕಂದಗಲ್ ಹನುಮಂತರಾಯ, ಚಿತ್ತರಗಿಯ ಗಂಗಾಧರ ಶಾಸ್ತ್ರಿ ಹೆಸರಿನಲ್ಲಿ ಟ್ರಸ್ಟ್ ಹಾಗೂ ಪ್ರತಿಷ್ಠಾನ ರಚನೆ ಮಾಡಲಾಗಿದೆ.</p>.<p>ವೃತ್ತಿ ರಂಗಭೂಮಿಗೆ ಹೆಸರಾದ ಜಿಲ್ಲೆ ಬಾಗಲಕೋಟೆ. ಅಲ್ಲಿ ಈಗ ಮೂರು ವ್ಯಕ್ತಿಗಳ ಹೆಸರಿನಲ್ಲಿ ಟ್ರಸ್ಟ್, ಪ್ರತಿಷ್ಠಾನಗಳಾಗಿರುವುದರಿಂದ ಅವರ ಜೀವನ, ನಾಟಕಗಳ ಅಧ್ಯಯನದ ಜತೆಗೆ ವೃತ್ತಿ ರಂಗಭೂಮಿಗೂ ಪುನಃಶ್ಚೇತನ ನೀಡುವ ಕೆಲಸ ಆಗಬೇಕಿದೆ.</p>.<p>ಹನುಮಂತರಾಯರ ಹಾಗೂ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಸದ್ಯಕ್ಕೆ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಕಚೇರಿಯಾಗಿರಲಿದೆ. ಈಗಾಗಲೇ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ. ಹನುಮಂತರಾಯರ ಪ್ರತಿಷ್ಠಾನಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಬೇಕಿದೆ.</p>.<p>ಈಗಾಗಲೇ ಅಸ್ತಿತ್ವದಲ್ಲಿರುವ ರನ್ನ ಪ್ರತಿಷ್ಠಾನ, ದುತ್ತರಗಿ ಟ್ರಸ್ಟ್ನಿಂದ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ. ಹಲವಾರು ವರ್ಷಗಳಿಂದ ಬಿಡುಗಡೆಯಾಗಿದ್ದ ಅನುದಾನ ಹಾಗೆಯೇ ಉಳಿದಿತ್ತು. ಪ್ರತಿ ತಿಂಗಳು ಅವರ ಸಾಹಿತ್ಯ, ನಾಟಕಗಳ ಕುರಿತು ಚರ್ಚೆ, ವಿಚಾರಗೋಷ್ಠಿ, ಶಾಲೆಗಳಲ್ಲಿ ಮಕ್ಕಳಿಗೆ ಸ್ಪರ್ಧೆ, ನಾಟಕಗಳ ಪ್ರದರ್ಶನದ ಕೆಲಸಗಳು ಆಗಬೇಕಿವೆ.</p>.<p>ಇತ್ತೀಚಿನ ದಿನಗಳಲ್ಲಿ ಟ್ರಸ್ಟ್, ಪ್ರತಿಷ್ಠಾನಕ್ಕೆ ಬರುವ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಹೊಸ ಟ್ರಸ್ಟ್, ಪ್ರತಿಷ್ಠಾನಕ್ಕೂ ಬೇಗನೆ ಅನುದಾನ ನೀಡಿ ಚಟುವಟಿಕೆಗಳು ಆರಂಭವಾಗಲಿ ಎಂಬುದು ಅಭಿಮಾನಿಗಳ ಬಯಕೆ.</p>.<p><strong>ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ</strong></p><p>ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ನಲ್ಲಿ 1896ರಲ್ಲಿ ಜನಿಸಿದರು. ಮುಂದೆ ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂದಗಲ್ ಹನುಮಂತರಾಯರನ್ನು ಕನ್ನಡ ರಂಗಭೂಮಿಯ ಶೇಕ್ಸ್ಪಿಯರ್ ಎಂದೇ ಕರೆಯಲಾಗುತ್ತದೆ.</p><p>ಅವರು ರಚಿಸಿದ ರಕ್ತರಾತ್ರಿ, ಕುರುಕ್ಷೇತ್ರ, ಅಕ್ಷಯಾಂಬರ, ಚಿತ್ರಾಂಗದ ನಾಟಕಗಳನ್ನು ಹಳ್ಳಿ, ಹಳ್ಳಿಗಳಲ್ಲಿ ಪ್ರದರ್ಶನಗೊಂಡಿದ್ದವು. ಅಷ್ಟೊಂದು ಪ್ರಸಿದ್ಧಿ ಪಡೆದಿದ್ದವು. ಈಗಲೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಲೇ ಇವೆ.</p><p>ಲಲಿತ ನಾಟ್ಯ ಸಂಗೀತ ಮಂಡಳಿ ಕಟ್ಟಿ ಕೈಸುಟ್ಟುಕೊಂಡರು. ನಂತರದಲ್ಲಿ ಅರವಿಂದ ಸಂಗೀತ ನಾಟ್ಯ ಮಂಡಳಿ ಎಂಬ ನಾಟಕ ಕಂಪನಿ ಕಟ್ಟಿದರು. ಕಂಪನಿಗಳಿಗಾಗಿ ಮಾಡಿಕೊಂಡಿದ್ದ ಸಾಲ ತೀರಿಸದ್ದಕ್ಕೆ ಸಾಲಕೊಟ್ಟವರು ಜೈಲು ಸೇರುವಂತೆ ಮಾಡಿದ್ದರು.</p><p>ಬಾಲ್ಯದಿಂದಲೇ ಅವರಿಗೆ ಸಂಗೀತ, ನಾಟಕಗಳ ಬಗೆಗೆ ಆಸಕ್ತಿ ಇತ್ತು. ಆದರೆ, ಕುಟುಂಬದವರ ಒತ್ತಾಸೆಯಂತೆ ಪುಣೆಗೆ ತೆರಳಿದ ಅವರು, ಮಿಲಿಟರಿಯಲ್ಲಿ ಕಾರಕೂನರಾಗಿದ್ದರು. ಅಲ್ಲಿಯೂ ನಾಟಕದ ಚಟುವಟಿಕೆಗಳನ್ನು ಮುಂದುವರೆಸಿದ್ದರು. ನಂತರ ತಾಯಿ ಅನಾರೋಗ್ಯದ ಕಾರಣ ಮತ್ತೆ ಮರಳಿದರು. </p><p>ಸಂಧ್ಯಾರಾಗ, ವರಪ್ರದಾನ, ಅಕ್ಷಯಾಂಭರ, ಜ್ವಾಲೆ, ಬಡತನದ ಭೂತ ನಾಟಕಗಳನ್ನು ಬರೆದು, ತಮ್ಮದೇ ನಾಟಕಗಳ ಕಂಪನಿ ಮೂಲಕ ಆಡಿಸಿದರು. ರಕ್ತರಾತ್ರಿ ನಾಟಕ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಿತು. ನಾಟಕ ಆಡಿದವರೆಲ್ಲ ಹಣ ಸಂಪಾದನೆ ಮಾಡಿದರು. ಆದರೆ, ಅದರ ಲಾಭ ರಾಯರಿಗೆ ದೊರೆಯಲಿಲ್ಲ. 1966 ಮೇ 5ರಂದು ನಿಧನರಾದರು.</p><p><strong>ರಂಗಭೂಮಿಗೆ ಚೈತನ್ಯ ತುಂಬಿದ ಗಂಗಾಧರ ಶಾಸ್ತ್ರಿ</strong></p><p>ಕೀರ್ತನಕಾರ, ನಟ, ನಾಟಕಕಾರ, ಕಂಪನಿಯ ಮಾಲೀಕರಾಗಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. 1916ರಲ್ಲಿ ಬಾಗಲಕೋಟೆ ತಾಲ್ಲೂಕಿನ ಶಿರೂರಿನಲ್ಲಿ ಜನಿಸಿದ್ದರು.</p><p>ಕುಮಾರ ವಿಜಯ ನಾಟ್ಯ ಸಂಘ ಎಂಬ ಕಂಪನಿ ನಡೆಸಿದ್ದರು. ಈ ಕಂಪನಿಯಲ್ಲಿ 300 ಜನ ಕಲಾವಿದರು, ಕೆಲಸಗಾರರು ಇದ್ದರು. ಇದರಿಂದ ಉತ್ತೇಜಿತರಾದ ಅವರು ಮೂರು ಕಂಪನಿಗಳನ್ನು ಪ್ರಾರಂಭಿಸಿದ್ದರು. ಕುಮಾರ ವಿಜಯ ನಾಟ್ಯ ಸಂಘ ರಂಗಭೂಮಿಗೆ ಹೊಸ ಚೈತನ್ಯವನ್ನೇ ನೀಡಿತ್ತು.</p><p>ಸೌಭಾಗ್ಯ ಲಕ್ಷ್ಮೀ, ಜೀವನಯಾತ್ರೆ, ಸುಲೋಚನಾ, ಜಗಜ್ಯೋತಿ ಬಸವೇಶ್ವರ, ದೀಪಾವಳಿ, ಯೋಗ ಶಕ್ತಿ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.</p><p>ಶಾಸ್ತ್ರಿ ಅವರು ರಚಿಸಿದ ‘ಸೌಭಾಗ್ಯ ಲಕ್ಷ್ಮಿ’ ಮೂರು ವರ್ಷಗಳ ಕಾಲ ಪ್ರದರ್ಶನಗೊಂಡಿತ್ತು. ಅಂದಿನ ಮುಂಬೈ ಸರ್ಕಾರವು ಈ ನಾಟಕ ಪ್ರದರ್ಶನ ಏರ್ಪಡಿಸಿ, ಅತ್ಯುತ್ತಮ ನಾಟಕ ಪ್ರಶಸ್ತಿ, ₹ 5 ಸಾವಿರ ನೀಡಿತ್ತು. ಜೀವನಯಾತ್ರೆ ನಾಟಕವೂ ಯಶಸ್ವಿಯಾಗಿ ನೂರು ದಿನಗಳ ಪ್ರದರ್ಶನ ಕಂಡಿತ್ತು. 1975ರಲ್ಲಿ ಅವರು ನಿಧನರಾದರು.</p><p>ಪ್ರತಿಷ್ಠಾನದ ಅಧ್ಯಕ್ಷರನ್ನಾಗಿ ಗುರು ಹಿರೇಮಠ, ಸದಸ್ಯರನ್ನಾಗಿ ಶಿವುಕುಮಾರ ಹಿರೇಮಠ, ಅಭಯ ಮನಗೂಳಿ, ಪರಸಪ್ಪ ಬಿಸಲದಿನ್ನಿ, ವಿಜಯಲಕ್ಷ್ಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ವಿಜಯಕುಮಾರ ಕಟಗಿಹಳ್ಳಿಮಠ, ಮಲ್ಲಪ್ಪ ಬಿಸರಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕಾರ್ಯದರ್ಶಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ರನ್ನ ಪ್ರತಿಷ್ಠಾನ, ಪಿ.ಬಿ. ದುತ್ತರಗಿ ಟ್ರಸ್ಟ್ನೊಂದಿಗೆ ಮತ್ತೊಂದು ಟ್ರಸ್ಟ್ ಹಾಗೂ ಪ್ರತಿಷ್ಠಾನ ಸೇರಿಕೊಂಡಿವೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಗರಿಗೆದರಲಿವೆ.</p>.<p>ನಾಟಕಕಾರ ಪಿ.ಬಿ.ದುತ್ತರಗಿ ಹೆಸರಿನಲ್ಲಿರುವ ಟ್ರಸ್ಟ್ನೊಂದಿಗೆ ಮತ್ತಿತರರು ನಾಟಕಕಾರರಾದ ಕಂದಗಲ್ ಹನುಮಂತರಾಯ, ಚಿತ್ತರಗಿಯ ಗಂಗಾಧರ ಶಾಸ್ತ್ರಿ ಹೆಸರಿನಲ್ಲಿ ಟ್ರಸ್ಟ್ ಹಾಗೂ ಪ್ರತಿಷ್ಠಾನ ರಚನೆ ಮಾಡಲಾಗಿದೆ.</p>.<p>ವೃತ್ತಿ ರಂಗಭೂಮಿಗೆ ಹೆಸರಾದ ಜಿಲ್ಲೆ ಬಾಗಲಕೋಟೆ. ಅಲ್ಲಿ ಈಗ ಮೂರು ವ್ಯಕ್ತಿಗಳ ಹೆಸರಿನಲ್ಲಿ ಟ್ರಸ್ಟ್, ಪ್ರತಿಷ್ಠಾನಗಳಾಗಿರುವುದರಿಂದ ಅವರ ಜೀವನ, ನಾಟಕಗಳ ಅಧ್ಯಯನದ ಜತೆಗೆ ವೃತ್ತಿ ರಂಗಭೂಮಿಗೂ ಪುನಃಶ್ಚೇತನ ನೀಡುವ ಕೆಲಸ ಆಗಬೇಕಿದೆ.</p>.<p>ಹನುಮಂತರಾಯರ ಹಾಗೂ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಸದ್ಯಕ್ಕೆ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಕಚೇರಿಯಾಗಿರಲಿದೆ. ಈಗಾಗಲೇ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ. ಹನುಮಂತರಾಯರ ಪ್ರತಿಷ್ಠಾನಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಬೇಕಿದೆ.</p>.<p>ಈಗಾಗಲೇ ಅಸ್ತಿತ್ವದಲ್ಲಿರುವ ರನ್ನ ಪ್ರತಿಷ್ಠಾನ, ದುತ್ತರಗಿ ಟ್ರಸ್ಟ್ನಿಂದ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ. ಹಲವಾರು ವರ್ಷಗಳಿಂದ ಬಿಡುಗಡೆಯಾಗಿದ್ದ ಅನುದಾನ ಹಾಗೆಯೇ ಉಳಿದಿತ್ತು. ಪ್ರತಿ ತಿಂಗಳು ಅವರ ಸಾಹಿತ್ಯ, ನಾಟಕಗಳ ಕುರಿತು ಚರ್ಚೆ, ವಿಚಾರಗೋಷ್ಠಿ, ಶಾಲೆಗಳಲ್ಲಿ ಮಕ್ಕಳಿಗೆ ಸ್ಪರ್ಧೆ, ನಾಟಕಗಳ ಪ್ರದರ್ಶನದ ಕೆಲಸಗಳು ಆಗಬೇಕಿವೆ.</p>.<p>ಇತ್ತೀಚಿನ ದಿನಗಳಲ್ಲಿ ಟ್ರಸ್ಟ್, ಪ್ರತಿಷ್ಠಾನಕ್ಕೆ ಬರುವ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಹೊಸ ಟ್ರಸ್ಟ್, ಪ್ರತಿಷ್ಠಾನಕ್ಕೂ ಬೇಗನೆ ಅನುದಾನ ನೀಡಿ ಚಟುವಟಿಕೆಗಳು ಆರಂಭವಾಗಲಿ ಎಂಬುದು ಅಭಿಮಾನಿಗಳ ಬಯಕೆ.</p>.<p><strong>ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ</strong></p><p>ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ನಲ್ಲಿ 1896ರಲ್ಲಿ ಜನಿಸಿದರು. ಮುಂದೆ ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂದಗಲ್ ಹನುಮಂತರಾಯರನ್ನು ಕನ್ನಡ ರಂಗಭೂಮಿಯ ಶೇಕ್ಸ್ಪಿಯರ್ ಎಂದೇ ಕರೆಯಲಾಗುತ್ತದೆ.</p><p>ಅವರು ರಚಿಸಿದ ರಕ್ತರಾತ್ರಿ, ಕುರುಕ್ಷೇತ್ರ, ಅಕ್ಷಯಾಂಬರ, ಚಿತ್ರಾಂಗದ ನಾಟಕಗಳನ್ನು ಹಳ್ಳಿ, ಹಳ್ಳಿಗಳಲ್ಲಿ ಪ್ರದರ್ಶನಗೊಂಡಿದ್ದವು. ಅಷ್ಟೊಂದು ಪ್ರಸಿದ್ಧಿ ಪಡೆದಿದ್ದವು. ಈಗಲೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಲೇ ಇವೆ.</p><p>ಲಲಿತ ನಾಟ್ಯ ಸಂಗೀತ ಮಂಡಳಿ ಕಟ್ಟಿ ಕೈಸುಟ್ಟುಕೊಂಡರು. ನಂತರದಲ್ಲಿ ಅರವಿಂದ ಸಂಗೀತ ನಾಟ್ಯ ಮಂಡಳಿ ಎಂಬ ನಾಟಕ ಕಂಪನಿ ಕಟ್ಟಿದರು. ಕಂಪನಿಗಳಿಗಾಗಿ ಮಾಡಿಕೊಂಡಿದ್ದ ಸಾಲ ತೀರಿಸದ್ದಕ್ಕೆ ಸಾಲಕೊಟ್ಟವರು ಜೈಲು ಸೇರುವಂತೆ ಮಾಡಿದ್ದರು.</p><p>ಬಾಲ್ಯದಿಂದಲೇ ಅವರಿಗೆ ಸಂಗೀತ, ನಾಟಕಗಳ ಬಗೆಗೆ ಆಸಕ್ತಿ ಇತ್ತು. ಆದರೆ, ಕುಟುಂಬದವರ ಒತ್ತಾಸೆಯಂತೆ ಪುಣೆಗೆ ತೆರಳಿದ ಅವರು, ಮಿಲಿಟರಿಯಲ್ಲಿ ಕಾರಕೂನರಾಗಿದ್ದರು. ಅಲ್ಲಿಯೂ ನಾಟಕದ ಚಟುವಟಿಕೆಗಳನ್ನು ಮುಂದುವರೆಸಿದ್ದರು. ನಂತರ ತಾಯಿ ಅನಾರೋಗ್ಯದ ಕಾರಣ ಮತ್ತೆ ಮರಳಿದರು. </p><p>ಸಂಧ್ಯಾರಾಗ, ವರಪ್ರದಾನ, ಅಕ್ಷಯಾಂಭರ, ಜ್ವಾಲೆ, ಬಡತನದ ಭೂತ ನಾಟಕಗಳನ್ನು ಬರೆದು, ತಮ್ಮದೇ ನಾಟಕಗಳ ಕಂಪನಿ ಮೂಲಕ ಆಡಿಸಿದರು. ರಕ್ತರಾತ್ರಿ ನಾಟಕ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಿತು. ನಾಟಕ ಆಡಿದವರೆಲ್ಲ ಹಣ ಸಂಪಾದನೆ ಮಾಡಿದರು. ಆದರೆ, ಅದರ ಲಾಭ ರಾಯರಿಗೆ ದೊರೆಯಲಿಲ್ಲ. 1966 ಮೇ 5ರಂದು ನಿಧನರಾದರು.</p><p><strong>ರಂಗಭೂಮಿಗೆ ಚೈತನ್ಯ ತುಂಬಿದ ಗಂಗಾಧರ ಶಾಸ್ತ್ರಿ</strong></p><p>ಕೀರ್ತನಕಾರ, ನಟ, ನಾಟಕಕಾರ, ಕಂಪನಿಯ ಮಾಲೀಕರಾಗಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. 1916ರಲ್ಲಿ ಬಾಗಲಕೋಟೆ ತಾಲ್ಲೂಕಿನ ಶಿರೂರಿನಲ್ಲಿ ಜನಿಸಿದ್ದರು.</p><p>ಕುಮಾರ ವಿಜಯ ನಾಟ್ಯ ಸಂಘ ಎಂಬ ಕಂಪನಿ ನಡೆಸಿದ್ದರು. ಈ ಕಂಪನಿಯಲ್ಲಿ 300 ಜನ ಕಲಾವಿದರು, ಕೆಲಸಗಾರರು ಇದ್ದರು. ಇದರಿಂದ ಉತ್ತೇಜಿತರಾದ ಅವರು ಮೂರು ಕಂಪನಿಗಳನ್ನು ಪ್ರಾರಂಭಿಸಿದ್ದರು. ಕುಮಾರ ವಿಜಯ ನಾಟ್ಯ ಸಂಘ ರಂಗಭೂಮಿಗೆ ಹೊಸ ಚೈತನ್ಯವನ್ನೇ ನೀಡಿತ್ತು.</p><p>ಸೌಭಾಗ್ಯ ಲಕ್ಷ್ಮೀ, ಜೀವನಯಾತ್ರೆ, ಸುಲೋಚನಾ, ಜಗಜ್ಯೋತಿ ಬಸವೇಶ್ವರ, ದೀಪಾವಳಿ, ಯೋಗ ಶಕ್ತಿ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.</p><p>ಶಾಸ್ತ್ರಿ ಅವರು ರಚಿಸಿದ ‘ಸೌಭಾಗ್ಯ ಲಕ್ಷ್ಮಿ’ ಮೂರು ವರ್ಷಗಳ ಕಾಲ ಪ್ರದರ್ಶನಗೊಂಡಿತ್ತು. ಅಂದಿನ ಮುಂಬೈ ಸರ್ಕಾರವು ಈ ನಾಟಕ ಪ್ರದರ್ಶನ ಏರ್ಪಡಿಸಿ, ಅತ್ಯುತ್ತಮ ನಾಟಕ ಪ್ರಶಸ್ತಿ, ₹ 5 ಸಾವಿರ ನೀಡಿತ್ತು. ಜೀವನಯಾತ್ರೆ ನಾಟಕವೂ ಯಶಸ್ವಿಯಾಗಿ ನೂರು ದಿನಗಳ ಪ್ರದರ್ಶನ ಕಂಡಿತ್ತು. 1975ರಲ್ಲಿ ಅವರು ನಿಧನರಾದರು.</p><p>ಪ್ರತಿಷ್ಠಾನದ ಅಧ್ಯಕ್ಷರನ್ನಾಗಿ ಗುರು ಹಿರೇಮಠ, ಸದಸ್ಯರನ್ನಾಗಿ ಶಿವುಕುಮಾರ ಹಿರೇಮಠ, ಅಭಯ ಮನಗೂಳಿ, ಪರಸಪ್ಪ ಬಿಸಲದಿನ್ನಿ, ವಿಜಯಲಕ್ಷ್ಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ವಿಜಯಕುಮಾರ ಕಟಗಿಹಳ್ಳಿಮಠ, ಮಲ್ಲಪ್ಪ ಬಿಸರಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕಾರ್ಯದರ್ಶಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>